ಎರಡು ಕಿಡ್ನಿ ವೈಫಲ್ಯ: ಧನಸಹಾಯಕ್ಕಾಗಿ ಪೋಷಕರ ಮನವಿ

ಕಲಬುರಗಿ: ನಗರದ ನಿವಾಸಿಯಾದ ಶ್ರೀ ಅಣ್ಣಾರಾವ ಗವಳಿಯವರ ಮಗಳಾದ ಕುಮಾರಿ ಕೋಮಲ್ ತಂದೆ ಅಣ್ಣಾರಾವ ಗವಳಿ ಇವಳಿಗೆ ಹುಟ್ಟಿನಿಂದಲೂ ಎರಡು ಕಿಡ್ನಿ ವಿಫಲವಾಗಿದ್ದು, ಚಿಕಿತ್ಸೆಗಾಗಿ ಹಣವಿಲ್ಲದೆ ಪೋಷಕರು ಧನಸಹಾಯಕ್ಕಾಗಿ ಪತ್ರಿಕಾ ವರದಿ ಮೂಲಕ ಮನವಿ ಮಾಡಿದ್ದಾರೆ.

ಅಣ್ಣಾರಾವ ಗವಳಿ ಅವರು ಕಲಬುರಗಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಅವರು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 8000/- ರೂಪಾಯಿ ಸಂಭಳವಿದ್ದು, ಅವರು ಸಾಧಾರಣ ಜೀವನ ಮಾಡಿಕೊಂಡು ಬರುತ್ತಿದ್ದಾರೆ. ಅವರಿಗೆ ಒಟ್ಟು ಮೂರು ಜನ ಮಕ್ಕಳಿದ್ದು ಅದರಲ್ಲಿ ಒಬ್ಬಳಾದ ಕುಮಾರಿ ಕೊಮಲ್ ಇವಳಿಗೆ ಹುಟ್ಟಿನಿಂದಲೂ ಕೂಡಾ ಕಿಡ್ನಿ ವೈಪಲ್ಯವಾಗಿದ್ದು, ಅವಳಿಗೆ ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಮಾಡಿಕೊಂಡು ಬರುತ್ತಿದ್ದಾರೆ. ಅವರು ದುಡಿದ ಎಲ್ಲಾ ಹಣವನ್ನು ತನ್ನ ಮಗಳ ಚಿಕಿತ್ಸೆಗಾಗಿ ಭರಿಸಿಕೊಂಡು ಬರುತ್ತಿದ್ದಾರೆ.

ತಮ್ಮ ಇಡೀ ಜೀವನದುದ್ದಕ್ಕೂ ತಾವು ದುಡಿದ ಹಣವಲ್ಲದೆ ಮತ್ತೋಬ್ಬರ ಹತ್ತಿರ ಸಾಲ ತೆಗೆದುಕೊಂಡು ತಮ್ಮ ಮಗಳ ಚಿಕಿತ್ಸೆಗಾಗಿ ಹಣವನ್ನು ಖರ್ಚು ಮಾಡಿದ್ದು ಇದರಿಂದ ಅಣ್ಣರಾವ ಇವರಿಗೆ ಸದ್ಯ 10 ಲಕ್ಷ ರೂಪಾಯಿಗಳ ಸಾಲವು ಸಹ ಆಗಿದ್ದು, ಸಾಲಕ್ಕೆ ಹೆದರದೆ ಜೀವಕ್ಕೆ ಮಹತ್ವಕೊಟ್ಟ ಅವರು ಮಗಳ ಜೀವಕ್ಕಾಗಿ ಹಗಲು ಇರಳು ನಿದ್ದೆ ಇಲ್ಲದೆ ಹೋರಾಟ ಮಾಡುತ್ತಿದ್ದಾರೆ.

ಕುಮಾರಿ ಕೊಮಲ್ ಇವಳಿಗೆ ವಾರದಲ್ಲಿ ಮೂರುಬಾರಿ ಡಯಾಲಿಸಿಸ್ ಮತ್ತು ಮಾತ್ರೆಗಳಿಗಾಗಿ 17500/- ತಿಂಗಳಿಗೆ ಒಟ್ಟು 40000-/ಸಾವಿರ ರೂಪಾಯಿ ಖರ್ಚಾಗುತ್ತಿದ್ದು, ಈ ಹಣ ಭರಿಸಲು ಅವರಿಂದ ಅಸಾಧ್ಯವಾಗಿದ್ದು, ಅವರು ಎನೂ ಮಾಡಬೇಕೆಂದು ತಿಳಿಯದೆ ಸಾಮಾಜಿಕವಾಗಿ, ಪತ್ರಿಕಾ ವರದಿ ಮೂಲಕ, ಮಾಧ್ಯಮದ ಮೂಲಕ ತಮ್ಮ ಮಗಳ ಚಿಕಿತ್ಸೆಗಾಗಿ ಧನ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಕುಮಾರಿ ಕೊಮಲ್ ಅವಳು ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ತನ್ನ ಈ ಕಿಡ್ನಿ ವೈಫಲ್ಯವಾಗಿದ್ದರಿಂದ ಅವಳೂ ಶಾಲೆಗೆ ಹೋಗದೆ ಮನೆಯಲ್ಲಿ ಉಳಿದು ಎರಡು ದಿವಸಕ್ಕೆ ಒಮ್ಮೆ ಆಸ್ಪತ್ರೆಗೆ ಹೋಗಿ ಡಯಾಲಿಸಿಸ್ ಮಾಡಿಸಿಕೊಂಡು ಬಂದು ಮನೆಯಲ್ಲಿ ಇರುತ್ತಾಳೆ.
ಕುಮಾರಿ ಕೋಮಲ ಇವಳ ತಾಯಿಯವರಾದ ಶ್ರೀಮತಿ ಶೀಲಾದೇವಿ ಗಂಡ ಅಣ್ಣಾರಾವ ಗವಳಿ ಅವರು ತಮ್ಮ ಮಗಳ ಚಿಕಿತ್ಸೆಗಾಗಿ ಧನಸಹಾಯ ಮಾಡ ಬಯಸುವ ಧಾನಿಗಳು ಮುಂದೆ ಬರಬೇಕು ಸಹಾಯ ಮಾಡಬಯಸುವ ಧಾನಿಗಳು ಕುಮಾರಿ ಕೋಮಲ್ ಅವರ ತಾಯಿಯವರ ಭ್ಯಾಂಕ ಖಾತೆ ನಂಬರ್:- 13002250023483, IಈSಅ ಕೋಡ್ ನಂ:-CNRB0011300 ಭ್ಯಾಂಕಿನ ಹೆಸರು : ಕೇನರಾ ಬ್ಯಾಂಕ,Account Holder Name:- Sheeladevi  ಹಾಗೂ ಪೋನ್ ಪೇ ನಂ 7411015673 ಗೆ ಕೈಲಾದಷ್ಟು ಮಟ್ಟಿಗೆ ಧನ ಸಹಾಯ ಮಾಡಬೇಕೆಂದು ಕೋರಿದ್ದಾರೆ.

ಅದೇರೀತಿಯಾಗಿ ಜನಪ್ರತಿನಿಧಿಗಳಿಂಗಲೂ, ಸರಕಾರದಿಂದ ಸಂಭಂದ ಪಟ್ಟ ಸಚೀವರಿಂದಲೂ ಸಹಾಯ ಮಾಡಿ ತಮ್ಮ ಮಗಳ ಚಿಕಿತ್ಸೆಯನ್ನು ಸುಗಮಗೋಳಿಸಬೇಕೆಂದು ಮನವಿ ಮಾಡಿದ್ದಾರೆ.

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

1 hour ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

2 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

2 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

2 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

2 hours ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420