ಕಲಬುರಗಿ; ಸಂಗೀತಕ್ಕೆ ಮನುಷ್ಯನ ಮನಸ್ಸನ್ನು ಹದಗೊಳಿಸಿ ಪರಿಪೂರ್ಣತೆಯ ಜೀವನಕ್ಕೆ ಕೊಂಡಯುತ್ತದೆ ಎಂದು ನ್ಯಾಯವಾದಿ ಹಣಮಂತರಾಯ ಎಸ್ ಅಟ್ಟೂರ ಹೇಳಿದರು.
ನಗರದ ಕೆ ಎಚ್ ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ಶ್ರೀದೇವಿ ಸರಸ್ವತಿ ಕಲಾಬಳಗದ ವತಿಯಿಂದ ಹಮ್ಮಿಕೊಂಡಿರುವ ತತ್ವಪದ ಹಾಗೂ ಸಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಸಂಗೀತ ಕಲಾವಿದರಿಗೆ ಆಶ್ರಯ ನೀಡಿ ಸಂಗೀತ ಆಲಿಸುವುದರೊಂದಿಗೆ ಉತ್ತಮವಾದ ಆಡಳಿತ ನಡೆಸುತ್ತಿದ್ದರು.
ಇಂದಿನ ಕಾಲದಲ್ಲಿ ಸಮಾಜ ಹಾಗೂ ಸರ್ಕಾರ ಕಲಾವಿದರಿಗೆ ಆಶ್ರಯ ನೀಡುಬೇಕು. ಕಲಾವಿದರಿಗೆ ಸಹಕಾರ ನೀಡುವುದರೊಂದಿಗೆ ತತ್ವಪದ ಜಾನಪದ ಉಳಿಸುವ ಪ್ರಯತ್ನ ಮಾಡಬೇಕು. ಎಷ್ಟೋ ಜನ ಬಡ ಕಲಾವಿದರು ತಮ್ಮ ಆರ್ಥಿಕ ತೊಂದರೆಯಿಂದ ಕುಟುಂಬ ನಡೆಸುವುದೇ ಕಷ್ಟಕರವಾಗಿದೆ ಕಲಾವಿದರಿಗೆ ಸರ್ಕಾರ ಆರ್ಥಿಕ ನಿರ್ವಹಣೆಗಾಗಿ ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದರೊಂದಿಗೆ ಕಲಾವಿದರ ಬಾಳಿಗೆ ಬೆಳಕಾಗಲಿ. ಕಲಾವಿದರಿಗಾಗಿ ಗ್ಯಾರಂಟಿ ಯೋಜನೆ ಜಾರಿಗೆ ಮಾಡಲಿ ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದ ರಮೇಶ ಕೋರಿಶೆಟ್ಟಿ, ಬಸವಕಲ್ಯಾಣ ತಾಲೂಕಿನ ಖ್ಯಾತ ಸಂಗೀತ ಕಲಾವಿದರಾದ ವಿಠ್ಠಲ ನಿಂಬಾಳೆ ಅಟ್ಟೂರ, ಕಲಾವಿದರಾದ ಬಸವರಾಜ ಕಿಣಗಿ, ವೀರೇಶ ವಿಶ್ವಕರ್ಮ, ರವೀಂದ್ರ ಗುತ್ತೇದಾರ, ಸಂಘದ ಅಧ್ಯಕ್ಷರಾದ ಶರಣು ಸಾಗನೂರ, ಚಂದ್ರಶೇಖರ ಹರವಾಳ, ಅಮೃತ ನಾಯಕ, ಸಂಗಮರಾಯ ಕುಲಕರ್ಣಿ ಸೇರಿದಂತೆ ಬಡಾವಣೆಯ ಜನರು ಉಪಸ್ಥಿತರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…