ಕಲಬುರಗಿ: ತಾಲೂಕಿನ ಶಹಾಬಾದ ಜಾಮೀಯಾ ಮಜ್ಜಿದ್ (ಸುನ್ನಿ)ಯ ಆಡಳಿತ ಮಂಡಳಿಗೆ ನಡೆದ ಜಿದ್ದಾ ಜಿದ್ದಿನ ಚುನಾವಣೆಯಲ್ಲಿ ಮಹ್ಮದ್ ಮತೀನ (ಎಮ್.ಆರ್.ಎಲ್) ಪೆನಲ್ನ ಒಂಬತ್ತು ಜನ ಸದಸ್ಯರು ಗೆಲುವು ಸಾಧಿಸುವ ಮೂಲಕ ಆಡಳಿತದ ಚುಕ್ಕಾಣಿ ಮಹ್ಮದ್ ಮತೀನ್ ಪೆನಲ್ನ ಪಾಲಾಗಿದೆ.
ನಗರದ ಜಾಮೀಯಾ ಮಜ್ಜಿದ್ (ಸುನ್ನಿ)ಯ ಆಡಳಿತ ಮಂಡಳಿಯ 11 ಜನರಿಗೆ ನಡೆದ ಚುನಾವಣೆಯಲ್ಲಿ ಈ ಹಿಂದಿನ ಅಧ್ಯಕ್ಷರಾಗಿದ್ದ ಮರ್ಚಂಟ್ ಅಬ್ದುಲ್ ರಶೀದ್ ಅವರ ಪೆನಲ್ನಲ್ಲಿ ಅವರನ್ನು ಒಳಗೊಂಡು 11 ಜನ ಅಭ್ಯರ್ಥಿಗಳು ಹಾಗೂ ಮಹ್ಮದ್ ಮತೀನ ಪೆನಲ್ನಿಂದ 11 ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದರು.
ಸುಮಾರು ನಾಲ್ಕು ದಶಕಗಳಿಂದ ಅಧ್ಯಕ್ಷರಾಗಿದ್ದ ಮರ್ಚಂಟ್ ಅಬ್ದುಲ್ ರಶೀದ್ ಅವರ ಬಣ ಹಾಗೂ ಮಹ್ಮದ್ ಮತೀನ ಅವರ ಬಣದ ನಡುವೆ ಜಿದ್ದಾಜಿದ್ದಿನ್ ಚುನಾವಣೆ ನಡೆದಿತ್ತು.
ಕೊನೆಗೆ ಚುನಾವಣೆಯಲ್ಲಿ ಮರ್ಚಂಟ್ ಅಬ್ದುಲ್ ರಶೀದ್ ಅವರ ಪೆನಲ್ನ 2 ಅಭ್ಯರ್ಥಿಗಳು ಮಾತ್ರ ಗೆಲುವು ಸಾಧಿಸಿದರೇ, ಮಹ್ಮದ್ ಮತೀನ ಅವರ ಪೆನಲ್ನ 9 ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ನಾಲ್ಕು ದಶಕಗಳ ಆಡಳಿತದ ಕೋಟೆಯನ್ನು ಛೀದ್ರಗೊಳಿಸಿ ಅಧಿಕಾರದ ಚುಕ್ಕಾಣಿ ಮಹ್ಮದ್ ಮತೀನ ಪೆನಲ್ನ ಪಾಲಾಗಿದೆ.
ಗೆಲುವು ಸಾಧಿಸಿದ ಅಭ್ಯರ್ಥಿಗಳು: ಮಹ್ಮದ್ ಮತೀನ, ಮಹ್ಮದ್ ಅಲಿ, ಅಬ್ದುಲ್ ಖದೀರ್,ಮಹ್ಮದ್ ಶಮಶೋದ್ದಿನ್,ಮರ್ಚಂಟ್ ಅಬ್ದುಲ್ ರಶೀದ್, ನುರೋದ್ದಿನ್ ಪಟೇಲ್, ಮಹ್ಮದ್ ರಫಿಕ್,ಅಬ್ದುಲ್ ರಬ್,ಮಹ್ಮದ್ ಫಾರುಕ್,ಮಹ್ಮದ್ ಮುನಾಲ್, ಮಹ್ಮದ್ ಅಜರೋದ್ದಿನ್
ಗೆಲುವು ಸಾಧಿಸಿದ್ದಾರೆ ಎಂದುಕಲಬುರಗಿ ವಿಭಾಗೀಯ ವಕ್ಫ್ ಅಧಿಕಾರಿ ನೂರ್ ಪಾಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.