ಸುರಪುರ: ತಾಲ್ಲೂಕಿನ ಮಾಚಗುಂಡಾಳ ಗ್ರಾಮದ ಹುಚ್ಚ ಪಿಡ್ಡೇಶ್ವರ ದೇವಸ್ಥಾನದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರತಿಭೆಗಳು ತಯಾರಿಸುತ್ತಿರುವ ಚಿ.ಸೌ.ಕನ್ಯಾಕುಮಾರಿ ಚಲನ ಚಿತ್ರದ ಮೂಹೂರ್ತ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಶಾಸಕ ನರಸಿಂಹ ನಾಯಕ(ರಾಜುಗೌಡ) ಉದ್ಘಾಟಿಸಿ ಮಾತನಾಡಿ,ನಮ್ಮ ಉತ್ತರ ಕರ್ನಾಟಕ ಅದರಲ್ಲಿ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಳ್ಳೆಯ ಪ್ರತಿಭಾವಂತರಿದ್ದು,ಅವರಿಗೆ ಚಿತ್ರರಂಗದಲ್ಲಿ ಬೆಳೆಯಲು ಅವಕಾಶದ ಅವಶ್ಯಕತೆಯಿದೆ.ಈಗಾಗಲೇ ಅನೇಕರು ಚಿತ್ರರಂಗದಲ್ಲಿ ಗುರುತಿಸಿಕೊಂಡು ಹೆಸರು ಮಾಡಿದ್ದು,ಅದರಂತೆ ಇಂದು ನಮ್ಮ ಕ್ಷೇತ್ರದ ಯುವಕರು ಚಿತ್ರ ನಿರ್ಮಾಣ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ.ಈಗ ಮೂಹೂರ್ತಗೊಂಡಿರುವ ಚಿ.ಸೌ.ಕನ್ಯಾಕುಮಾರಿ ಚಲನಚಿತ್ರ ಆದಷ್ಟು ಬೇಗ ಶೂಟಿಂಗ್ ಪೂರ್ಣಗೊಳಿಸಿ ಬಿಡುಗಡೆಗೊಂಡು ಯಶಸ್ಸು ಕಾಣಲೆಂದು ಹಾರೈಸಿದರು.
ನಂತರ ಚಿತ್ರದ ಯುವ ನಾಯಕ ನಟ ರಾಘವೇಂದ್ರ ಮಾಚಗುಂಡಾಳ ಮಾತನಾಡಿ,ನಮ್ಮ ಭಾಗದಲ್ಲಿನ ಎಲ್ಲ ಮಿತ್ರರು ಸೇರಿ ಈ ಚಿತ್ರ ಮಾಡಲು ತಯ್ಯಾರಾಗಿದ್ದೆವೆ,ಇದಕ್ಕೆ ನಾಡಿನ ಎಲ್ಲರು ಸಹಕರಿಸುವ ಮೂಲಕ ಚಿತ್ರ ರಂಗಕ್ಕೆ ನಮ್ಮ ಕಿರು ಕಾಣಿಕೆಗೆ ಗೌರವಿಸಬೇಕೆಂದರು. ನಮ್ಮ ಕೆಂಭಾವಿಯ ಲೆಮನ್ ಪರಶುರಾಮ ಅವರು ಚಿತ್ರ ಕತೆ ಬರೆದು ನಿರ್ದೇಶಿಸುತ್ತಿದ್ದು,ನಮ್ಮದೆ ತಾಲ್ಲೂಕಿನ ಚಿತ್ರ ನಟರಾದ ಗಂಗಾಧರ ಗೋಗಿಯವರು ಮತ್ತು ನಾಯಕಿ ನಟಿಯಾಗಿ ಪೂಜಾರವರು ಮತ್ತು ಇನ್ನು ಅನೇಕ ಜನ ಹಿರಿಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಲಿದ್ದಾರೆ.ಚಿತ್ರದ ಛಾಯಾ ಗ್ರಹಣವನ್ನು ಶ್ರೀರಾಮ ಜಂಬಗಿಯವರು ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಇದಕ್ಕು ಮುನ್ನ ತಾಲ್ಲೂಕಿನ ಕೂಡಲಗಿ ಗ್ರಾಮದಲ್ಲಿರುವ ಸದ್ಗುರು ಶಾಂತಾನಂದ ಸರಸ್ವತಿ ಬಾಬಾ ಮಹಾರಾಜರ ಮಠದಲ್ಲಿ ಸಿದ್ದ ಗಣಪತಿ ಮುಂದೆ ಚಿತ್ರದ ಟೈಟಲ್ ಅನಾವರಣ ನಡೆಸಲಾಯಿತು.ನಂತರ ಮಾಚಗುಂಡಾಳದ ಹುಚ್ಚ ಪಿಡ್ಡೇಶ್ವರ ದೇವಸ್ಥಾನದಲ್ಲಿ ಮೂಹೂರ್ತ ನಡೆಸಲಾಯಿತು.
ಕರಡಕಲ್ ಕೋರಿಸಿದ್ದೇಶ್ವರ ಶಾಖಾ ಮಠದ ಶ್ರೀ ಶಾಂತರುದ್ರಮುನಿ ಮಹಾಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿದ್ದರು. ನಿಂಗಯ್ಯ ಮುತ್ಯಾ ಬಂಡೆಪ್ಪನಹಳ್ಳಿ ಹಾಗು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ರಾಜಾ ಹನುಮಪ್ಪ ನಾಯಕ (ತಾತಾ),ಯಲ್ಲಪ್ಪ ಕುರಕುಂದಿ,ದೊಡ್ಡ ದೇಸಾಯಿ ದೇವರಗೋನಾಲ,ಬಲಭಿಮ ನಾಯಕ ಬೈರಿಮರಡಿ, ಭೀಮಣ್ಣ ಬೇವಿನಾಳ, ಶರಣು ನಾಯಕ ಬೈರಿಮರಡಿ,ಚಿತ್ರ ನಿರ್ದೇಶಕ ಲೆಮನ್ ಪರಶುರಾಮ,ನಿರ್ಮಾಪಕ ಎಸ್.ಆರ್. ಪಾಟೀಲ,ಛಾಯಾ ಗ್ರಾಹಕ ಶ್ರೀರಾಮ ಜಂಬಗಿ,ನಟ ಗಂಗಾಧರ ಗೋಗಿ,ನಟಿ ಪೂಜಾ,ಹಾಸ್ಯನಟರಾದ ಮಲ್ಲಣ್ಣ ಬಾಚಿಮಟ್ಟಿ,ಲಾಲು ಶಿವಮೊಗ್ಗ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…