ಕಲಬುರಗಿ: ಪ್ರತಿ ವರ್ಷದಂತೆ ಈ ವರ್ಷವು ಸಹ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಗೋಲಗೇರಿಯ ಗೊಲ್ಲಾಳೇಶ್ವರ ಮಹಾರಥೋತ್ಸವ ಏ. 23ರಂದು ಜರುಗಲಿದೆ ಎಂದು ಸಕಲ ಸದ್ಭಕ್ತರ ಪರವಾಗಿ ಉದಯಕುಮಾರ ಎಲ್. ಜೇವರ್ಗಿ ಮರತೂರು ತಿಳಿಸಿದ್ದಾರೆ.
ಏ. 9ರಿಂದ ಏ.27ರವರೆಗೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿದ್ದು, ಗೊಲ್ಲಾಳೇಶ್ವರ ಮಹಾಪುರಾಣ ಆರಂಭವಾಗಿದ್ದು, ಮಳ್ಳಿಯ ಶಂಕರಯ್ಯ ಶಾಸ್ತ್ರಿಗಳು ಪುರಾಣ ನಡೆಸಿಕೊಡುತ್ತಿದ್ದಾರೆ. ತಬಲಾ ಪ್ರಭುಲಿಂಗಯ್ಯ ಮಠ, ಗೌಡಪ್ಪ ಗವಾಯಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಮಹಾಪುರಾಣ ಮಂಗಲದ ತರುವಾಯ ಸಂಜೆ 7 ಗಂಟೆಗೆ ಬಿಂಗಿ ಉತ್ಸವ ರಾತ್ರಿ 10 ಗಂಟೆಗೆ ಕಡೆಯ ಉಚ್ಛಾಯಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ನಾಳೆ ರಥೋತ್ಸವ: ಏ. 23ರಂದು ಸಂಜೆ 5.30ಕ್ಕೆ ಧರ್ಮದರ್ಶಿ ಸಿದ್ರಾಮಪ್ಪ ದೇವರಮನಿ, ವರಪುತ್ರ ಹೋಳಪ್ಪ ದೇವರಮನಿ ನೇತೃತ್ವದಲ್ಲಿ ಕಳಾಸಾರೋಹಣ ಹಾಗೂ ವಿಜೃಂಭಣೆಯ ರಥೋತ್ಸವ ಜರುಗಲಿದ್ದು, 24ರಿಂದ ದನಗಳ ಜಾತ್ರೆ, 25ರಂದು ಕಡಬಿನ ಕಾಳಗ, 27ರಂದು ಕಳಸ ಇಳಿಸುವ ಕಾರ್ಯಕ್ರಮಗಳು ನಡೆಯಲಿದ್ದು, ಭಕ್ತಾದಿಗಳು ಆಗಮಿಸಿ ಗೊಲ್ಲಾಲೇಶ್ವರರ ದರ್ಶನಾಶೀರ್ವಾದ ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.
ಶಿವನ ಸಾಕ್ಷಾತ್ಕಾರ ಕುರಿ ಕಾಯುವುದರ ಜೊತೆಗೆ ಶಿವನ ಮೇಲಿನ ನಿಷ್ಠೆಯಿಂದ ಶಿವನ ಸಾಕ್ಷಾತ್ಕಾರ ಪಡೆದ ಗೊಲ್ಲಾಳ ಶ್ರೀಶೈಲಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತರಿಗೆ ತನಗೂ ಒಂದು ಲಿಂಗ ತರಲು ಹೇಳುತ್ತಾನೆ. ಲಿಂಗ ತರಲು ಮರೆತು ಬಂದ ನಂದಯ್ಯನವರು ಅಲ್ಲಿಯೇ ಇದ್ದ ಕುರಿಯ ಹಿಕ್ಕಿಯನ್ನು ಕೊಟ್ಟು ದಿನಾಲು ಪೂಜಿಸುವಂತೆ ಸೂಚಿಸುತ್ತಾನೆ. ಅದಂತೆ ಗೊಲ್ಲಾಳ ಗೊಬ್ಬರದ ಗುಂಡಿಯಲ್ಲಿಟ್ಟು ಪೂಜಿಸುತ್ತಾನೆ. ಶಿವ ಈತನ ಭಕ್ತಿಗೆ ಒಲಿದು ಸಾಕ್ಷಾತ್ಕಾರ ನೀಡಿದ ಎಂಬ ಕಥೆ ಈ ಗೊಲ್ಲಾಳೇಶ್ವರನ ಸುತ್ತ ಹೆಣೆದುಕೊಂಡಿದೆ.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…