ಕಲಬುರಗಿ ಯುನಿಕಾರ್ನ್ ಆಸ್ಪತ್ರೆಯಿಂದ 160 ಜನರಿಗೆ ಉಚಿತ ಆರೋಗ್ಯ ತಪಾಸಣೆ

ಕಲಬುರಗಿ: ಮಸಜಿದ್ ಎ ದಾಹೆ ಹಲಿಮಾ ಕಮಿಟಿ ಹಾಗೂ ಯುನಿಕಾರ್ನ್ ಆಸ್ಪತ್ರೆಯ ಸಹಯೋಗದಲ್ಲಿ ಭಾನುವಾರ ಇಲ್ಲಿನ ಸೋನಿಯಾ ಗಾಂಧಿ ಆಶ್ರಯ ಕಾಲೋನಿಯಲ್ಲಿ 160 ಜನರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ವಿವಿಧ ಬಡಾವಣೆಗಳಲ್ಲಿ 5ಕ್ಕೂ ಹೆಚ್ಚು ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಿ 1000ಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಮಾಡಿರುವ ಯುನಿಕಾರ್ನ್ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಹಿರಿಯ ವೈದ್ಯರಾದ ಡಾ. ಅಬ್ದುಲ್ ಖಾದರ್ ಜಿಲಾನಿ ಮತ್ತು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಸೋನಿಯಾ ಗಾಂಧಿ ಕಾಲೋನಿಯ ಯುವ ಮುಖಂಡರಾದ ಮೊಹಮ್ಮದ್ ಅಮೇರ್ ಬಾಗಬಾನ್ ಎನ್.ಎಸ್.ಬಿ ಅವರ ನೇತೃತ್ವದಲ್ಲಿ ಮಸಜಿದ್ ಕಮಿಟಿಯ ಅಧ್ಯಕ್ಷರಾದ ಶಬ್ಬಿರ್ ಬೈ, ಉಪಾಧ್ಯಕ್ಷ ಬಾಬಾ ಬೈ, ಇಫ್ತೆಖಾರ್ ಅಹ್ಮದ್, ಎಂ.ಡಿ ಎಕ್ಬಾಲ್ ಬೈ, ಮೌಲಾನಾ ಮೋಹಿಜ್ ಹಾಫಿಸಾಬ್, ಮೊಹಮ್ಮದ್ ಮಕ್ಬುಲ್ ಅನ್ಸಾರಿ, ನಬಿಲಾಲ್ ಬಾಗಬಾನ್, ಫೆರೋಜ್ ಸನ್ಮಾನಿಸಿ ಗೌರವಿಸಿದರು.

ಶಿಬಿರದಲ್ಲಿ ಸ್ತ್ರೀ ರೋಗ, ಇ.ಎನ್‌.ಟಿ, ಹೃದ್ರೋಗ, ಫಿಸಿಯೋಥೆರಪಿ, ನೇತ್ರ ತಪಾಸಣೆ, ನರಶಸ್ತ್ರ ಚಿಕಿತ್ಸೆ, ಬಿಪಿ, ಶುಗರ್ ತಪಾಸಣೆ, ಜನರಲ್ ಚಿಕಿತ್ಸೆ ಸೇರಿದಂತೆ ಇತರೆ ಆರೋಗ್ಯ ಸಂಬಂಧಿಸಿದ ತಪಾಸಣೆ ನಡೆಸಿ ಸ್ಥಳದಲ್ಲೇ ಆಸ್ಪತ್ರೆ ವತಿಯಿಂದ ಅಗತ್ಯ ಔಷಧಿಗಳು ಉಚಿತ ವಿತರಿಸಲಾಯಿತು.

ಡಾ.ಸೈಯದ್ ಅದಿಬಾ ತಸನೀಮ್, ಡಾ. ಫೈಸಲ್, ಡಾ. ಸಾನಿಯಾ ಮಿರ್ಜಾ, ಶೇಖ್ ಜಾವೀದ್, ಹಿರಿಯ ಸ್ಟಾಫ್ ನರ್ಸ್ ಶೇಖ್ ಅಬ್ದುಲ್ ರಜಾಕ್, ಸೈಯದ್ ಅಥರ್ ಉರ್ ರಹೇಮಾನ್, ಸೈಯದ್ ಇಮ್ರಾನ್, ಸಾನಿಯ ಫಾತೀಮಾ ಅವರು ಈ ಸಂದರ್ಭದಲ್ಲಿ ರೋಗಿಗಳಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು.

emedialine

Recent Posts

ಕಲಬುರಗಿ: ಹಜರತ್ ಲಾಡ್ಲೆ ಮಶಾಕ(ರ.ಅ) ದರ್ಗಾದ 669ನೇ ಉರುಸ್ 13 ರಿಂದ

ಕಲಬುರಗಿ: ಇಲ್ಲಿನ ಪ್ರಸಿದ್ಧಿ ಸೂಫಿ ಸಂತ ಹಜರತ್ ಖಾಜಾ ಶೇಖ ಮಗದೂಮ್ ಅಲ್ಲಾವುದ್ದೀನ್ ಅನ್ಸಾರಿ ಚಿಸ್ತಿ ಲಾಡ್ಲೆ ಮಶಾಕ ಅನ್ಸಾರಿ…

1 hour ago

ಪತ್ರಕರ್ತ ಮಣೂರರಿಗೆ ಟಿಎಸ್‍ಆರ್ ಪ್ರಶಸ್ತಿ ಪ್ರದಾನ

ಕಲಬುರಗಿ: ಹಿರಿಯ ಪತ್ರಕರ್ತ, ಸಂಯುಕ್ತ ಕರ್ನಾಟಕ'ದ ನಿವೃತ್ತ ಕಾರ್ಯನಿರ್ವಾಹಕ ಸಂಪಾದಕ ಶ್ರೀಕಾಂತಾಚಾರ್ಯ ಆರ್. ಮಣೂರ ಅವರಿಗೆ ಬುಧವಾರ ಸಂಜೆ ಬೆಂಗಳೂರಿನಲ್ಲಿ…

2 hours ago

ನವರಾತ್ರಿ ಮಹೋತ್ಸವದ ನಿಮಿತ್ತ ದೇವಿ ಪೂಜಾ ಕಾರ್ಯಕ್ರಮ

ಕಲಬುರಗಿ; ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಮತ್ತು ಭಾವಸರ್ ಕ್ಷತ್ರಿಯ…

2 hours ago

ಶ್ರೀ ಭವಾನಿ 1ನೇ ದಿನದ ಪುರಾಣ, ಕಳಸ ರೋಹಣ

ಕಲಬುರಗಿ: ನಗರದ ಕುವೆಂಪು ಕಾಲೋನಿ ಹಾಗೂ ಕಲ್ಯಾಣ ನಗರದದಲ್ಲಿ ಶ್ರೀ ಭವಾನಿ 1ನೇ ದಿನದ ಪುರಾಣ ಕಾರ್ಯಕ್ರಮ ಹಾಗೂ ದೇವಿಯ…

2 hours ago

ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಅವಶ್ಯಕತೆಯಿಲ್ಲ: ಮುದ್ದಾ

ಶಹಾಬಾದ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಕೊಡಬೇಕು ಎಂದು ಹೇಳಲು ಬಿಜೆಪಿಗರಿಗೆ ಯಾವ ನೈತಿಕತೆ ಇಲ್ಲ.ಸಿದ್ದರಾಮಯ್ಯನವರು ರಾಜೀನಾಮೆ ನೀಡುವ…

2 hours ago

ಅಹಿಂಸೆಯ ದಾರಿಯಲ್ಲಿ ನಡೆದಾಗ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯ

ಶಹಾಬಾದ: ಇಡಿ ವಿಶ್ವವವು ಗಾಂಧಿಜೀ ಅವರ ಸತ್ಯ ಮತ್ತು ಅಹಿಂಸೆಯ ದಾರಿಯಲ್ಲಿ ನಡೆದಾಗ ಮಾತ್ರ ವಿಶ್ವದಲ್ಲಿ ಶಾಂತಿ ನೆಲಸಲು ಸಾಧ್ಯವೆಂದು…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420