ಬಿಸಿ ಬಿಸಿ ಸುದ್ದಿ

ಶ್ರೀಪ್ರಭು ಕಾಲೇಜಿನಲ್ಲಿ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮ

ಸುರಪುರ: ನಗರದ ಶ್ರೀಪ್ರಭು ಕಲಾ ಮತ್ತು ವಿಜ್ಞಾನ ಮತ್ತು ಜೆ.ಎಂ.ಬೋಹರಾ ವಾಣಿಜ್ಯ ಮಹಾವಿದ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರಚಾರೋಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು  ಪ್ರೊ. ರಾಜನಾಳ್ಕರ ಲಕ್ಷ್ಮಣ, ವಿತ್ತಾಧಿಕಾರಿಗಳು ಗುಲ್ಬರ್ಗಾ ವಿಶ್ವವಿದ್ಯಾಲಯ ಇವರು ನೆರವೇರಿಸಿದರು.ವೇದಿಕೆ ಮೇಲೆ ಕಲಬುರಗಿ, ಪ್ರೊ. ಎಚ್.ಟಿ. ಪೋತೆ, ನಿರ್ದೇಶಕರು, ಪ್ರಾಸರಾಂಗ, ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ, ಡಾ. ಎಸ್.ಎಚ್. ಹೊಸಮನಿ, ಪ್ರಾಚಾರ್ಯರು, ಎಸ್.ಪಿ. ಜೆ.ಎಮ್.ಬಿ ಪದವಿ ಕಾಲೇಜು ಸುರಪುರ, ಪ್ರೊ. ವೇಣುಗೋಪಾಲ ಜೇವರ್ಗಿ, ಉಪಪ್ರಾಚಾರ್ಯರು, ಎಸ್.ಪಿ. ಜೆ.ಎಮ್.ಬಿ ಪದವಿ ಕಾಲೇಜು ಸುರಪುರ, ಪ್ರೊ. ಎಮ್.ಡಿ. ವಾರಿಸ್, ಪ್ರಾಚಾರ್ಯರು  ಎಸ್.ಪಿ. ಜೆ.ಎಮ್.ಬಿ  ಪಿಯು ಕಾಲೇಜರವರು ಆಸೀನರಾಗಿದ್ದರು.

ನಂತರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ. ಎಚ್.ಟಿ. ಪೋತೆ, ನಿರ್ದೇಶಕರು, ಪ್ರಾಸರಾಂಗ, ಗುಲ್ಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಆಶಯ ನುಡಿಗಳನ್ನಾಡುತ್ತಾ ಯಾದಗಿಎರಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಹಿತಿಗಳ ಪರಿಚಯಿಸುವದರ ಮೂಲಕ ಅವರ ಸಾಧನೆಗಳನ್ನು ಕೊಂಡಾಡಿ ಇಂದಿನ ಯುವ ಪಿಳಿಗೆಗೆ ಪುಸ್ತಕದ ಪ್ರೇಮಿಗಳಾಗಿ ಎಂದು ನುಡಿದರು.

ಪ್ರಭಂದನಾಕಾರರಾಗಿ ಆಗಮಿಸಿದ್ದ ಹೊನ್ಕಲ್ ಸಿದ್ದರಾಮ, ಸಾಹಿತಿಗಳು ಯಾದಗಿರಿಯವರು,ಯಾದಗರಿ ಜಿಲ್ಲೇಯ ಅಧುನಿಕ ಕಾವ್ಯ ಎಂಬ ವಿಷಯವಾಗಿ ಅಂತ್ಯಂತ ಮಾತನಾಡಿದರು. ಮತ್ತೋರ್ವ ಪ್ರಭಂದನಾಕಾರರಾಗಿ ಆಗಮಿಸಿದ್ದ ಮಹಿಪಾಲರಡ್ಡಿ ಮುನ್ನೂರ, ಸಾಹಿತಿಗಳು ಕಲಬುರಗಿಯವರು ಯಾದಗರಿ ಜಿಲ್ಲೆಯ ಪತ್ರಿಕೊಧ್ಯಮ ಎಂಬ ವಿಷಯವಾಗಿ ಹಾಗು ಪ್ರಭಂದನಾಕಾರರಾಗಿ ಆಗಮಿಸಿದ್ದ ಪ್ರಕಾಶ ಅಂಗಡಿ, ಮಾಜಿ ಸದಸ್ಯರು ಜಾ.ಪ. ಅಕ್ಯಾಡಮಿ, ಸುರಪುರ ಅವರು ಸುರಪುರ-ಜಾನಪದ ಎಂಬ ವಿಷಯವಾಗಿ ಮಾತನಾಡಿದರು.ಡಾ. ಶ್ರೀಶೈಲ ನಾಗರಾಳ, ಪ್ರಾಚಾರ್ಯರು, ಎ.ವಿ. ಪಾಟಿಲ್ ಕಾಲೇಜು ಅಳಂದ ಭಾವೇಕ್ಯತೆಯ ನೆಲೆ ತಿಂಥಣಿ ಎಂಬ ವಿಷಯದ ಕುರಿತು ಮತ್ತು ಡಾ. ಗವಿಸಿದ್ದಪ್ಪ ಪಾಟೀಲ್, ಸಾಹಿತಿಗಳು ಹುಮನಾಬಾದ ಅವರು ಬೀದರ ಜಿಲ್ಲೇಯ ತತ್ವ ಪದಕಾರರು ಎಂಬ ವಿಷಯದ ಬ್ಗಗೆ ಹಾಗು ಡಾ. ಸಂತೋಷಕುಮಾರ ಕಂಬಾರ, ಸಾಹಿತಿಗಳು ಕಲಬುರಗಿಯವರು ಯಾದಗರಿ ಜಿಲ್ಲೇಯ ಧುನಿಕ ವಚನಕಾರರು ಎಂಬ ವಿಷಯವಾಗಿ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎಚ್. ಹೊಸಮನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು,ಡಾ. ಸುರೇಶ ಮಾಮಡಿ ನಿರೂಪಿಸಿದರು, ಡಾ. ಶಿವಲೀಲಾ ಸ್ವಾಗತಿಸಿದರು, ವೀರಣ್ಣ ಜಾಕಾ ವಂದಿಸಿದರು. ಕಾರ್ಯಕ್ರಮದಲ್ಲಿ ಎನ್.ಎಸ್. ಪಾಟಿಲ್, ಎಸ್.ಎಮ್. ಸಜ್ಜನ, ಡಾ. ಶರಣಗೌಡ ಪಾಟಿಲ್, ಹಣಮಂತ ಸಿಂಗೆ, ಡಾ ರಮೇಶ ಶಹಾಪುರಕರ್, ಧರ್ಮರಾಜ ಪಿಳಿಬಿಂಟ, ವಿಜಯಕುಮಾರ, ಜ್ಯೊತಿ ಮಾಮಡಿ, ಹಂಪಮ್ಮ,ಶ್ರೀಶೈಲ್, ಗುರುರಾಜ ಕುಲ್ಕರ್ಣಿ,ಧರ್ಮರಾವ ಕೆ. ಮಲ್ಹಾರರಾವ ಕುಲ್ಕರ್ಣಿ,ವೀರಣ್ಣ ಜಾಕಾ, ಯಲ್ಲಪ್ಪ,ಸಂತೋಷ ಹೆಡಗಿನಾಳ ಉಪಸ್ಥಿತರಿದ್ದರು.

emedialine

Recent Posts

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ದೊಡ್ಡಮನಿ ನಿಧನ

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ಇಂದು ಬೆಳಗ್ಗೆ ವಾಕಿಂಗ್ ಹೋದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಲಬುರಗಿ ನಗರದ ಜೇವರ್ಗಿ…

50 mins ago

ಜೇವರ್ಗಿ: ಲಂಚಾಪಡೆಯುತ್ತಿದ್ದಾಗ ಮಹಿಳಾ ಸಿಬ್ಬಂದಿ ಲೋಕಾಯುಕ್ತರ ಬಲೆಗೆ

ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…

13 hours ago

371 ಜೆ ಅಡಿ ಉದ್ಯೋಗ ನೇಮಕಾತಿ ಸಂಬಂಧದ ಗೊಂದಲ ನಿವಾರಿಸಿ ಮಾರ್ಗಸೂಚಿ ಸಿದ್ಧಪಡಿಸಲು ಸಚಿವರ ಸೂಚನೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…

14 hours ago

ಶ್ಯಾಮರಾವ ನಾಟಿಕಾರಗೆ ಅಧ್ಯಕ್ಷರನ್ನಾಗಿ ನೇಮಕಕ್ಕೆ ಡಾ. ಮಲ್ಲಿಕಾರ್ಜುನ ಖರ್ಗೆಗೆ ಮನವಿ

ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…

15 hours ago

ಚಿರಂಜೀವಿ ವೆಂಕಯ್ಯ ಕುಶಾಲ್ ಗುತ್ತೇದಾರ್ ಗೆ ಸನ್ಮಾನ

ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…

15 hours ago

ಮಹಿಳಾ ಘಟಕದ ನೂತನ ಪದಾಧಿಕಾರಿಗಳ ನೇಮಕ

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…

16 hours ago