ಕಲಬುರಗಿ: ಯಡ್ರಾಮಿ ತಾಲೂಕಿನ ಆಲೂರ್ ಮತ್ತಿತರ 58 ಗ್ರಾಮಗಳಿಗೆ ಹಾಗೂ ಜೇವರ್ಗಿಯ 22 ಗ್ರಾಮಗಳಿಗೆ ಬಹುಗ್ರಾಮ ಕುಡಿವ ನೀರಿನ ಯೋಜನೆಗೆ ಬೇಕಾಗುವ 265 ಕೋಟಿ ರೂ ಅನುದಾನಕ್ಕೆ ರಾಜ್ಯ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಕೆಕೆಆರ್ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯಸಿಂಗ್ ತಿಳಿಸಿದ್ದಾರೆ.
ಭೀಮಾ ನದಿಯಿಂದ ಈ ನೀರು ಪೂರೈಕೆಯಾಗಲಿದ್ದು, ಈ ಯೋಜನೆಯಿಂದ ತಾಂಡಾಗಳು ಸೇರಿ 100 ಗ್ರಾಮಗಳ ಕುಡಿವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಈ ಯೋಜನೆಗಾಗಿ 2015ರಿಂದಲೂ ಸರಕಾರದ ಮೇಲೆ ಒತ್ತಡ ಹಾಕುತ್ತಲೇ ಇದ್ದೆ. ಆದರೆ ಅದು ಸಾಕಾರ ಆಗಿರಲಿಲ್ಲ. ಆದರೆ ಈಗ ನಮ್ಮ ಸರಕಾರ ಇದನ್ನು ಈಡೇರಿಸಿದೆ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದಿದ್ದಾರೆ.
ಭೀಮಾ ನದಿಯಿಂದ 14 ಎಂಎಲ್ಡಿ ನೀರು ಎತ್ತುವಳಿ ಮಾಡಲಾಗುತ್ತದೆ. ಕಲ್ಲೂರ್ ಬಿ.ಯಲ್ಲಿಜಾಕ್ವೆಲ್ ಇರಲಿದ್ದು, ಸೊನ್ನ ಕ್ರಾಸ್ ಹತ್ತಿರ ನೀರು ಶುದ್ಧೀಕರಣ ಘಟಕ ಅಳವಡಿಕೆಯಾಗಲಿದೆ ಎಂದು ತಿಳಿಸಿದ್ದಾರೆ.
ಯಡ್ರಾಮಿ ತಾಲೂಕಿನ ಆಲೂರ, ಕರಕಿಹಳ್ಳಿ, ಕುಕನೂರ, ಸುಂಬಡ, ಕಾಚಾಪುರ, ಕಡಕೋಳ, ಅರಳಗುಂಡಗಿ, ಮಳ್ಳಿ,ಕುರಳಗೇರಾ, ಮಾಗಣಗೇರಾ, ಬಳಬಟ್ಟಿ, ಬಿಳವಾರ, ಇಜೇರಿ, ಸಾಥಖೇಡ್, ಯಲಗೋಡ ಗ್ರಾಮ ಪಂಚಾಯಿತಿಗಳು ಮತ್ತು ಜೇವರ್ಗಿ ತಾಲೂಕಿನ ನೆಲೋಗಿ, ಬಳೂಂಡಗಿ, ಜೇರಟಗಿ, ಕಲ್ಲಹಂಗರಗಾ, ನೇದಲಗಿ, ಹರನೂರ, ಹಿಪ್ಪರಗಾ ಎಸ್.ಎನ್ ಮತ್ತು ರಂಜಣಗಿ ಗ್ರಾಮ ಪಂಚಾಯಿತಿಗಳು ಈ ಯೋಜನೆ ವ್ಯಾಪ್ತಿಗೆ ಸೇರಿವೆ ಎಂದು ಹೇಳಿದ್ದಾರೆ.
ಜಲಜೀವನ್ ಮಿಷನ್ ಯೋಜನೆ ಅಡಿ ಬಹುಗ್ರಾಮ ಕುಡಿವ ನೀರಿನ ಯೋಜನೆಗೆ ಸರಕಾರ ಅನುಮೋದನೆ ನೀಡಿದೆ. ಬಹುದಿನಗಳ ಬೇಡಿಕೆ ಈಡೇರಿದೆ. ಇದು ಸಾಕಾರವಾದರೆ ನನ್ನ ಮತಕ್ಷೇತ್ರದ ಎರಡು ತಾಲೂಕುಗಳಾದ ಜೇವರ್ಗಿ ಮತ್ತು ಯಡ್ರಾಮಿಯ ಕುಡಿವ ನೀರಿನ ಸಮಸ್ಯೆ ಬಹತೇಕ ನಿವಾರಣೆಯಾಗಲಿದೆ. -ಡಾ. ಅಜಯಸಿಂಗ್, ಅಧ್ಯಕ್ಷ, ಕೆಕೆಆರ್ಡಿಬಿ, ಶಾಸಕರು ಜೇವರ್ಗಿ
ಕಲಬುರಗಿ: ಜೀವನದಲ್ಲಿ ಎದುರಾಗುವ ಅರಿಷಡ್ ವೈರಿಗಳನ್ನು ಗೆದ್ದು ಉತ್ತಮ ಬದುಕು ಕಟ್ಟಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ…
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…