ಜೇವರ್ಗಿ: ತಾಲೂಕಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರ, ರದ್ದೇವಾಡ್ಗಿ (ಕಲಬುರಗಿ-2) ರಲ್ಲಿ ಮಣ್ಣು ಮತ್ತು ನೀರು ಪರೀಕ್ಷೆ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ರೈತರು ಮಾಗಿ ಹೊಳಮ ನಂತರ ಪ್ರತಿ ಎರಡು ವರ್ಷಕೊಮ್ಮೆ ಖಡಯವಾಗಿ ಮಣ್ಣು ಮತ್ತು ನೀರು ಪರೀಕ್ಷೆ ಮಾಡಿಸಬೇಕೆಂದು ಕೃ.ವಿ. ಕೇಂದ್ರದ ಮುಖ್ಯಸ್ಥರು ಡಾ. ವಾಸುದೇವ ನಾಯ್ಕ್ ಮತ್ತು ತಾಂತ್ರಿಕ ಅಧಿಕಾರಿ (ಮಣ್ಣು ವಿ ಜ್ಞಾನ) ಫರ್ಜಾನಾ ಕೊರಬು ರವರು ರೈತರಿಗೆ ಮನವಿ ಸಲ್ಲಿಸಿರುತ್ತಾರೆ.
ರೈತರು ತಮ್ಮ ಜಮಿನಿನಿಂದ ಹೆಚ್ಚಿನ ಉತ್ಪಾದನೆಯನ್ನು ಪಡೆಯಲು ಕಾಲಕಾಲಕ್ಕೆ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ.ಹೆಚ್ಚಿನ ಮಾಹಿತಿಗಾಗಿ ಕೃ.ವಿ. ಕೇಂದ್ರ, ರದ್ದೇವಾಡ್ಗಿ ಕಛೇರಿಗೆ ಸಂಪರ್ಕಿಸಿ. ಈ ಸೌಲಭ್ಯವನ್ನು ನೀವು ಐಸಿಎಆರ್-ಕೆವಿಕೆ ರದ್ದೇವಾಡ್ಗಿ (ಕಲಬುರಗಿ-2) ನಲ್ಲಿ ಪಡೆದುಕೊಳಬಹುದು. ಮಣ್ಣು ಪರೀಕ್ಷೆಗೆ ರೂ.200/- ದರ ಹಾಗೂ ನೀರು ಪರೀಕ್ಷೆಗೆ ರೂ.100/- ದರ.
1) ಮಣ್ಣು ಪರೀಕ್ಷೆಯಿಂದ ಪೋಷಕಾಂಶಗಳ ಕೊರತೆ ಹಾಗೂ ಅಗತ್ಯ ಬಗ್ಗೆ ಮಾಹಿತಿಯನ್ನು ತಿಳಿಯುತ್ತದೆ.
2) ಸೂಕ್ತವಾದ ರಸಗೊಬ್ಬರಗಳನ್ನು ಸೂಕ್ತ ಪ್ರಮಾಣದಲ್ಲಿ ಬಳಸಲು ಸಾಧ್ಯವಾಗುವದು.
3) ಮಣ್ಣು ಪರೀಕ್ಷೆಯಿಂದ ಮಣ್ಣಿನ ಫಲವತ್ತತೆಯನ್ನು ತಿಳಿದುಕೊಳ್ಳುವುದಲ್ಲದೆ ಸಮಸ್ಯಾತ್ಮಕ ಮಣ್ಣನ (ಅಂದರೆ ಆಮ್ಲೀಯ ಮಣ್ಣು, ಕ್ಷಾರಿಯ ಮಣ್ಣು, ಉಪ್ಪು/ ಲವಣಯುಕ್ತ ಮಣ್ಣು) ಸರಿಪಡಿಕೆಗೆ ಮತ್ತು ಅಪೇಕ್ಷಿತ ಪ್ರಮಾಣದಲ್ಲಿ ರಸಗೊಬ್ಬರಗಳ ಬಳಕೆಯನ್ನು ನಿರ್ಧರಿಸಲು ಸಹಾಯಕವಾಗುತ್ತದೆ.
4) ರಾಸಾಯನಿಕ ಗೊಬ್ಬರ ಖರ್ಚನ್ನು ಕಡಿಮೆ ಮಾಡುತ್ತದೆ ಮತ್ತು ಉತ್ಪಾದನಾ ಸಾಮರ್ಥವನ್ನು ಹೆಚ್ಚಿಸುತ್ತದೆ.
ಕಲಬುರಗಿ: ಕಳೆದ ಅಕ್ಟೋಬರ್ 2 ರಂದು ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…
ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…
ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…
ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…
ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…