ಕಲಬುರಗಿ: ನೇಕಾರರ ಸೇವಾ ಸಂಘದ ಕಛೇರಿಯಲ್ಲಿ ರಾಷ್ಟ್ರೀಯ ಯುವ ದಿನ, ಆಚರಣೆಯ ಸಂದರ್ಭದಲ್ಲಿ ಜಿಲ್ಲಾ ಕುರಹಿನಶೆಟ್ಟಿ ಸಮಾಜ, ಪ್ರಕಟಿಸಿದ 2024 ರ ವರ್ಷದ ತೂಗು ದಿನದರ್ಶಿಕೆ ಯನ್ನು ಲೋಕಾರ್ಪಣೆಗೊಳಿಸಲಾಯಿತು.
ಕಲಬುರಗಿ ಮಹಾನಗರದ ಪ್ರತಿಯೊಂದು ನೇಕಾರರ ಮನೆಯಲ್ಲಿ ತೂಗಿಹಾಕುವಂತೆ ಮಾಡಲು ಶ್ರಮವಹಿಸಲು ಯುವಕರು ವಿವೇಕಾನಂದರ ಭಾವ ಚಿತ್ರಕ್ಕೆ ಪ್ರಮಾಣ ಮಾಡಲಾಯಿತು, ಮಹಾನಗರದಲ್ಲಿ ನೇಕಾರರ ಅಸ್ಮಿತೆ ಜಾಗ್ರತಿ ಗೊಳ್ಳಲು ಈ ಕಾರ್ಯ ಅನಿವಾರ್ಯವಾಗಿದೆ ಎಂದು ಸಪ್ತ ನೇಕಾರ ಸಂಘದ ಕಾರ್ಯದರ್ಶಿ ಗಳಾದ ಮ್ಯಾಳಗಿ ಚಂದ್ರಶೇಖರ್ ಕೋರಿದರು.
ಅಧ್ಯಕ್ಷರಾದ ಬಸವರಾಜ ಕರದಳ್ಳಿ ಅಧ್ಯಕ್ಷತೆ ವಹಿಸಿದ್ದರು, ಮೊದಲಿಗೆ ನ್ಯಾಯವಾದಿ ಸಂತೋಷ್ ಗುರುಮಿಟಕಲ ಎಲ್ಲರಿಗೂ ಸ್ವಾಗತಿಸಿದರು, ಪ್ರಾಸ್ತಾವಿಕವಾಗಿ ಉಪಾಧ್ಯಕ್ಷರಾದ ಕುಶಾಲ ಯಡವಳ್ಳಿ ಮಾತನಾಡುತ್ತ, ಕಲಬುರಗಿ ಮಹಾನಗರದಲ್ಲಿ ಕಳೆದ 25 ವರ್ಷದಿಂದ ಸೇವೆ ಮಾಡುತ್ತಾ ಬಂದರು, ನಮಗೆ ಸ್ವಂತ ಕಾರ್ಯಾಲಯಕ್ಕೆ ಯಾವುದೇ ಸರಕಾರ ಸಹಾಯ ಮಾಡಿಲ್ಲ, ಅದನ್ನು ಬದಿಗೊತ್ತಿ ಸ್ವಂತ ಬಲದಿಂದ 2 ಎರಡು ಎಕರೆ ಜಮೀನು ಖರೀದಿಸಲು ಸಂಘಟಿತ ರಾಗಿದ್ದೇವೆ ಎಂದು ತಿಳಿಸಿದರು, ಖಜಾಂಚಿ ಮಲ್ಲಿನಾಥ ಕುಂಟೋಜಿ ಉಪಸ್ಥಿತರಿದ್ದರು.
ಡಾ. ಬಸವರಾಜ ಚನ್ನಾ ವಂದಿಸಿದರು ಕಾರ್ಯಕ್ರಮದಲ್ಲಿ ವಕೀಲ ಶಿವಲಿಂಗಪ್ಪಾ ಅಷ್ಟಗಿ, ವಿನೋದ ಕುಮಾರ ಜೇನವೆರಿ, ರಾಜು ಕೋಷ್ಟಿ, ಶ್ರೀನಿವಾಸ, ವೆಂಕಟೇಶ್ ಬಲ ಪೂರ್ ಇತರರು ಹಾಜರಿದ್ದರು.
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…
ಕಲಬುರಗಿ: ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯಮಟ್ಟದ ಶಾಲಾ ಮಕ್ಕಳ ಆಟೊಗಳ ಸ್ಪರ್ಧೆ 2024 25 ಈಚೆಗೆ ಬೆಂಗಳೂರಿನಲ್ಲಿ ನಡೆದ…