ಸುರಪುರ: ಇಂದು ಅನೇಕರು ಉದ್ಯಮಗಳನ್ನು ಆರಂಭಿಸುತ್ತಾರೆ,ಅದರಲ್ಲಿ ಕೆಲವರು ಮಾತ್ರ ಲಾಭ ಗಳಿಸಿದರು.ಅನೇಕರು ನಷ್ಟ ಅನುಭವಿಸುತ್ತಾರೆ.ಇದಕ್ಕೆ ಕಾರಣ ಕೇವಲ ಉದ್ಯಮ ಆರಂಭಿಸುವುದಷ್ಟೆ ಮುಖ್ಯವಾಗಿಸಿಕೊಳ್ಳುವ ಬದಲು,ಯಾವ ಉದ್ಯಮ ಆರಂಭಿಸಬೇಕೆಂಬ ಅರಿವು ಮುಖ್ಯ ಎಂದು ಸಿಡಾಕ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಮಹ್ಮದ ಅಸ್ಫಾಕ್ ತಿಳಿಸಿದರು.
ದಿಶಾ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರ ಯಾದಗಿರಿ ಮತ್ತು ಕರ್ನಾಟಕ ಉದ್ಯಮಶೀಲತಾಭಿವೃಧ್ಧಿ ಕೆಂದ್ರ (ಸಿಡಾಕ್) ವತಿಯಿಂದ ದಿಶಾ ಔಟ್ ರೀಚ್ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ ರಾಯಚೂರ ತರಬೇತಿ ನೀಡಿ,ಯಾವುದೆ ಉದ್ಯಮ ಆರಂಭಿಸುವವರು ಉತ್ಪಾದನಾ ಘಟಕ ಮತ್ತು ಸೇವಾ ಘಟಕಗಳ ಬಗ್ಗೆ ಸರಿಯಾದ ಜ್ಞಾನ ಹೊಂದಿರಬೇಕು. ಇದರಿಂದ ಯಾವ ಉದ್ಯಮ ಆರಂಭಿಸಬೇಕು ಮತ್ತು ಯಾವ ರೀತಿಯ ಉದ್ಯಮ ಎಂತಹ ಸ್ಥಳದಲ್ಲಿ ಆರಂಭಿಸುವುದರಿಂದ ಲಾಭ ಗಳಿಸಬುದು ಎಂಬುದರ ಬಗ್ಗೆ ತಿಳಿಸಿಕೊಟ್ಟರು.ನಂತರ ಸಿಎಂಇಜಿಪಿ ಮತ್ತು ಪಿಎಂಇಜಿಪಿ ಯೋಜನೆಗಳಡಿಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಬ್ಯಾಂಕುಗಳಿಂದ ಸಾಲ ಪಡೆಯುವ ಕುರಿತು ತಿಳಿಸಿದರು.
ಅಲ್ಲದೆ ಒಂದು ಉದ್ಯಮವೆಂದರೆ ಅದಕ್ಕೆ ಏನೆಲ್ಲ ವಸ್ತುಗಳು ಬೇಕು ಮತ್ತು ಅವುಗಳನ್ನು ಯಾವ ರೀತಿಯಲ್ಲಿ ಪಟ್ಟಿ ಮಾಡುವುದು ಎಂಬುದರ ಕುರಿತು ಮಾಹಿತಿ ನಿಡಿದರು. ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಸ್ವಯಂ ಉದ್ಯೋಗ ಹೊಂದಲು ನೂರಕ್ಕು ಹೆಚ್ಚು ಜನ ತರಬೇತಿ ಪಡೆದರು.ನಂತರ ಕೊನೆಯ ದಿನ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಯೋಜಕರಾದ ಪದ್ಮಶ್ರೀ,ಶಂಕರ ಪಾಟೀಲ ಹಾಗು ಶಿಬಿರಾರ್ಥಿಗಳಾಗಿ ರೈತ ಹೋರಾಟಗಾರ ಬಸನಗೌಡ ಹೆಮ್ಮಡಗಿ,ಜಯಕರ್ನಾಟಕ ಸಂಘಟನೆ ತಾಲ್ಲೂಕಾಧ್ಯಕ್ಷ ರವಿಕುಮಾರ ಬೈರಿಮರಡಿ,ಬಸವರಾಜ ಮುಷ್ಠಳ್ಳಿ,ಹಣಮಂತ್ರಾಯಗೌಡ ಚಿಗರಿಹಾಳ,ನೀಲಮ್ಮಾ ಕುಂಬಾರ,ಪುರುಷೋತ್ತಮ ದೇವತ್ಕಲ್,ಮಲ್ಲಿಕಾರ್ಜುನ ಮುಷ್ಠಳ್ಳಿ,ವಿಜಯಕುಮಾರ ಯಾದವ,ಮಲ್ಲು ಮುಷ್ಠಳ್ಳಿ (ಕೆಸಿಪಿ),ರವಿ ಹುಲಕಲ್ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…
ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…
ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್ನ ದಾಸ್ನಾ…
ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…
ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…
ಶಹಾಬಾದ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು, ಇವುಗಳ ಪ್ರಗತಿಗೆ ಆದ್ಯತೆ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು…