ಕಲಬುರಗಿ; ಸಾರ್ವತ್ರಿಕ ಲೋಕಸಭಾ ಚುನಾವಾಣೆಗೆ ಇದೇ ಮೇ 7 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 6 ಗಂಟೆ ವರೆಗೂ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನ ಮುಕ್ತಾಯ ಸಮಯದ ಪೂರ್ವ 48 ರಿಂದ 72 ಗಂಟೆ ಅವಧಿಯಲ್ಲಿ ಅಂದರೆ ಮೇ-4ರ ಸಾಯಂಕಾಲ 6 ಗಂಟೆಯಿಂದ ಅನ್ವಯಯವಾಗುವಂತೆ ಯಾವುದೇ ವ್ಯಕ್ತಿ ಡಿ.ಇ.ಓ ಅಥವಾ ಚುನಾವಣಾಧಿಕಾರಿಗಳ ಅನುಮತಿ ಮತ್ತು ದಾಖಲೆ ಇಲ್ಲದೆ 50 ಸಾವಿರ ರೂ. ಮೇಲ್ಪಟ್ಟ ಹಣವಾಗಲಿ ಅಥವಾ 10 ಸಾವಿರ ರೂ. ಮೇಲ್ಪಟ್ಟ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ ಎಂದು ಗುಲಬರ್ಗಾ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಮತದಾನ ಮುಕ್ತಾಯದ ಕೊನೆಯ 48 ರಿಂದ 72 ಗಂಟೆ ವರೆಗೆ ಅಂದರೆ ಮೇ 4ರ ಸಂಜೆ 6 ರಿಂದ ಅನ್ವಯವಾಗುವಂತೆ ಕೆಲವು ಪ್ರಮುಖ ಸೂಚನೆಗಳನ್ನು ನೀಡಿರುವ ಅವರು, ಯಾವುದೇ ರೀತಿಯ ಧ್ವನಿವರ್ಧಕ, ಕ್ಲಾಥ್ ಬ್ಯಾನರ್ಸ್, ಕ್ಲಥ್ ಫ್ಲ್ಯಾಗ್ಸ್, ಹ್ಯಾಂಡ್ ಬಿಲ್ಸ್, ಪೋಸ್ಟರ್ಸ್, ಸಿ.ಡಿ.ಗಳು, ಚೇರ್, ಟೇಬಲ್, ಪೆಂಡಾಲ್, ಹೆದ್ದಾರಿ ಫಲಕ, ಕಟೌಟ್ಸ್ ಬಳಸಿ ಜಾಹೀರಾತು ಮಾಡಬೇಕಿದಲ್ಲಿ ಚುನಾವಣಾಧಿಕಾರಿ-ಸಹಾಯಕ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕು. ಮೈಕ್, ಲೌಡ್ ಸ್ಪೀಕರ್, ಪಬ್ಲಿಕ್ ಅಡ್ರೆಸ್ ಸಿಸ್ಟಮ್ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆ ವರೆಗೆ ಮಾತ್ರ ಬಳಸಬಹುದು, ರಾತ್ರಿ 10ರ ನಂತರ ಬಳಸುವಂತಿಲ್ಲ.
ಬಹಿರಂಗ ಪ್ರಚಾರ ಮೇ 5ರ ಸಂಜೆ 6ಕ್ಕೆ ಮುಕ್ತಾಯವಾಗಲಿರುವ ಕಾರಣ ತದನಂತರ ಯಾವುದೇ ರೀತಿಯ ಬಲ್ಕ್ ಎಸ್.ಎಂ.ಎಸ್., ಧ್ವನಿ ಸಂದೇಶ (ವಾಯ್ಸ್ ಮೆಸೇಜ್) ಒಳಗೊಂಡಂತೆ ಯಾವುದೇ ರೀತಿಯ ಮಾಧ್ಯಮದ ಮೂಲಕ ಪ್ರಚಾರ ಮಾಡುವಂತಿಲ್ಲ. ಧ್ವನಿವರ್ಧಕ ಬಳಕೆ ಸಹ ಕೊನೆಯ 48 ಗಂಟೆಯಲ್ಲಿ ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಧಾರ್ಮಿಕ ಸ್ಥಳವನ್ನು ಪ್ರಚಾರಕ್ಕೆ ಬಳಸಬಾರದು. ಮತದಾನ ಶಾಂತಿಯುತವಾಗಿ ನಡೆಯಲು ಮತದಾನಕ್ಕೆ ಕೊನೆಯ 48 ಗಂಟೆ ಅಂದರೆ ಮತದಾನ ಹಾಗೂ ಮತದಾನ ಪೂರ್ವ ದಿನದಂದು ಮದ್ಯ ಮಾರಾಟ ನಿಷೇಧಿಸಲಾಗಿದೆ. ಇನ್ನು ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಯಾವುದೇ ವ್ಯಕ್ತಿ ಚುನಾವಣಾ ಉದ್ದೇಶಕ್ಕೆ ಸಾರ್ವಜನಿಕ-ಖಾಸಗಿ ಜಮೀನು, ಕಟ್ಟಡ, ವಾಹನಗಳ ಮೇಲೆ ಫ್ಲ್ಯಾಗ್ ಪೋಸ್ಟ್, ಬ್ಯಾನರ್, ನೋಟಿಸ್ ಮತ್ತು ಸ್ಲೋಗನ್ ಅಂಟಿಸುವಂತಿಲ್ಲ ಮತ್ತು ಸರ್ಕಾರಿ ಆವರಣವನ್ನು ವಿರೂಪಗೊಳಿಸುವಂತಿಲ್ಲ. ಆರ್.ಓ., ಡಿ.ಇ.ಓ ಅನುಮತಿ ಇಲ್ಲದೆ ಯಾವುದೇ ರೀತಿಯ ವಾಹನ ಸಹ ಬಳಸುವಂತಿಲ್ಲ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಮತದಾರರನ್ನು ಕರೆತರುವಂತಿಲ್ಲ: ಮೇ 7 ಮತದಾನ ದಿನದಂದು ರಾಜಕೀಯ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಮತದಾರರನ್ನು ವಾಹನದಲ್ಲಿ ಕೂರಿಸಿಕೊಂಡು ಮತಗಟ್ಟೆಗೆ ತರುವುದಾಗಲಿ ಅಥವಾ ಮತಗಟ್ಟೆಯಿಂದ ಮನೆಗೆ ಬಿಡುವಂತ ಯಾವುದೇ ಸೇವೆ ನೀಡುವಂತಿಲ್ಲ.
ಕ್ಷೇತ್ರದಲ್ಲದವರು ಹೊರಡಬೇಕು: ಗುಲಬರ್ಗಾ ಲೋಕಸಭಾ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷದ ಪದಾಧಿಕಾರಿಗಳು ಬಹಿರಂಗ ಪ್ರಚಾರ ಅಂತ್ಯವಾದ ಕೂಡಲೆ ಕ್ಷೇತ್ರವನ್ನು ತೊರೆಯಬೇಕು. ಈ ಸಂಬಂಧ ಹೋಟೆಲ್, ಲಾಡ್ಜ್, ಕಲ್ಯಾಣ ಮಂಟಪ, ಸಮುದಾಯ ಭವನ, ಅತಿಥಿಗೃಹಗಳನ್ನು ತಪಾಸಣೆಗೆ ಒಳಡಿಸಲಾಗುವುದು.
ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…
ಕಲಬುರಗಿ: ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…
ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…
ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…
ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…
ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…