ಚಿತ್ತಾಪುರ: ತಾಲೂಕಿನ ಅಲ್ಲೂರ್ (ಬಿ) ಗ್ರಾಮದಲ್ಲಿರುವ ಮೈಲಾರಲಿಂಗೇಶ್ವರ ದೇವರ ಮೂರನೇ ವರ್ಷದ ಜಾತ್ರೆ, ಪಲ್ಲಕ್ಕಿ ಉತ್ಸವ, ಕಬ್ಬಿಣದ ಸರಪಳಿ ಹರಿಯುವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು. ಮಂದಿರದಲ್ಲಿ ಬೆಳಗ್ಗೆ ಮೈಲಾರಲಿಂಗೇಶ್ವರನ ಕುದುರೆಗಳಿಗೆ ರುದ್ರಾಭಿಷೇಕ ಮಾಡಲಾಯಿತು.
ನಂತರ ಕರಿಬಸವೇಶ್ವರ ಮಂದಿರದಿಂದ ಮೈಲಾರಲಿಂಗೇಶ್ವರ ಮಂದಿರವರೆಗೆ ಮಂಗಳವಾದ್ಯ ಮೇಳದೊಂದಿಗೆ ಭಕ್ತರು ತೆರಳಿ, ಅಲ್ಲಿಂದ ದೇವರ ಪಲ್ಲಕ್ಕಿ ಮತ್ತು ಬೆಳ್ಳಿ ಕುದುರೆಗಳನ್ನು ಗಂಗಾಸ್ನಾನಕ್ಕಾಗಿ ಕೆರೆಯವರೆಗೆ ಅದ್ದೂರಿಯಾಗಿ ಕರೆದೊಯ್ದರು.
ಕುದುರೆ ಸ್ನಾನ ಶುರುವಾಗುತ್ತಿದ್ದಂತೆ ಭಕ್ತರು ಕೆರೆಯಲ್ಲಿ ಮಿಂದು ಭಕ್ತಿ ಮೆರೆದರು. ನಂತರ ಪಲ್ಲಕ್ಕಿ ಮತ್ತು ಮೈಲಾರಲಿಂಗೇಶ್ವರ ದೇವರ ಬೆಳ್ಳಿ ಕುದುರೆಗಳ ಮೆರವಣಿಗೆ ನಡೆಯಿತು. ಮಲ್ಲಣ್ಣ ಕೊರಬಾ ಅವರು ದೇವರ ಬೆಳ್ಳಿ ಕುದುರೆ ಹೊತ್ತುಕೊಂಡು ಮೆರವಣಿಗೆಯಲ್ಲಿ ಸಾಗಿದರು.
ಮಲ್ಲಿಕಾರ್ಜುನ ಕುಂಬಾರ ಪಲ್ಲಕ್ಕಿ ಸೇವೆ ಸಲ್ಲಿಸಿದರು. ಶಿಬಾರ ಕಟ್ಟೆ ಹತ್ತಿರ ಕಬ್ಬಿಣದ ಸರಪಳಿ ಹರಿಯುವ ವ್ಯವಸ್ಥೆ ಮಾಡಲಾಗಿತ್ತು. ಪೂಜಾರಿ ಮಲ್ಲಪ್ಪ ಬೋಳಿ ಅವರು ಸಂಪ್ರದಾಯದಂತೆ ಸರಪಳಿ ಹರಿಯುವ ದೃಶ್ಯವನ್ನು ಜನ ಕಣ್ತುಂಬಿಕೊಂಡರು.
ಸರಪಳಿ ಹರಿಯುವುದು ಮುಗಿಯುತ್ತಿದ್ದಂತೆ ಪಲ್ಲಕ್ಕಿ ಮತ್ತು ದೇವರ ಕುದರೆಗಳನ್ನು ಅಲ್ಲಿಂದ ಮೈಲಾರಲಿಂಗೇಶ್ವರ ಮಂದಿರದ ವರೆಗೆ ಮೆರವಣಿಗೆ ಮಾಡಿ ತರಲಾಯಿತು.
ಸಂಕ್ರಾಂತಿ ಹಬ್ಬದ ದಿನ ಪಲ್ಲಕ್ಕಿ ಉತ್ಸವ ಮಾಡುವುದು ವಿಶೇಷ.
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…
ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೊಗಳ ಸ್ಪರ್ಧೆ 2024 25 ಈಚೆಗೆ ಬೆಂಗಳೂರಿನಲ್ಲಿ ನಡೆದ…