ಬಿಸಿ ಬಿಸಿ ಸುದ್ದಿ

ಸರಕಾರಿ ಅಂಧ ಬಾಲಕರ ಶಾಲೆಯ ಆವರಣಕ್ಕೆ ನುಗ್ಗಿ ಅಂಧ ವಾರ್ಡನ್ ಗೆ ಕೊಲೆ ಬೆದರಿಕೆ ಆರೋಪ

ಕಲಬುರಗಿ: ಇಲಾಖಾ ವ್ಯಪ್ತಿಯಲ್ಲಿ ಗೌರವಧನ ಆಧಾರದ ಮೇಲೆ ಕಾಯ೯ನಿವ೯ಹಿಸುತ್ತಿರುವ ವಿಕಲಚೇತನರ ನಗರ ಪುನವ೯ಸತಿ ಕಾಯ೯ಕತ೯ ಹಾಗೂ ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಜಿ ಮೇಟಿ ಅವರು ಇಲ್ಲಿನ ಸರಕಾರಿ ಅಂಧ ಪ್ರೌಢಯ ಆವರಣಕ್ಕೆ ನುಗ್ಗಿ ಹಾಸ್ಟೆಲ್ ವಾರ್ಡನ್ ಮತ್ತು ಶಾಲಾ ಸಿಬ್ಬಂದಿಗಳ ಸಮ್ಮುಖದಲ್ಲಿ ಅವ್ಯಾಚ್ಚ ಪದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ರಂಪಾಟ ಮಾಡಿರುವ ಘಟನೆ ಸೋಮವಾರ ನಡೆದಿದ್ದು. ವಿಡಿಯೋ ವೈರಲ್ ಆಗಿದೆ.

ನಗರದ ಐವನ್ ಶಾಹಿ ಪ್ರದೇಶದಲ್ಲಿ ಇರುವ ಸರಕಾರಿ ಅಂಧ ಬಾಲಕರ ಪ್ರೌಢ ಶಾಲೆಯ ಕಾರ್ಯನಿರತ ಸಿಬ್ಬಂದಿ ಹಾಗೂ ಅಂಧ ಹಾಸ್ಟಲ್ ವಾರ್ಡನ್ ಸೇರಿ ಶಾಲಾ ಮಕ್ಕಳಿ ಎದುರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿ ಸಿಬ್ಬಂದಿ ಹಾಗೂ ಮಕ್ಕಳಿಗಳಿಗೆ ಭಯದ ವಾತವರಣ ನಿರ್ಮಿಸಿರುವ ಮೇಟಿ ಅವರ ಬಂಧನಕ್ಕೆ ಶಾಲಾ ಸಿಬ್ಬಂದಿಗಳು ಆಗ್ರಹಿಸಿದ್ದಾರೆ.

ಘಟನೆಯ ವಿವರ: ಅಂಗವಿಕಲರ ಕಲ್ಯಾಣ ಇಲಾಖಾ ವ್ಯಪ್ತಿಯಲ್ಲಿ ಗೌರವಧನ ಆಧಾರದ ಮೇಲೆ ಕಾಯ೯ನಿವ೯ಹಿಸುತ್ತಿರುವ ವಿಕಲಚೇತನರ ನಗರ ಪುನವ೯ಸತಿ ಕಾಯ೯ಕತ೯ ಹಾಗೂ ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಜಿ ಮೇಟಿ ಮತ್ತು ದತ್ತಾತ್ರೇಯ ಕುಡಕಿ ದುಷಚಟಕ್ಕೆ ಬಲಿಯಾದ ನಾಲ್ವರು ಬಾಲಕರಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಸುದ್ದಿಗೊಷ್ಠಿಯಲ್ಲಿ ಒತ್ತಾಯಿಸಿ ಪ್ರತಿಭಟನೆ ಎಚ್ಚರಿಕೆ ನೀಡಿರುವ ವಿಚಾರವಾಗಿ ಸೋಮವಾರ ಶಾಲೆಯ ಆವರಣದೊಳಗೆ ಪ್ರವೇಶಿಸಿದಾಗ ಶಾಲಾ ಮಕ್ಕಳು ನಾಲ್ವರ ಬಾಲಕರ ದುಷಚಟಗಳನ್ನು ಹೇಳುತ್ತಿದ್ದಾಗ ಅಂಬಾಜಿ ಮೇಟಿ ಉದ್ರೇಕಗೊಂಡು ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿಗಳಿಗೆ ನಿಂದಿಸಿ ದರ್ಪತೊರಿಸಿದ್ದಾರೆ ಎನ್ನಲಾಗಿದೆ.

ಅಲ್ಲದೇ ಶಾಲೆಯ ಅಂಧ ಹಾಸ್ಟೆಲ್ ವಾರ್ಡನ್ ಸರಕಾರಿ ನೌಕರರಾದ ಎಸ್.ಜಗದೀಶ್ ನಾಯಕ ಮತ್ತು ದೈಹಿಕ ಶಿಕ್ಷಕ ಪ್ರಕಾಶ ಭಜಂತ್ರಿಗೆ ಶಾಲೆಯ ಸಮಸ್ತ ಅಂಧ ಶಾಲಾ ಶಿಕ್ಷಕರ ಹಾಗೂ ಸಿಬ್ಬಂದಿಗಳ ಸಮ್ಮುಖದಲ್ಲಿ ನಿಂದಿಸಿ ಹಲ್ಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿರುವುದಾಗಿ ಎಸ್.ಜಗದೀಶ್ ನಾಯಕ ಮತ್ತು ದೈಹಿಕ ಶಿಕ್ಷಕ ಪ್ರಕಾಶ ಇ ಮೀಡಿಯಾ ಲೈನ್ ಸುದ್ದಿ ವಾಹಿನಿಗೆ ಮಾಹಿತಿ ನೀಡಿದ್ದಾರೆ.

ಸರಕಾರಿ ಅಂಧ ನೌಕರರಾದ ನಮಗೆ ಕರ್ತವ್ಯ ನಿರ್ವಹಿಸಲು ಅಡಚಣೆ ಮಾಡುತ್ತಿರುವುದರಿಂದ ದಿನನಿತ್ಯ ಶಾಲೆಗೆ ಬರುಲು ಆತಂಕ ಸೃಷ್ಟಿತಾಗಿದೆ. ಪ್ರಾಣವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಬಂದಿದೆ ಎಂದು ಎಸ್.ಜಗದೀಶ್ ನಾಯಕ ಮತ್ತು ದೈಹಿಕ ಶಿಕ್ಷಕ ಪ್ರಕಾಶ ಆತಂಕ ವ್ಯಕ್ತಪಡಿಸಿದ್ದಾರೆ.

ಘಟನೆಯ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದು ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ದೊಡ್ಡ ದೊಡ್ಡ ರಾಜಕೀಯ ಮುಖಂಡರ ಹಾಗೂ ವಿವಿಧ ಸಂಘಟನೆಗಳ ಹೆಸರು ಹೇಳಿಕೊಂಡು ಇಲಾಖೆಯ ಸಿಬ್ಬಂದಿಗಳಿಗೆ ಬ್ಲಾಕ್ ಮೇಲ್ ಮಾಡುತ್ತಿರುವ ಆರೋಪಗಳು ಇವರ ಮೇಲಿದೆ. ಸಂಘದ ಅಧ್ಯಕ್ಷರಾಗಿರುವುದು ಅನಧಿಕೃತ ಕೆಲಸಕ್ಕಾಗಿ ಬಳಸಿಕೊಳುವ ಮೂಲಕ ಸಿಬ್ಬಂದಿಗಳಿಗೆ ಪ್ರತಿಭಟನೆ ಹೋರಾಟದ ಬೆದರಿಕೆ ಹಾಕಿ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ನೀಡಿ ಕರ್ತವ್ಯಕ್ಕೆ ಅಡ್ಡಿ ಪಡೆಸುತ್ತಿದ್ದಾರೆ. ಘಟನೆ ಕುರಿತು ಮಾಹಿತಿಯನ್ನು ಉನ್ನತ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಮುಂದಿನ ಆದೇಶದಂತೆ ಕ್ರಮಕೈಗೊಳ್ಳಲಾಗುವುದು. – ಸಾದಿಕ್ ಹುಸೇನ್ ಖಾನ್. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕಲಬುರಗಿ.

emedialine

Recent Posts

ನೇಕಾರರ ಸೌಹಾರ್ದ ಸಹಕಾರಿಗೆ ನೂತನ ಪದಾಧಿಕಾರಿಗಳ ನೇಮಕ

ಸುರಪುರ: ತಾಲೂಕ ನೇಕಾರರ ಸೌಹಾರ್ದ ಸಹಕಾರಿಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗಿದೆ. ನಗರದ ತಿಮ್ಮಾಪುರದ ಚೌಡೇಶ್ವರಿ ದೇವಸ್ಥಾನದಲ್ಲಿನ ಸಹಕಾರಿ ಸಂಘದ ಕಚೇರಿಯಲ್ಲಿ…

1 min ago

ರಾಜಕೀಯಕ್ಕಾಗಿ ಮಠಾಧೀಶರು ನೀತಿ ಬಿಟ್ಟು ಜಾತಿವಂತರಾಗಿದ್ದಾರೆ; ಅರ್ಜುನ ಭದ್ರೆ

ಸುರಪುರ: ರಾಜಕೀಯಕ್ಕಾಗಿ ಇಂದು ಕೆಲವು ಮಠಾಧೀಶರು ಮುಖ್ಯಮಂತ್ರಿ ಹುದ್ದೆ ತಮ್ಮ ಜಾತಿ ಅಥವಾ ತಮ್ಮ ಸಮುದಾಯದವರಿಗೆ ನೀಡುವಂತೆ ಬಹಿರಂಗವಾಗಿ ಹೇಳಿಕೆ…

8 mins ago

ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಾಧಕ ರತ್ನ ಪ್ರಶಸ್ತಿ ಪ್ರದಾನ

ಕಲಬುರಗಿ; ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ವತಿಯಿಂದ "ನಮ್ಮ ನಡಿಗೆ, ಹಳ್ಳಿಯ ಕನ್ನಡ ಸರಕಾರಿ ಶಾಲೆಯ ಕಡೆಗೆ" ಎಂಬ…

16 mins ago

ಸಿಯುಕೆಯಲ್ಲಿ ‘ಡೆಕ್ಕನ್ನಿನ ಸೂಫಿ ಸಂಗೀತ ಮತ್ತು ಕಾವ್ಯ’ ಕುರಿತು ವಿಶೇಷ ಉಪನ್ಯಾಸ

ಕಲಬುರಗಿ: “ವಿನಯ, ಉದಾರತೆ, ಪ್ರೀತಿ ಮತ್ತು ವಾತ್ಸಲ್ಯಗಳು ಸೂಫಿ ಸಂತರ ಪ್ರಮುಖ ಬೋಧನೆಗಳಾಗಿವೆ. ಸೂಫಿ ಸಂತ ಮೊಯಿನುದ್ದೀನ್ ಚಿಸ್ತಿ ಅವರು ಸೂರ್ಯನಂತೆ…

23 mins ago

ಗ್ರಾ.ಪಂ ಉಪಾಧ್ಯಕ್ಷ ಚುನಾವಣೆಗೆ ಸಿದ್ದು ಸಜ್ಜನ ಅವಿರೋಧ ಆಯ್ಕೆ

ಶಹಾಬಾದ :ತಾಲೂಕಿನ ತೊನಸನಹಳ್ಳಿ(ಎಸ್) ಗ್ರಾ.ಪಂಯ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಸಿದ್ದು ಸಜ್ಜನ ಅವಿರೋಧ ಆಯ್ಕೆಯಾಗಿದ್ದಾರೆ. ಸಾಮಾನ್ಯ…

30 mins ago

ನಿರುದ್ಯೋಗ ಸಮಸ್ಯೆಯ ವಿರುದ್ಧ ಸಂಘಟಿತ ಆಂದೋಲನ ಕಟ್ಟಬೇಕಾಗಿದೆ

ಶಹಾಬಾದ: ನಿರುದ್ಯೋಗ ಸಮಸ್ಯೆಯಿಂದ ನಮ್ಮ ಯುವಜನತೆ ಇಂದು ದಾರಿ ತಪ್ಪುತ್ತಿದೆ ಇದರ ವಿರುದ್ಧ ಇದರ ವಿರುದ್ದ ಸಂಘಟಿತ ಆಂದೋಲನ ಕಟ್ಟಬೇಕೆಂದು…

35 mins ago