ಬಿಸಿ ಬಿಸಿ ಸುದ್ದಿ

ಸಿನಿ ರಸಿಕರ ಮನಗೆಲ್ಲುವ “ಗಿರಿನಾಡ್ ಪ್ರೇಮಿ” ಸಿನಿಮಾ

  • ಸಾಜಿದ್ ಅಲಿ

ಸಿನೆಮಾ ಎನ್ನುವುದು ಒಂದು ತಂಡದ ಕೆಲಸವೇ ಹೊರತು. ಒಬ್ಬನ-ಇಬ್ಬರ ಕೆಲಸವಲ್ಲ. ನಿರ್ದೇಶಕನ ತಾಳಕ್ಕೆ ನಟ, ನಟಿ, ತಂತ್ರಜ್ಞರು ಕುಣಿದರೆ ಮಾತ್ರ ಅತ್ಯುತ್ತಮ ಸಿನೆಮಾ ಮೂಡಿಬರಲು ಸಾಧ್ಯ ಎಂಬುದಕ್ಕೆ ಗಿರಿನಾಡ್ ಪ್ರೇಮಿ ಸಿನೆಮಾ ನಮ್ಮೆದುರಿಗೆ ಉದಾಹರಣೆಯಾಗಿ ನಿಂತಿದೆ.

ಹೌದು, ಯಾದಗಿರಿ ಸೀಮೆಯ ನೈಜಕತೆಯಾದಾರಿತ ಸಿನೆಮಾ ಇದಾಗಿದ್ದು, ಉತ್ತರ ಕನ್ನಡ ಭಾಷೆಯ ಶೈಲಿ, ವಿನೂತನ ಸಾಹಸದ ಮೂಲಕ ಸಿನಿ ರಸಿಕರ ಮನಗೆಲ್ಲುತ್ತಿದೆ. ಭಾರಿ ಗಾತ್ರದ ಬಜೆಟ್, ಖ್ಯಾತ ನಟರು ಇಲ್ಲದೆ ಹೋದರು ಯಾದಗಿರಿ ಜಿಲ್ಲೆಯ ಯುವಜನರ ಬದುಕು ಜೀವನ ಮತ್ತು ಯಶಸ್ಸನ್ನು ಅತ್ಯುತಮÀ ನಟನೆ ಮತ್ತು ಸಂಗೀತ, ಭಾಷೆ ಮತ್ತು ನಿರ್ದೇಶನ, ಕ್ಯಾಮೆರಾ ವರ್ಕ್ ನೋಡಿದರೆ ದೊಡ್ಡ ಗಾತ್ರದ ಸಿನೆಮಾಗಿಂತ ಕಡಿಮೆಯೇನು ಇಲ್ಲವೆಂದನಿಸದೆ ಇರದು.

ಸಿನಿಮಾದಲ್ಲಿ ಪ್ರೇಮಿಗಳಿಬ್ಬರ ಪ್ರೀತಿಯನ್ನು ಕ್ಲೆöÊಮೆಕ್ಸ್ ವರೆಗೆ ಜೀವಂತವಾಗಿ ಕಾಪಾಡಿಕೊಂಡು, ಪ್ರತಿ ನೋಡುಗರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತದೆ. ಅಲ್ಲದೇ ಈ ಸಿನಿಮಾ ಯಾದಗಿರಿ ಕಲಬುರಗಿ ಮತ್ತು ಗ್ರಾಮೀಣ ಭಾಗದ ಯುವ ಜನರ ಚೊಚಲ ಪ್ರೀತಿಯ ಕುರುಹುಗಳು ಮನಸ್ಸಿಗೆ ತಟ್ಟುವ ರೀತಿಯಲ್ಲಿ ಸಿನೆಮಾದ ಹೆಚ್ಚುಗಾರಿಕೆಯಾ ಆಗಿದೆ.

ಯುವಕ ಓರ್ವ ನೂತನ ಉದ್ಯಮ ಒಂದು ಪ್ರಾರಂಭಿಸಿ ಅದರಲ್ಲಿ ರಾಂಗ್ ರೀಚಾರ್ಜ್ ಕಾರಣದಿಂದ ಸಿನಿಮಾದ ಆರಂಭವಾಗಿ ಮೈಲಾರ ಲಿಂಗೇಶ್ವರ ದೇವರ ಅನುಗ್ರಹದ ಕೃಪೆಯ ನಂಬಿಕೆಯನ್ನು ಆಧಾರವಾಗಿ ಒಂದು ಮೊಬೈಲ್ ಕರೆಯಲ್ಲಿ ಆರಂಭವಾಗಿ ಮೊಬೈಲ್ ಕಳೆದ ಮೇಲೆ ಸಿನಿಮಾ ಕಥೆಯನ್ನು ಇನ್ನಷ್ಟು ಕುತೂಹಲ ಮುಡಿಸುವ ರೀತಿಯಲ್ಲಿ ನಿರ್ಮಾಪಕರು ನಿರ್ದೇಶಕರು ಬಯಲು ಸೀಮಿಯ ಮಧುರ ಪ್ರೇಮ ಕಥೆಯಾಗಿಯನ್ನು ಜನರ ಮನಮುಟ್ಟುವಂತೆ ಮಾಡಿದ್ದಾರೆ.

ಇನ್ನು ಈ ಸಿನೆಮಾವನ್ನು ಎಂ. ಡಿ. ಕುರಂ ಮತ್ತು ಶರಣು ಪಟ್ಟೆದಾರ ನಿರ್ಮಾಣ ಮಾಡಿದ್ದು, ಯುವರಾಜ್ ಗುತ್ತೇದಾರ ನಿರ್ದೇಶನ, ಸಂಕಲನಕಾರ ಮತ್ತು ಛಾಯಾಗ್ರಾಹಣ ಹೊಣೆಯನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ. ಜೊತೆಗೆ ಸಾಮ್ರಾಟ್ ಮತ್ತು ಶ್ರೀವಸರ ಸಂಗೀತ ನೀಡಿದರೆ, ಸೂರಜ್ ಪುರಾಣಿಕ್ ಸಾಹಿತ್ಯವಿದೆ.

ಇನ್ನು ತಾರಾಗಣದಲ್ಲಿ ನಟಿ ಸೌಮ್ಯ ತಿತಿರ, ಮುಖ್ಯವಾದ ಪಾತ್ರದಲ್ಲಿ ರೌಶಾನ್ ಲಾರೆನ್ಸ್ ಅವರು ನಟಿಸಿದ್ದು ಕಿಚ್ಚ ಸಾಗರ, ರಾಘವೇಂದ್ರ ಹಳಿಪೇಟ್, ಅಶೋಕ್ ಚಿಕೋಟಿ, ಶರಣ್ ಶೆಟ್ಟಿ, ಪ್ರವೀಣ್ ಜಮಾದಾರ್, ಪ್ರವೀಣ್ ಹಿರೇಮಠ್, ಹರೀಶ್ ಮತ್ತು ಇಂದ್ರಜೀತ್ ಪಾಟೀಲ್ ಮತ್ತು ಎಲ್ಲಾ ಕಲಾವಿದರು ಉತ್ತರ ಕರ್ನಾಟಕದ ಸ್ಥಳೀಯ ಪ್ರತಿಭೆಗಳಾಗಿರುವುದು ವಿಶೇಷ.

emedialine

Recent Posts

ಕಲಬುರಗಿ: ನೂತನ ಗ್ರಂಥಾಲಯ ಉದ್ಘಾಟನೆ

ಕಲಬುರಗಿ: ಕಲ್ಯಾಣ ಕರ್ನಾಟಕ ವಿಭಾಗದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾದ ಮಾರ್ಗದರ್ಶಿ ತರಬೇತಿ ಕೇಂದ್ರ ಕಲಬುರಗಿಯಲ್ಲಿ ನೂತನ ಗ್ರಂಥಾಲಯವನ್ನು…

3 hours ago

ಬಸವ ಜಯಂತಿ ಆಚರಣೆ ಅಂಗವಾಗಿ ಹುಣಸಗಿಯಲ್ಲಿ ಪೂರ್ವಭಾವಿ ಸಭೆ

ಸುರಪುರ: ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಸರಕಾರ ದಿಂದ ಸಾಂಸ್ಕøತಿಕ ನಾಯಕ ವಿಶ್ವಗುರು ಬಸವಣ್ಣನವರ…

5 hours ago

ಹುಣಸಿಹೊಳೆ: ಕಣ್ವಮಠದಲ್ಲಿ ಯತಿತ್ರಯರ ಆರಾಧನೆ ಜೂನ್ 22 ರಿಂದ ಜುಲೈ 3ರ ವರೆಗೆ

ಸುರಪುರ: ಕಣ್ವಮಠದ ಯತಿಗಳಾದ ವಿದ್ಯಾ ತಪೋನಿಧಿ ತೀರ್ಥರ ಆರಾಧನೆ ಜೂನ್ 22 ರಿಂದ 24 ರವರೆಗೆ, ವಿದ್ಯಾಮನೋಹರ ತೀರ್ಥರ ಆರಾಧನೆ…

5 hours ago

ಆರ್ಟ್ ಆಫ್ ಲಿವಿಂಗ್ ಮಕ್ಕಳಿಗಾಗಿ ಯೋಗ ತರಬೇತಿ 23ಕ್ಕೆ

ಸುರಪುರ: ಶ್ರೀ ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಯಾದಗಿರಿ ಜಿಲ್ಲೆ ವತಿಯಿಂದ ಬೇಸಿಗೆ ಸಂದರ್ಭದಲ್ಲಿ ಮಕ್ಕಳಿಗಾಗಿ ಯೋಗ…

5 hours ago

ಈಶಾನ್ಯ ಪದವೀಧರ ಚುನಾವಣೆ,ಅಂತಿಮ ಮತದಾನಕ್ಕೆ 1,56,623 ಮತದಾರರು ಅರ್ಹ

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಗೆ ಜೂನ್ 3 ರಂದು ನಡೆಯುವ ಮತದಾನಕ್ಕೆ ಕ್ಷೇತ್ರದಾದ್ಯಂತ 99,121 ಪುರುಷರು, 57,483…

6 hours ago

ಡೊನೇಷನ್ ಹಾವಳಿಗೆ ಕಡಿವಾಣಕ್ಕೆ ಎಸ್ಎಫ್ಐಯಿಂದ ಶಾಲಾ ಶಿಕ್ಷಣ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳು 2024-25ನೇ, ಸಾಲಿನಲ್ಲಿ ಪ್ರವೇಶ ಶುಲ್ಕ, ಬಟ್ಟೆ. ಶೂ-ಸಾಕ್ಸ್. ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್,…

9 hours ago