ಬೋವಿ ವಡ್ಡರ ಸಮಾಜದ ಜಿಲ್ಲಾಧ್ಯಕ್ಷರಾಗಿ ಗುಂಡಪ್ಪ ಸಾಂಳಕಿ ಆಯ್ಕೆ

ಕಲಬುರಗಿ: ಬೋವಿ ವಡ್ಡರ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಗುಂಡಪ್ಪ ಸಾಂಳಕಿ ಅವರು ಆಯ್ಕೆಯಾದರು. ನಗರದ ಹಿಂದಿ ಪ್ರಚಾರ ಸಭಾದಲ್ಲಿ ಭಾನುವಾರ ಕೋರ್ ಕಮಿಟಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಕುಸ್ತಿ, ಲಿಂಗಣ್ಣ ದೇವಳಕರ್ ನೇತೃತ್ವದಲ್ಲಿ ನಡೆದ ಸಮಾಜದ ಸಭೆಯಲ್ಲಿ ಆಯ್ಕೆ ನಡೆಯಿತು. ಅಧ್ಯಕ್ಷರ ಆಯ್ಕೆ ಸಂಬಂಧ ನಡೆದ ಚುನಾವಣೆಯಲ್ಲಿ ಸಂಜು ಮಂಜುಳ್ಕರ್, ರವಿಚಂದ್ರ ಗುತ್ತೇದಾರ್, ರಾಘು ಲಷ್ಕರಿ, ಶ್ರೀಕೃಷ್ಣ ಕುಶಾಳಕರ್, ಅವರು ಸ್ಪರ್ಧಿಸಿದರು. 14 ಮತಗಳನ್ನು ಪಡೆದ ಗುಂಡಪ್ಪ ಸಾಂಳಕಿ ಜಯಶಾಲಿಯಾದರು. ಹತ್ತಿರದ ಸ್ಪರ್ಧಿ ಸಂಜು ಮಂಜುಳ್ಕರ್ 12 ಮತಗಳನ್ನು ಪಡೆದರು.

ರವಿ ಗುತ್ತೇದಾರ್ ಜೇವಗಿ91 ಮತ ರಾಘವೇಂದ್ರ ಲಸ್ಕರಿ 1 ಮತ ಶ್ರೀ ಕೃಷ್ಣ ಕುಶಲಕರ್ ಶೂನ್ಯ ಮತ ಪಡೆದರು.

ನಂತರ ಮಾತನಾಡಿದ ನೂತನ ಅಧ್ಯಕ್ಷ ಗುಂಡಪ್ಪ ಸಾಂಳಕಿ, ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತದ ಮೂಲಕ ಸಮಾಜದ ಮುಖಂಡರ ಸಹಕಾರ ಹಾಗೂ ಒಮ್ಮತದ ಅಭಿಪ್ರಾಯದೊಂದಿಗೆ ಸಂಘವನ್ನು ಮುನ್ನಡೆಸುವ ಕೆಲಸ ಮಾಡಲಾಗುವುದು. ಸಮಾಜಮುಖಿ ಕಾರ್ಯಗಳ ಮೂಲಕ ಸಮಾಜದ ಜನರ ನೋವು ನಲಿವುಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದರು.

ಸರಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮಾತನಾಡಿದರು ಸಮಾಜದ ಸಮಾಜ ಮುಖ್ಯವಾದ ಕಾರ್ಯಕ್ರಮಗಳು ಮಾಡುವುದು ಶ್ರೀ ಸಿದ್ದರಾಮೇಶ್ವರ ಮಹಾರಾಜರ ಆಶೀರ್ವಾದದೊಂದಿಗೆ ಸಮಾಜದ ಬೆಳವಣಿಗೆಯಲ್ಲಿ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಿ ಎಲ್ಲರೂ ಶ್ರಮ ಪಡಬೇಕೆಂದು ಕೇಳಿಕೊಳ್ಳುತ್ತೇನೆ ಎಂದರು.

ಸಭೆಯಲ್ಲಿ ಸಮಾಜದ ಮುಖಂಡರಾದ ಮನೋಜ್ ಎಸ್ ಜಾಧವ, ಶಂಕರ ದೇವದುರ್ಗ, ಸುಭಾಷ್ ಚೌಧರಿ,ರಾಜು ಮೇಸ್ತ್ರಿ, ಜಿ.ಶಿವಶಂಕರ್, ರಾಜು ಗುತ್ತೇದಾರ್ ಆಂದೋಲ, ಶಿವಶಂಕರ್ ಬೋವಿ, ಶ್ರೀಕೃಷ್ಣ ಕುಶಾಳಕರ್, ವಿಠಲ್ ನಲೋಗಿ, ಡಾ. ಮಲ್ಲಿಕಾರ್ಜುನ್ ದೊಡ್ಮನಿ, ರವಿ ಹಾಗರಗಿ, ಸುರೇಶ ಕುಶಾಳಕರ್, ಭೀಮಣ್ಣ ಕರದಳ್ಳಿ ಚಿತ್ತಾಪುರ, ಭೀಮನ ದೋರನಹಳ್ಳಿ ಉಪಸ್ಥಿತಿ ಇದ್ದರು.

emedialine

Recent Posts

ರೈತರಿಗೆ ಪಲ್ಸ್ ಮ್ಯಾಜಿಕ್ ವಿತರಣೆ

ಕಲಬುರಗಿ: ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡ್ಗಿಯಲ್ಲಿ ಪಿಎಮ್ ಕಿಸಾನ್ ಸಮ್ಮಾನ್ ನಿಧಿ 18ನೇ ಕಂತು ಬಿಡುಗಡೆ ಕಾರ್ಯಕ್ರಮದ ನೇರ ಪ್ರಸಾರದ…

2 hours ago

ಗುಡ್ಡಾಪುರ ದಾನಮ್ಮ ದೇವಿಯ ತೊಟ್ಟಿಲ

ಕಲಬುರಗಿ: ಶಿವಯೋಗ ಸಾಧನೆ, ದಾಸೋಹ, ಕಾಯಕ ನಿಷ್ಠೆ, ಸತ್ಯ- ಧರ್ಮ-ನ್ಯಾಯ ಮೊದಲಾದ ಅಷ್ಟಗುಣಗಳನ್ನು ಅಳವಡಿಸಿಕೊಂಡು ಬದುಕಿದ ಶರಣೆ ಗುಡ್ಡಾಪೂರ ದಾನಮ್ಮ. 12…

2 hours ago

ಅ.8 ರಂದು ದಸರಾ ಕಾವ್ಯ ಸಂಭ್ರಮ

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಅ.8 ರಂದು ಇಳಿಹೊತ್ತು 4.15 ಕ್ಕೆ ನಗರದ ಕನ್ನಡ ಭವನದ ಸಾಹಿತ್ಯ…

2 hours ago

ಕೃಷಿ ರತ್ನ ಪ್ರಶಸ್ತಿಗೆ ಅರ್ಜಿ ಆಹ್ವಾನ

ಕಲಬುರಗಿ: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರಿನ 16ನೇ ಸಂಸ್ಥಾಪನಾ ದಿನಾಚರಣೆಯನ್ನು 22ನೇ ನವೆಂಬರ್ 2024 ರಂದು ರಾಯಚೂರು ಮುಖ್ಯ ಆವರಣದಲ್ಲಿ…

2 hours ago

ಇಂದಿನಿಂದ ಸೂಗೂರ (ಕೆ ) ನವರಾತ್ರಿ ಬ್ರಹ್ಮೋತ್ಸವ

ಕಾಳಗಿ : ಕಲ್ಯಾಣ ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಸುವರ್ಣ ಗಿರಿ ಕಾಳಗಿ ತಾಲೂಕಿನ ಸೂಗೂರ (ಕೆ )…

7 hours ago

ಕಾಳಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಕಲಬುರಗಿ: ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಕಾಳಗಿ ತಾಲೂಕು ಪ್ರವಾಸಿ ಮಂದಿರದಲ್ಲಿ ಹವ್ಯಾಸೀಕಲಾ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದಿವ್ಯ…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420