ಕಲಬುರಗಿ: ಇಲ್ಲಿನ ವಿದ್ಯಾನಗರದ ಶ್ರೀ ಕೃಷ್ಣ ಮಂದಿರ ಹಾಗೂ ಹನುಮ ಭೀಮ ಮಧ್ವರ ಮಂದಿರ, ಅಖಿಲ ಭಾರತ ಮಧ್ವಮಹಾ ಮಂಡಲ ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯದಲ್ಲಿ ಉಡುಪಿ ಶ್ರೀ ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥರ ಚತುರ್ಥ ಮಹಸಮಾರಾಧನೆ ಉತ್ಸವ ಜರುಗಿತು.
ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರ ಆದೇಶದಂತೆ ಪಂಚಾಮೃತ, ಮಹಾಪೂಜೆ, ಜಯತೀರ್ಥ ನಗರದ ಹಂಸ ನಾಮಕ ಮತ್ತು ಲಕ್ಷ್ಮಿನಾರಾಯಣ್ ಪಾರಾಯಣ ಸಂಘದಿಂದ ಪಾರಾಯಣ, ರಾಮ ನಾಮ ಜಪ ಮಂತ್ರ ಹಾಗೂ ಅಷ್ಟೋತ್ತರ, ಪ್ರವಚನ, ರಥೋತ್ಸವ ನಡಯಿತು.
ನಂತರ ಅಲಂಕಾರ ಪಂಕ್ತಿ ಹಾಗೂ ತೀರ್ಥ ಪ್ರಸಾದವಿತರಿಸಲಾಯಿತು. ಕಾರ್ಯದರ್ಶಿ ಕಿಶೋರ ದೇಶಪಾಂಡೆ, ಉಪಾಧ್ಯಕ್ಷ ಗೋಪಾಲಚಾರ್ಯ ಅಕಮಂಚಿ, ಸಹ ಕಾರ್ಯದರ್ಶಿ ಮಂಜುನಾಥ ಕುಲಕರ್ಣಿ, ಖಜಾಂಚಿ ನಾರಾಯಣ ದೇಸಾಯಿ, ಸದಸ್ಯರಾದ ವಿದ್ಯಾಸಾಗರ ರೇವೂರ, ಗೋಪಾಲ ಕೃಷ್ಣ ಸರಡಗಿ, ರಾಮದಾಸ, ನಂದು ಕಟ್ಟಿ, ಪ್ರಹ್ಲಾದ್ ಬುರ್ಲಿ, ಪ್ರಹ್ಲಾದ್ ನಾಡಗೌಡ, ಸಮಾಜದ ಮುಖಂಡರಾದ ಮಲ್ಲಾರಾವ ಘಾರಮಪಳ್ಳಿ, ರವಿ ಲಾತೂರಕರ್, ಶಾಮಸುಂದರ ಕುಲಕರ್ಣಿ, ವ್ಯಾಸರಾಜ ಸಂತೆಕೇಲೂರ ಸೇರಿದಂತೆ ಮಹಿಳಾ ಭಜನಾ ಮಂಡಳಿ ಸದಸ್ಯುರು, ಶ್ರೀ ಜಯತೀರ್ಥ ನಿಲಯಯದ ವಿದ್ಯಾರ್ಥಿಗಳು ಇದ್ದರು.
ಸುರಪುರ:ದೇಶದಲ್ಲಿ ಹಲವು ಸಂಸ್ಕøತಿಗಳು ಇರುತ್ತವೆ,ಅಂತಹ ಸಂಸ್ಕøತಿಗಳಲ್ಲಿ ಕನ್ನಡ ಮತ್ತು ಕರ್ನಾಟಕ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕಳೆದ 82 ವರ್ಷಗಳಿಂದ…
ಸುರಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸುರಪುರ ತಾಲೂಕ ನೂತನ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ ಎಂದು ಮಹಾಸಭಾ ತಾಲೂಕ…
ಕಲಬುರಗಿ: ಮಹಾನಗರ ಪಾಲಿಕೆಯ ಅಧೀಕ್ಷಕ, ಅಭಿಯಂತರ ಹಾಗೂ ಉಪ ಆಯುಕ್ತ ಆರ್.ಪಿ. ಜಾಧವ ಅವರನ್ನು ಅಮಾತುಗೊಳಿಸಿ ಮನೆಗೆ ಕಳಿಸಬೇಕು ಎಂದು…
ಕಲಬುರಗಿ: 371ನೇ ಜೇ ಕಲಂ ಸೌಲತ್ತುಗಳ ಬಗ್ಗೆ ಡಾ. ಲಕ್ಷ್ಮಣ ದಸ್ತಿಯವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅಂಜುಮನ್ ಸಂಸ್ಥೆಯಿಂದ ಅ.6.…
ಕಲಬುರಗಿ: ಎಷ್ಟೋ ಜನರ ಜೀವನ ಭಜನೆಯಿಂದ ಬದಲಾಗಿಗೆ ಕಾಯಿಲೆ ಬಿದ್ದು ಹಾಸಿಗೆ ಹಿಡಿದ ವ್ಯಕ್ತಿ ಭಜನೆ ಮಾಡುವುದರಿಂದ ಎದ್ದು ಗುಣಮುಖರಾದ…
ಕಲಬುರಗಿ: ಖಾಯಂ ಉದ್ಯೋಗ ಮತ್ತು ಬಾಕಿ ವೇತನಕ್ಕೆ ಸಂಬಂಧಿಸಿದಂತೆ ಕಲಬುರಗಿ ಮಹಾನಗರ ಪಾಲಿಕೆ ಪೌರಕಾರ್ಮಿಕರು ಧರಣಿ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ…