ಬಿಸಿ ಬಿಸಿ ಸುದ್ದಿ

ಜಾಮೀಯಾ ಮಜ್ಜಿದ್ ಚುನಾವಣೆ ಮಹ್ಮದ್ ಮತೀನ ಪೆನಲ್‍ಗೆ ಜಯ

ಕಲಬುರಗಿ: ತಾಲೂಕಿನ ಶಹಾಬಾದ ಜಾಮೀಯಾ ಮಜ್ಜಿದ್ (ಸುನ್ನಿ)ಯ ಆಡಳಿತ ಮಂಡಳಿಗೆ ನಡೆದ ಜಿದ್ದಾ ಜಿದ್ದಿನ ಚುನಾವಣೆಯಲ್ಲಿ ಮಹ್ಮದ್ ಮತೀನ (ಎಮ್.ಆರ್.ಎಲ್) ಪೆನಲ್‍ನ ಒಂಬತ್ತು ಜನ ಸದಸ್ಯರು ಗೆಲುವು ಸಾಧಿಸುವ ಮೂಲಕ ಆಡಳಿತದ ಚುಕ್ಕಾಣಿ ಮಹ್ಮದ್ ಮತೀನ್ ಪೆನಲ್‍ನ ಪಾಲಾಗಿದೆ.

ನಗರದ ಜಾಮೀಯಾ ಮಜ್ಜಿದ್ (ಸುನ್ನಿ)ಯ ಆಡಳಿತ ಮಂಡಳಿಯ 11 ಜನರಿಗೆ ನಡೆದ ಚುನಾವಣೆಯಲ್ಲಿ ಈ ಹಿಂದಿನ ಅಧ್ಯಕ್ಷರಾಗಿದ್ದ ಮರ್ಚಂಟ್ ಅಬ್ದುಲ್ ರಶೀದ್ ಅವರ ಪೆನಲ್‍ನಲ್ಲಿ ಅವರನ್ನು ಒಳಗೊಂಡು 11 ಜನ ಅಭ್ಯರ್ಥಿಗಳು ಹಾಗೂ ಮಹ್ಮದ್ ಮತೀನ ಪೆನಲ್‍ನಿಂದ 11 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು.

ಸುಮಾರು ನಾಲ್ಕು ದಶಕಗಳಿಂದ ಅಧ್ಯಕ್ಷರಾಗಿದ್ದ ಮರ್ಚಂಟ್ ಅಬ್ದುಲ್ ರಶೀದ್ ಅವರ ಬಣ ಹಾಗೂ ಮಹ್ಮದ್ ಮತೀನ ಅವರ ಬಣದ ನಡುವೆ ಜಿದ್ದಾಜಿದ್ದಿನ್ ಚುನಾವಣೆ ನಡೆದಿತ್ತು.

ಕೊನೆಗೆ ಚುನಾವಣೆಯಲ್ಲಿ ಮರ್ಚಂಟ್ ಅಬ್ದುಲ್ ರಶೀದ್ ಅವರ ಪೆನಲ್‍ನ 2 ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಿದರೇ, ಮಹ್ಮದ್ ಮತೀನ ಅವರ ಪೆನಲ್‍ನ 9 ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ನಾಲ್ಕು ದಶಕಗಳ ಆಡಳಿತದ ಕೋಟೆಯನ್ನು ಛೀದ್ರಗೊಳಿಸಿ ಅಧಿಕಾರದ ಚುಕ್ಕಾಣಿ ಮಹ್ಮದ್ ಮತೀನ ಪೆನಲ್‍ನ ಪಾಲಾಗಿದೆ.

ಗೆಲುವು ಸಾಧಿಸಿದ ಅಭ್ಯರ್ಥಿಗಳು: ಮಹ್ಮದ್ ಮತೀನ, ಮಹ್ಮದ್ ಅಲಿ, ಅಬ್ದುಲ್ ಖದೀರ್,ಮಹ್ಮದ್ ಶಮಶೋದ್ದಿನ್,ಮರ್ಚಂಟ್ ಅಬ್ದುಲ್ ರಶೀದ್, ನುರೋದ್ದಿನ್ ಪಟೇಲ್, ಮಹ್ಮದ್ ರಫಿಕ್,ಅಬ್ದುಲ್ ರಬ್,ಮಹ್ಮದ್ ಫಾರುಕ್,ಮಹ್ಮದ್ ಮುನಾಲ್, ಮಹ್ಮದ್ ಅಜರೋದ್ದಿನ್
ಗೆಲುವು ಸಾಧಿಸಿದ್ದಾರೆ ಎಂದುಕಲಬುರಗಿ ವಿಭಾಗೀಯ ವಕ್ಫ್ ಅಧಿಕಾರಿ ನೂರ್ ಪಾಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

44 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

46 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

49 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago