ಕಲಬುರಗಿ (ಚಿತ್ತಾಪುರ): ವೃದ್ಧೆಯೊಬ್ಬಳು ರೈಲು ಹಳಿ ದಾಟುವಾಗಲೇ ರೈಲು ಅಡಿ ಸಿಲುಕಿ ಹಳಿಗಳ ಮಧ್ಯೆ ಮಲಗಿಕೊಂಡು ಅಚ್ಚರಿ ಹಾಗೂ ಪವಾಡ ಸದೃಶ್ಯ ರೀತಿಯಲ್ಲಿ ಕೊನೆಗೂ ಅಜ್ಜಿ ಪಾರಾದ ಘಟನೆ ಜಿಲ್ಲೆಯ ಚಿತ್ತಾಪೂರ್ ಪಟ್ಟಣದ ರೈಲು ನಿಲ್ದಾಣದಲ್ಲಿ ಗಣೇಶ್ ಚತುರ್ಥಿಯ ದಿನವಾದ ಸೋಮವಾರದಂದು ವರದಿಯಾಗಿದೆ.
ಚಿತ್ತಾಪೂರ್ ಸ್ಟೇಷನ್ ತಾಂಡಾದ ನಿವಾಸಿ ಮಾನಿಬಾಯಿ ಚಂದರ್ ಎಂಬ ಅಜ್ಜಿಯೇ ಯಮಲೋಕದ ಬಾಗಿಲು ತಟ್ಟಿ ಸುರಕ್ಷಿತವಾಗಿ ಮರಳಿ ಬಂದ ಅದೃಷ್ಟವಂತೆ.
ಮಾನಿಬಾಯಿ ಗೂಡ್ಸ್ ರೈಲು ಬರುವುದನ್ನು ಗಮನಿಸದೇ ತಾಂಡಕ್ಕೆ ಹೋಗಲು ರೈಲು ಹಳಿ ದಾಟುವಾಗ ದಿಡೀರ್ ಅಂತ ರೈಲು ಪ್ರತ್ಯಕ್ಷವಾಗಿದೆ. ತಕ್ಷಣ ಸ್ಥಳೀಯರು ಆಕೆಯನ್ನು ರಕ್ಷಿಸಲು ಕಿರುಚಾಡತೊಡಗಿದರು. ಹಳಿಗಳ ಮಧ್ಯೆ ಮಲಗಿ ಜೀವ ರಕ್ಷಿಸಿಕೊಳ್ಳಲು ಎಲ್ಲರೂ ಕೂಗಿ, ಕೂಗಿ ಹೇಳಿದರು. ಅವರು ಹೇಳಿದಂತೆ ಅಜ್ಜಿ ತನ್ನ ಜೀವ ಉಳಿಸಿಕೊಳ್ಳಲು ರೈಲು ಹಳಿಗಳ ಮಧ್ಯೆ ಮಲಗಿಬಿಟ್ಟಳು. ಒಂದು ಹಂತದಲ್ಲಿ ರೈಲು ಬೋಗಿಗಳು ಒಂದೊಂದೇ ಆಕೆಯನ್ನು ದಾಟಿ ಹೋಗುತ್ತಿದ್ದಾಗ ವೃದ್ಧ ಮಹಿಳೆ ಕತ್ತು ಮೇಲಕ್ಕೆ ಎತ್ತುವುದನ್ನು ಕಂಡ ಸ್ಥಳೀಯರು ರೈಲು ದಾಟುವವರೆಗೂ ಮಿಸುಕಾಡದಿರಲು ಎಚ್ಚರಿಕೆ ಕೊಟ್ಟರು. ಪರಿಣಾಮ ರೈಲು ದಾಟುವವರೆಗೂ ಅಜ್ಜಿ ರೈಲು ಹಳಿಗಳೆರಡರ ಮಧ್ಯೆ ಮಲಗಿದಳು. ಪರಿಣಾಮ ಆಕೆ ಜೀವ ಉಳಿಯಿತು.
ಮಾನಿಬಾಯಿಯ ಪ್ರಾಣ ಕಂಟಕದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಘಟನೆಯಿಂದ ಗಾಬರಿಯಾಗಿದ್ದ ಮಾನಿಬಾಯಿ ನಂತರ ಚೇತರಿಕೊಂಡಿದ್ದಾಳೆ. ಇನ್ನು ಸ್ಟೇಚನ್ನ ಪಕ್ಕದಲ್ಲಿಯೇ ಇರುವ ತಾಂಡಾಕ್ಕೆ ಹೋಗಬೇಕಾದರೆ ಅಲ್ಲಿನ ನಿವಾಸಿಗಳು ನಿತ್ಯ ಪ್ರಾಣ ಪಣಕ್ಕಿಟ್ಟು ರೈಲು ಹಳಿ ದಾಟಬೇಕಾಗಿದೆ. ಮೇಲ್ಸೆತುವೆ ನಿರ್ಮಾಣ ಮಾಡುವಂತೆ ಹಲವು ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಟೇಷನ್ನಿಂದ ತಾಂಡಾ ಸೇರಲು ಈಗಲಾದರೂ ಮೇಲ್ಸೆತುವೆ ನಿರ್ಮಾಣ ಮಾಡುವ ಮೂಲಕ ಅಪಾಯ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ತಾಂಡಾ ನಿವಾಸಿಗಳು ಒತ್ತಾಯಿಸಿದ್ದಾರೆ.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…