ಸೂಗೂರೇಶ್ವರ ಮಠದ ಜಾತ್ರೆ ಅಂಗವಾಗಿ ಸಂಗೀತ ದರ್ಬಾರ್ ಕಾರ್ಯಕ್ರಮ

ಸುರಪುರ: ಸಂಗೀತ ಕೇಳುವುದರಿಂದ ಮನುಷ್ಯನ ಮನಸ್ಸು ಉಲ್ಲಷಿತಗೊಳ್ಳುತ್ತದೆ ಎಂದು ರಂಗಂಪೇಟೆ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷರಾದ ಸೂಗೂರೇಶ ವಾರದ ಹೇಳಿದರು.

ಪಟ್ಟಣದ ಶ್ರೀ ಸುಗೂರೇಶ್ವರ ದೇವಸ್ಥಾನದಲ್ಲಿ 55ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಸಂಗೀತ ಧರ್ಬಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶ್ರೀ ಸುಗುರೇಶ್ವರರ ಶಕ್ತಿಯು ಅನನ್ಯವಾಗಿದೆ, ಸಂಗೀತ ದರ್ಬಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಹರ್ಷ ತಂದಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣಬಸಪ್ಪ ಯಾಳವಾರ ಅವರು ಮಾತನಾಡಿ, ಸುರಪುರದಲ್ಲಿ ಪ್ರಪ್ರಥಮ ಸಂಗೀತ ಪಾಠಶಾಲೆಯನ್ನು ಪ್ರಾರಂಭಿಸುವ ಮೂಲಕ ಸಗರನಾಡಿನಲ್ಲಿ ಸಂಗೀತದ ಪರಿಮಳ ಹರಡಲು ಲಿಂಗೈಕ್ಯ ಚನ್ನಮಲ್ಲಯ್ಯ ಸ್ವಾಮಿ ಬಳ್ಳುಂಡಗಿ ಮಠ ಅವರ ಶ್ರಮ ಅಪಾರವಾಗಿದ್ದು ಮುಂಗಾರು ಬಿತ್ತನೆಯ ಸಮಯ ಕೋರಿಗೆಗೆ ಉಡಿ ತುಂಬುವ ಸಂದರ್ಭದಲ್ಲಿ ಕೂರಿಗೆಗೆ ಪೂಜೆ ಮಾಡಿ ಬಿತ್ತನೆ ಮಾಡುವ ಸಂದರ್ಭಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದುದು ಈ ನಾಡಿನ ಹೆಮ್ಮೆ ಎಂದರು. ಸಂಗೀತ ಆಲಿಸುವುದರಿಂದ ಮನುಷ್ಯನಿಗೆ ಬರುವ ರೋಗಗಳನ್ನು ತಡೆಗಟ್ಟಬಹುದಾಗಿದೆ ಕೆಲವೊಂದು ಸಂದರ್ಭದಲ್ಲಿ ವೈದ್ಯರು ಕೂಡ ಶಾಸ್ತ್ರೀಯ ಸಂಗೀತವನ್ನು ಆಲಿಸಲು ಸಲಹೆ ನೀಡುತ್ತಾರೆ ಎಂಬುದು ಗಮನಾರ್ಹ ಸಂಗತಿ ಎಂದು ಹೇಳಿದರು.

ಅತಿಥಿಗಳಾಗಿ ಆಗಮಿಸಿದ್ದ ಬಸವರಾಜ ಬಂಟನೂರ ಮತ್ತು ಚೆನ್ನಬಸವರಾಜೇಶ್ವರಿ ಪಾಣಿ ಮಾತನಾಡಿದರು. ಕೊಟ್ರಯ್ಯ ಸ್ವಾಮಿ ಬಳುಂಡಗಿಮಠ ಸಾನಿಧ್ಯ ವಹಿಸಿದ್ದರು. ಸುನಿಲ ಸರಪಟ್ಟಣಶಟ್ಟರು ಅಧ್ಯಕ್ಷತೆ ವಹಿಸಿದ್ದರು. ಶಶಿಕುಮಾರ್ ಬೆನಕನಾಳಮಠ ಶಿವಶರಣಯ್ಯ ಸ್ವಾಮಿ ಬಳುಂಡಗಿಮಠ ಯಮುನೇಶ ಯಾಳಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು

ಶಿವಶರಣಯ್ಯ ಸ್ವಾಮಿ ಬಳ್ಳುಂಡಗಿ ಮಠ ಪ್ರಾರ್ಥನೆ ಮಾಡಿದರು. ಹೆಚ್.ವಾಯ್.ರಾಠೋಡ ನಿರೂಪಿಸಿದರು, ರಮೇಶ್ ಕುಲಕರ್ಣಿ ಸ್ವಾಗತಿಸಿದರು, ವಿನೋದ ಬಳುಂಡಗಿಮಠ ವಂದಿಸಿದರು.

ಮಾಜಿ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯರಾದ ಬಸವರಾಜ ಬಂಟನೂರ ಅವರ ಅಧ್ಯಕ್ಷತೆಯಲ್ಲಿ ಸಂಗೀತ ದರ್ಬಾರ್ ಕಾರ್ಯಕ್ರಮದ ಜರುಗಿತು. ಸಂಗೀತ ಕಲಾವಿದರಾದ ಶಿವಶರಣಯ್ಯಸ್ವಾಮಿ ಬಳ್ಳುಂಡಗಿ ಮಠ, ಪ್ರಾಣೇಶ್ ರಾವ್ ಕುಲಕರ್ಣಿ, ಮೋಹನ್ ರಾವ್ ಮಾಳದಕರ, ಯಮುನೇಶ ಯಾಳಗಿ, ಶರಣಕುಮಾರ್ ಯಾಳಗಿ, ದೀಪಕ್ ಸಿಂಗ್ ಹಜಾರೆ ತಾಳಿಕೋಟೆ, ಶಂಕರ್ ಅಲ್ಲೂರ, ಉಮೇಶ್ ಯಾದವ್ ರಂಗಂಪೇಟೆ, ಪ್ರಿಯಾಂಕ ವಿಶ್ವಕರ್ಮ, ಶರಣಬಸವ ಕೊಂಗಂಡಿ, ಶಿವಲಿಂಗಯ್ಯ ಸ್ವಾಮಿ ಬಳ್ಳುಂಡಗಿ ಮಠ,ಸೂಗಮ್ಮ ಕೊಂಗಂಡಿ ಅನನ್ಯ ಸ್ಥಾವರಮಠ, ಭೂಮಿಕಾ ಸ್ಥಾವರಮಠ, ಅಕ್ಷರ ಮಠ, ದೀಪಿಕಾ ಸ್ಥಾವರ ಮಠ, ಪ್ರಗತಿ, ಮನೋಜ್ ವಿಶ್ವಕರ್ಮ, ಮಹಾಂತೇಶ ಶಹಪೂರಕರ್ ಹಸನಾಪುರ, ಜಗದೀಶ ಮಾನು, ಶರಣಪ್ಪ ಕಮ್ಮಾರ, ಶರಣಕುಮಾರ ತಾಳಿಕೋಟಿ, ಪ್ರಭುಗೌಡ ದೇವಾಪುರ, ಸೋಮಶೇಖರ ಅಕ್ಕಿ, ವೀರೇಶ ಬಡಿಗೇರ, ಜಗದೀಶ ಪತ್ತಾರ,ಗೀತ ಗಾಯನಕ್ಕೆ ಈಶ್ವರ್ ಬಡಿಗೇರ್, ರಾಜಶೇಖರ್ ಗೆಜ್ಜಿ, ಉಮೇಶ್ ಯಾದವ್, ಸುರೇಶ್ ಅಂಬುರೆ, ರಮೇಶ ಕುಲಕರ್ಣಿ ತಬಲಾ ಸಾಥ್ ನೀಡಿದರು.

ಪ್ರಮುಖರಾದ ರಾಜು ಲಡ್ಡಾ, ಚಂದ್ರಶೇಖರ ಆಜಾದ್, ಸಿದ್ದಲಿಂಗಯ್ಯ ಸ್ವಾಮಿ ಕಡ್ಲಪ್ಪ ಮಠ, ಸುಗೂರೇಶ ಮಡ್ಡಿ, ಚಂದ್ರಕಾಂತ ಬಳುಂಡಗಿಮಠ, ಶಿವಶರಣಬಸವ ದಿಗ್ಗಾವಿ, ಸುನಿಲ್ ಮಡ್ಡಿ, ಆನಂದ ಗಡಗಡೆ,ಶ್ರೀಕಾಂತ ದಿಗ್ಗಾವಿ,ಓಂಪ್ರಕಾಶ ಗಡಗಡೆ ಸೇರಿದಂತೆ ಹಲವಾರು ಭಕ್ತವೃಂದದವರು ಉಪಸ್ಥಿತರಿದ್ದರು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

9 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

9 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

9 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420