ಸಂಸ್ಕೃತ ಶ್ಲೋಕ ಹೇಳಿ ಸಂವಿಧಾನದ ಆಶಯಗಳ, ಬಸವ ತತ್ವಗಳ ಪಾಲಕನಾಗಿದ್ದೇನೆ ಎಂದ ಪ್ರಿಯಾಂಕ್ ಖರ್ಗೆ

ಕಲಬುರಗಿ: ವಿಪ್ರರು ಸಮಾಜದ ಮಾರ್ಗದರ್ಶಕರಾಗಿ‌ ಕೆಲಸ ಮಾಡಿದ್ದಾರೆ. ಯಾವುದೇ ಶುಭ ಸಂದರ್ಭದಲ್ಲಿ ಜನರು ವಿಪ್ರರ‌ ಸಲಹೆ ಕೇಳುವುದು ನಡೆದುಕೊಂಡು ಬಂದ ರೂಢಿಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ನಗರದಲ್ಲಿ‌ ನಡೆದ ವಿಪ್ರ ಸಮಾಜದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು‌.

ವಿಪ್ರ ಸಮಾಜದ ಹಿರಿಯರು ಮಲ್ಲಿಕಾರ್ಜುನ‌ ಖರ್ಗೆ ಸಾಹೇಬರ ಹಾಗೂ ಧರಂ ಸಿಂಗ್ ಸಾಹೇಬರ ಮಾರ್ಗದರ್ಶಕರಾಗಿ ಹಲವಾರು ಪ್ರಮುಖ ಸಲಹೆಗಳನ್ನು ನೀಡುತ್ತಾ ಬಂದಿದ್ದಾರೆ ಎಂದು ನೆನಪಿಸಿಕೊಂಡ ಸಚಿವರು, ಯಾವುದೇ ಸಮಾಜದ ಬಡವರಿದ್ದರೂ ಕೂಡಾ ರಾಜ್ಯ ಸರ್ಕಾರ ಸಹಾಯ ಮಾಡಲು ಸಿದ್ದವಿದ್ದು ಅಂತವರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಯತ್ನ ಮಾಡುತ್ತಿದೆ. ಸರ್ಕಾರ ಆಳುವ ಸರ್ಕಾರವಲ್ಲ, ಆಲಿಸುವ ಸರ್ಕಾರವಾಗಿದೆ. ಅರ್ಚಕರ ಸಮಸ್ಯೆಗಳ ಬಗ್ಗೆ ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗಾಲಿರೆಡ್ಡಿ ಅವರೊಂದಿಗೆ ಚರ್ಚಿಸಲು ಸಿದ್ದವಿದ್ದೇನೆ. ಕಲಬುರಗಿ ನಗರದಲ್ಲಿ ವಿಪ್ರ ಭವನ ನಿರ್ಮಾಣಕ್ಕೆ ಬೇಕಾಗುವ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ನನ್ನನ್ನು ಹಿಂದೂ‌ವಿರೋಧಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆದರೆ, ನಾನು ಯಾವುದೇ ಆಚರಣೆಯ ವಿರೋಧಿಯಲ್ಲ. ಅದುಮಾರು ಮಠದಲ್ಲಿ ಮೂರು ವರ್ಷ ಸಂಸ್ಕೃತ ಕಲಿತಿದ್ದೇನೆ ಎಂದು ಸಂಸ್ಕೃತ ಶ್ಲೋಕ ಹೇಳಿದ ಪ್ರಿಯಾಂಕ್ ಖರ್ಗೆ, ನಾನು ಪುರಾಣ ಗಳಲ್ಲಿನ ಸಂಗತಿಗಳನ್ನು ತಿಳಿದಿದ್ದೇನೆ. ವಾರಣಾಸಿ,ಬದರಿನಾಥ ಕೇದರನಾಥ, ಅಜ್ಮೇರ್, ಗಯಾ ಸೇರಿದಂತೆ ಹಲವಾರು ಶ್ರದ್ಧಾ ಕೇಂದ್ರಗಳಿಗೆ ಹೋಗಿದ್ದೇನೆ. ಯಾಕೆಂದರೆ ನನಗೆ ಕಲಿಯುವ ಆಸಕ್ತಿ ಇದೆ. ಇದರ ಜೊತೆಗೆ ಪ್ರಮುಖವಾಗಿ ಸಂವಿಧಾನದ ಆಚರಣೆಯಲ್ಲಿ ಬಲವಾದ ನಂಬಿಕೆ ಹೊಂದಿದ್ದು ಬಸವ ತತ್ವದ ಪರಿಪಾಲಕನಾಗಿದ್ದೇನೆ. ಸಮಾಜದ ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುತ್ತೇನೆ ಎಂದು ಹೇಳಿದರು.

ಖರ್ಗೆ ಸಾಹೇಬರು ಅಧಿಕಾರಲ್ಲಿದ್ದಾಗ ಆದಂತ ಅಭಿವೃದ್ದಿಗಳಲ್ಲಿ ಈಗ ಕುಂಠಿತವಾಗಿದೆ. ನೀವೆಲ್ಲ ಅಭಿವೃದ್ದಿಯಲ್ಲಿ ಹೋಲಿಕೆ ಮಾಡಿ ಮತದಾನ ಮಾಡಿ. ಕೇಂದ್ರಿಯ ವಿಶ್ವವಿದ್ಯಾಲಯ, ಇಎಸ್ ಐ ಆಸ್ಪತ್ರೆ, ವರ್ತುಲ ರಸ್ತೆಗಳು, ಜಯದೇವ ಆಸ್ಪತ್ರೆ, ಕಿದ್ವಾಯಿ ಆಸ್ಪತ್ರೆ ನಮ್ಮ ಪಕ್ಷದ ಕೊಡುಗೆಗಳಾಗಿವೆ‌.‌ ರೇಲ್ವೆ ವಲಯ, ಜವಳಿ ಪಾರ್ಕ್, ನಿಮ್ಝ ನಂತಹ ಪ್ರಮುಖ ಯೋಜನೆಗಳು ನಮ್ಮ ಕಾಲದಲ್ಲಿಯೇ ಮಂಜೂರಾಗಿದ್ದವು. ಆದರೆ, ಈ‌ ಎಲ್ಲ ಯೋಜನೆಗಳು ವಾಪಸ್ ಹೋಗಿವೆ. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಅಭಿವೃದ್ದಿಪರವಾಗಿರುವ ಕಾಂಗ್ರೆಸ್ ಪಕ್ಷವನ್ನು ಹಾಗೂ ರಾಧಾಕೃಷ್ಣ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಮಾಜಿ‌ ಜಿಡಿಎ ಅಧ್ಯಕ್ಷ ನಾರಾಯಣರಾವ್ ಕಾಳೆ ಮಾತನಾಡಿ ಮೃದು ಮಾತಿನ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರು ಗೆಲ್ಲುವುದು ಶತಃಸಿದ್ದ. ಯಾಕೆಂದರೆ, ಸಂಸದ ಉಮೇಶ್ ಜಾಧವ್ ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ, ಜನರು ನಿರಾಸೆಗೊಂಡಿದ್ದು ಈ ಸಲ ಕಾಂಗ್ರೆಸ್ ಗೆ ಆಶೀರ್ವದಿಸಲಿದ್ದಾರೆ ಎಂದರು.

ವಿಜಯಕುಮಾರ ಕಲ್ಮಣಕರ್ ಮಾತನಾಡಿ ವಿಪ್ರರ ಸಂಖ್ಯೆ ಕಡಿಮೆ‌ ಇರಬಹುದು. ಆದರೆ, ವಿಪ್ರರು ಬೇರೆಯವರ ಮತ ಹಾಕಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ನಾರಾಯಣರಾವ್ ಕಾಳೆ, ರಾಘವೇಂದ್ರ ನಾಡಗೌಡ, ವಿಜಯಕುಮಾರ ಕಲ್ಮಣಕರ್, ಪ್ರಕಾಶ, ನಾರಾಯಣಚಾರ್ ಕಮಲಾಪುರ, ಮಲ್ಹಾರಾವ್ ಗಾರಂಪಳ್ಳಿ, ರಾಘವೇಂದ್ರ ಕುಲಕರ್ಣಿ, ಅನಿಲ್ ಅಷ್ಟಗಿ, ಪ್ರಶಾಂತ ಕೊರಳ್ಳಿ ಸೇರಿದಂತೆ ಹಲವರಿದ್ದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

4 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

7 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

11 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

12 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

14 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420