ಬಿಸಿ ಬಿಸಿ ಸುದ್ದಿ

ಬೈಲಕುಂಟಿ ದಲಿತ ರೈತನಿಗೆ ನ್ಯಾಯ ನೀಡುವಂತೆ ಪೊಲೀಸ್ ಠಾಣೆ ಮುಂದೆ ಧರಣಿ

ಪರಿಶಿಷ್ಟ ಜಾತಿ ರೈತನ ಜಮೀನಲ್ಲಿ ಕಬ್ಬು ಕಟಾವಿಗೆ ಪೊಲೀಸ್ ಭದ್ರತೆ ನೀಡಿ

ಸುರಪುರ: ಹುಣಸಗಿ ತಾಲೂಕಿನ ಕೊಡೇಕಲ್ ಹೋಬಳಿಯ ಬೈಲಕುಂಟಿ ಗ್ರಾಮದಲ್ಲಿನ ದಲಿತ ಸಮುದಾಯದ ಪರಿಶಿಷ್ಟ ಜಾತಿಗೆ ಸೇರಿದ ರೈತ ಪರಶುರಾಮ ದೊಡ್ಮನಿ ಎನ್ನುವವರಿಗೆ ಸೇರಿದ ಸರ್ವೇ ನಂಬರ್ 62/3ರ ಜಮೀನಿನಲ್ಲಿ ಬೆಳೆದಿರುವ ಕಬ್ಬು ಕಟಾವು ಮಾಡಲು ಬಿಡದೆ ಅಡ್ಡಿಪಡಿಸುತ್ತಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ರೈತನ ಜಮೀನಲ್ಲಿ ಕಬ್ಬು ಕಟಾವಿಗೆ ಪೊಲೀಸ್ ಭದ್ರತೆ ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋ:ಬಿ.ಕೃಷ್ಣಪ್ಪ ಬಣದ ಜಿಲ್ಲಾ ಸಂಚಾಲಕ ನಿಂಗಣ್ಣ ಗೋನಾಲ ಆಗ್ರಹಿಸಿದರು.

ನಗರದ ಪೊಲೀಸ್ ಠಾಣೆಯ ಡಿವೈಎಸ್ಪಿ ಕಚೇರಿ ಮುಂದೆ ಸಂಘಟನೆಯಿಂದ ಧರಣಿ ನಡೆಸಿ ಮಾತನಾಡಿ,ಬೈಲಕುಂಟಿ ಗ್ರಾಮದಲ್ಲಿ ರೈತ ಪರಶುರಾಮನಿಗೆ ವಿನಾಕಾರಣ ತೊಂದರೆ ಮಾಡಲಾಗುತ್ತಿದೆ,ನಾವು ಈಗಾಗಲೇ ಎರಡು ಬಾರಿ ಧರಣಿ ನಡೆಸಿ ಪೊಲೀಸ್ ಭದ್ರತೆ ನೀಡುವಂತೆ ಆಗ್ರಹಿಸಿದ್ದೇವೆ,ಆದರೆ ಪೊಲೀಸ್ ಇಲಾಖೆ ಬಡ ರೈತನ ನೆರವಿಗೆ ಬರುತ್ತಿಲ್ಲ ಎಂದರು.

ಅಲ್ಲದೆ ಪರಶುರಾಮ ಜಮೀನು ಖರಿದಿ ಮಾಡಿದ್ದಾರೆ,ಈಗ ಆತನಿಗೆ ಜಮೀನು ಕೊಟ್ಟವರೆ ಹೊಲದಲ್ಲಿ ಬೆಳೆದಿರುವ ಕಬ್ಬು ಕಟಾವಿಗೆ ಬಿಡದೆ ಕಿರಕುಳ ನೀಡುತ್ತಿದ್ದಾರೆ,ರೈತನಿಗೆ ಭದ್ರತೆ ನೀಡುವಂತೆ ಮನವಿ ಮಾಡಿದರೆ ನಾಲ್ಕು ದಿನಗಳ ಸಮಯ ಕೇಳಿದ್ದ ಡಿವೈಎಸ್ಪಿಯವರು ಈಗ ಸ್ಪಂಧಿಸುತ್ತಿಲ್ಲ,ಆದ್ದರಿಂದ ನಮ್ಮ ಬೇಡಿಕೆ ಈಡೇರಿಸಿ ಪೊಲೀಸ್ ಇಲಾಖೆಯೆ ಕಬ್ಬು ಕಟಾವಿಗೆ ನೆರವಾಗುವ ವರೆಗೆ ಧರಣಿ ನಿಲ್ಲಿಸುವುದಿಲ್ಲ,ಇನ್ನು ನಾಲ್ಕು ದಿನವಾದರೆ ಬೆಳೆದ ಎಲ್ಲಾ ಕಬ್ಬು ಹಾಳಾಗುತ್ತದೆ ಅದಕ್ಕೆ ಪೊಲೀಸ್ ಇಲಾಖೆ ಹೊಣೆಯಾಗಲಿದೆ,ಆದ್ದರಿಂದ ಕೂಡಲೇ ಕಬ್ಬು ಕಟಾವಿಗೆ ಅಡ್ಡಿ ಪಡಿಸುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಕಬ್ಬು ಕಟಾವಿಗೆ ಮುಂದಾಗಬೇಕು ಎಂದು ಪೊಲಿಸರಿಗೆ ಒತ್ತಾಯಿಸಿದರು.ಮತ್ತು ಕೊಡೇಕಲ್ ಠಾಣೆ ಪಿ.ಎಸ್.ಐ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು,

ಸಂಜೆಯವರೆಗೂ ನಡೆದ ಧರಣಿಯಲ್ಲಿ ಮುಖಂಡ ಭೀಮಾಶಂಕರ ಬಿಲ್ಲವ್, ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ನಾಗರಾಜ ಓಕಳಿ,ತಾಲೂಕು ಸಂಚಾಲಕ ರಮೇಶ ಪೂಜಾರಿ,ಸದಾಶಿವ ಬೊಮ್ಮನಹಳಿ,ಶರಣಪ್ಪ ಗುಳಬಾಳ,ಪವಡಪ್ಪ ಕಕ್ಕೇರಾ,ಧರ್ಮಣ್ಣ ಚಿಂಚೋಳಿ,ಮಾನಪ್ಪ ಶೆಳ್ಳಗಿ,ನಾಗು ಗೋಗಿಕೇರ,ಸಾಯಬಣ್ಣ ಕೆಂಭಾವಿ,ಭೀಮಣ್ಣ ಅಡ್ಡೊಡಗಿ,ಚಂದ್ರಕಾಂತ ದಿವಳಗುಡ್ಡ,ಚಂದಪ್ಪ ಪತ್ತೆಪುರ,ಅನಿಲ್ ಯಾಳಗಿ ಸೇರಿದಂತೆ ಪರಶುರಾಮ ದೊಡ್ಮನಿ ಕುಟುಂಬಸ್ಥರು ಧರಣಿಯಲ್ಲಿ ಭಾಗವಹಿಸಿದ್ದಾರೆ.

emedialine

Recent Posts

ನ್ಯಾಯವಾದಿ ವಿನೋದ ಕುಮಾರ ಎಸ್. ಜೇ. ನಾಮಪತ್ರ ಸಲ್ಲಿಕೆ

ಕಲಬುರಗಿ: ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗರುವ ಇಂದು 2024-2029 ಸಾಲಿನ, ಜಿಲ್ಲಾ ಘಟಕಕ್ಕೆ…

4 hours ago

13 ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಈ ಕೆಳಕಂಡ 13 ಫಲಾನುಭವಿ ಆಧಾರಿತ…

5 hours ago

ಕಾರ್ಮಿಕರ ಸಚಿವರ ಕಲಬುರಗಿ ಪ್ರವಾಸ ರದ್ದು

ಕಲಬುರಗಿ: ರಾಜ್ಯದ ಕಾರ್ಮಿಕ ಸಚಿವರಾದ ಸಂತೋಷ ಎಸ್. ಲಾಡ್ ಅವರು ಜುಲೈ 5 ರಂದು ಶುಕ್ರವಾರ ಕೈಗೊಳ್ಳಬೇಕಿದ್ದ ಕಲಬುರಗಿ ಜಿಲ್ಲಾ…

5 hours ago

ರಾಜ್ಯ-ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಾಶಿ ಮಾದರಿಯಲ್ಲಿ ದತ್ತನ‌ ಕ್ಷೇತ್ರ ಅಭಿವೃದ್ಧಿ

ಕರ್ನಾಟಕ‌ ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ ಕೇಂದ್ರಕ್ಕೆ ಸಮಿತಿ ನಿಯೋಗ ತೆರಳಲು ನಿರ್ಧಾರ ಕಲಬುರಗಿ;…

5 hours ago

ಚಿಂಚೋಳಿ: ಶರಣು ಪಾಟೀಲ್ ಮೋತಕಪಲ್ಲಿ ನಾಮಪತ್ರ ಸಲ್ಲಿಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆ ಚಿಂಚೋಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಗೆ ಇದೆ 21 ರಂದು…

6 hours ago

ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ತಿದ್ದು ಪಡಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊರಗುತ್ತಿಗೆ ನೇಮಕಾತಿ ಮೀಸಲಾತಿ ಅಳವಡಿಸುವಲ್ಲಿ ಈ ಕೆಳಕಂಡತೆ ತಿದ್ದು ಪಡಿ ಮಾಡಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ,…

6 hours ago