ಬುದ್ಧ-ಬಸವ-ಅಂಬೇಡ್ಕರ್ ಅವರನ್ನು ಒಟ್ಟಾಗಿ ನೋಡಬೇಕು; ಲೇಖಕ ಅರುಣ್ ಜೋಳದಕೂಡ್ಲಿಗಿ

ಕಲಬುರಗಿ: ‘ಇವನಾರವ ಇವನಾರವ ಎಂದೆಣಿಸದಿರಯ್ಯಾ, ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ’ ಎನ್ನುವ ಬಸವಣ್ಣನ ವಚನದ ಆಶಯ ಭಾರತ ಸಂವಿಧಾನದ ಪ್ರಸ್ತಾವನೆಯ ‘ಭಾರತದ ಜನತೆಯಾದ ನಾವುಗಳು..’ ಎನ್ನುವಲ್ಲಿ ಹೋಲಿಕೆಯಾಗುತ್ತದೆ. ಎಲ್ಲರನ್ನೂ ಬೇದಬಾವ ಇಲ್ಲದೆ ನಮ್ಮವರೆಂದು ಭಾವಿಸಬೇಕು ಎನ್ನುವುದು ವಚನ ಮತ್ತು ಸಂವಿಧಾನದ ಆಶಯಗಳು ಒಂದೇ ಆಗಿವೆ’ ಎಂದು ರಾಮಜಿನಗರದಲ್ಲಿ ನಡೆದ ಬಸವ ಜಯಂತಿಯ ವಿಶೇಷ ಉಪನ್ಯಾಸದಲ್ಲಿ ಲೇಖಕ ಅರುಣ್ ಜೋಳದಕೂಡ್ಲಿಗಿ ಅವರು ಅಭಿಪ್ರಾಯ ಪಟ್ಟರು.

ಕರ್ನಾಟಕದ ಸಂದರ್ಭದಲ್ಲಿ ‘ಬುದ್ಧ ಬಸವ ಅಂಬೇಡ್ಕರ್’ ಎನ್ನುವ ತತ್ವದಡಿ ಈ ಮೂವರನ್ನು ಏಕೀಭವಿಸಲಾಗಿದೆ. ಕಾರಣ ಬುದ್ಧನ ಆಶಯಗಳು 12 ನೇ ಶತಮಾನದ ವಚನಗಳಲ್ಲಿ ಮರುಮಂಡನೆಯಾಗಿವೆ, ಅಂತೆಯೇ ಡಾ.ಅಂಬೇಡ್ಕರ್ ಧರ್ಮಾಂತರ ಮಾಡಲು ನಡೆಸಿದ ಅಧ್ಯಯನದಲ್ಲಿ ಲಿಂಗಾಯತ ಧರ್ಮವನ್ನು ಅಧ್ಯಯನ ಮಾಡಿ ಬಸವಣ್ಣನ ಬಗ್ಗೆ ಅಂಬೇಡ್ಕರ್ ಬರೆದಿದ್ದಾರೆ. ಅಂತೆಯೇ ಎಸ್.ಎಂ.ಹುನಶಾಲ್ ಅವರು 1947 ರಲ್ಲಿ ಬರೆದ ‘ಲಿಂಗಾಯತ ಮೂವ್ ಮೆಂಟ್’ ಎನ್ನುವ ಕೃತಿಯನ್ನು ರಚಿಸುವಾಗ ಡಾ‌. ಅಂಬೇಡ್ಕರ್ ಅವರು 1936 ರಲ್ಲಿ ಬರೆದ ‘ಅನಿಲೇಷನ್ ಆಫ್ ಕಾಸ್ಟ್’ ಕೃತಿಯನ್ನು ಓದಿ ಪ್ರಭಾವಿತರಾಗಿದ್ದಾರೆ. ಹೀಗೆ ನಾವು ಬುದ್ಧ-ಬಸವ-ಅಂಬೇಡ್ಕರ್ ಅವರನ್ನು ಒಟ್ಟಾಗಿಯೇ ನೋಡಬೇಕು ಎಂದರು.

ಸಮತೆಯ ಆಶಯದ ಹಿನ್ನೆಲೆಯಲ್ಲಿ ಈ ಮೂವರ ಜತೆ ಕಾರ್ಲ್ ಮಾರ್ಕ್ಸ್ ಅವರನ್ನೂ ಸೇರಿಸಿಕೊಳ್ಳಬೇಕು. ಅಸಮಾನತೆಯ ವಿರುದ್ಧದ ಬಸವಣ್ಣನ ಹೋರಾಟವನ್ನು ನೋಡಿದರೆ ನಾವು ಕಾಮ್ರೇಡ್ ಬಸವಣ್ಣ ಎಂದು ಕರೆಯಬೇಕು’ ಎಂದು ವಿಶ್ಲೇಷಣೆ ಮಾಡಿದರು.

ಬಸವಣ್ಣ ಅವರು ತಮ್ಮ 70 ವಚನಗಳಲ್ಲಿ ವೈದಿಕಶಾಹಿಯನ್ನು ವಿರೋಧಿಸಿದ್ದಾರೆ. ನೂರು ಶರಣರು 1700 ರಷ್ಟು ವಚನಗಳಲ್ಲಿ ವೈದಿಕಶಾಹಿ, ಸನಾತನ ಧರ್ಮದ ಮೌಢ್ಯಗಳನ್ನು ಬಹಳ ಕಟುವಾಗಿ ವಿರೋಧಿಸಿದ್ದಾದೆ. ಹೀಗಿರುವಾಗ ಇಂದು ಯಾರು ವೈದಿಕಶಾಹಿಯನ್ನು ಬೆಂಬಲಿಸಿ‌ ಸನಾತನ ಧರ್ಮವನ್ನು ಆಚರಿಸುತ್ತಾರೋ ಅವರು ಬಸವದ್ರೋಹಿಗಳಾಗುತ್ತಾರೆ. ಇಂದು ಉಳ್ಳವರು ಬಸವನನ್ನು ನಾಮಮಾತ್ರಕ್ಕೆ ಕೇವಲ ಆರಾಧನೆಗೆ ಸೀಮಿತರಾಗಿದ್ದಾರೆ. ಬಸವಣ್ಣನ ಫೋಟೋ ಮನೆಯಲ್ಲಿ ಹಾಕಿಕೊಂಡೂ ಜಾತೀಯತೆ ಮಾಡುತ್ತಾರೆ. ನಿಜಾರ್ಥದಲ್ಲಿ‌ ರಾಮ್ ಜಿ ನಗರದಂತಹ ದುಡಿವಜನರ ದುಡಿಮೆಯಲ್ಲಿ ಬಸವಣ್ಣ ನೆಲೆಸಿದ್ದಾನೆ ಎಂದರು.

“ಬಸವ ಜಯಂತಿಯ ಆಚರಣೆ ಮಾಡಬೇಕಾದವರು ಯಾರು? ಯಾರು ಬಸವ ತತ್ವವನ್ನು ಒಪ್ಪಿ ಬದುಕಿನಲ್ಲಿ ಆಚರಿಸುತ್ತಿರುವರೊ ಅವರು ಬಸವ ಜಯಂತಿ ಮಾಡಲು ಅರ್ಹತೆ ಹೊಂದಿರುತ್ತಾರೆ. ಬಸವ ತತ್ವವನ್ನು ಒಪ್ಪದ ವೈದಿಕಶಾಹಿ ನಂಬಿಕೆ ಹೊಂದಿದವರನ್ನು ಬಸವ ಜಯಂತಿಗೆ ಕರೆಯುವ ಅಗತ್ಯವೂ ಬರುವುದಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಕೆ ನೀಲಾ ಇವರು ಮಾತನಾಡುತ್ತ ಹೇಳಿದರು.

ಬಸವ ಚಿಂತನೆ ಮತ್ತು ಚಳುವಳಿಗೆ ಬಹುದೊಡ್ಡ ದೀರ್ಘ ಪರಂಪರೆಯಿದೆ. ಜಾಗತಿಕ ಮಟ್ಟದಲ್ಲಿ ಈ ದಿನಮಾನಗಳಿಗೂ ಅನ್ವಯವಾಗುವ ಕಾರ್ಲ್ ಮಾರ್ಕ್ಸ್ ರಂತಹ ತಾತ್ವಿಕತೆಯೊಂದಿಗೆ ಬೆರೆಯುವ ಪರಂಪರೆಯ ಕೊಂಡಿ ಹೊಂದಿದೆ. ಆದರೆ ಬಸವ ಮತ್ತು ಶರಣರನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಮತ್ತು ವಚನ ಚಿಂತನೆಗಳನ್ನು ತಿರುಚುವ ಹುನ್ನಾರವು ಹುರಿಗೊಳ್ಳುತ್ತಿದೆ. ಆದ್ದರಿಂದಲೇ ಬಸವ ಜಯಂತಿಯಂದು ಬಸವೋತ್ಸವ ಸಮಿತಿಯ ವೇದಿಕೆಯಲ್ಲಿ ಅತಿಥಿಯಾಗಿ ಮಾತನಾಡುತ್ತಿದ್ದ ಅರುಣ ಜೋಳದ ಕೂಡ್ಲಗಿ ಅವರ ಉಪನ್ಯಾಸವನ್ನು ಅರ್ಧಕ್ಕೇ ನಿಲ್ಲಿಸಲಾಗಿದೆ. ಬುದ್ದ ಬಸವ ಅಂಬೇಡ್ಕರ್ ಪ್ರಜ್ಞೆ ಇರುವ ಎಲ್ಲರೂ ಇದನ್ನು ತೀವ್ರವಾಗಿ ಖಂಡಿಸಬೇಕಿದೆ. ವಚನ ವಿರೋಧಿಗಳನ್ನು ವೇದಿಕೆಯ ಮೇಲೆ ವಿಜೃಂಭಿಸುವ  ಪ್ರವೃತ್ತಿಯು ಅಪಾಯಕಾರಿಯಾದದ್ದಾಗಿದೆ. ವೈದಿಕಶಾಹಿ-ಪುರೋಹಿತಶಾಹಿ ನಂಬಿಕೆಯುಳ್ಳವರು ಎಂದಿಗೂ ಬುದ್ದ ಬಸವ ಅಂಬೇಡ್ಕರ್ ಚಿಂತನೆಗಳನ್ನು ಒಪ್ಪಲಾರರು. ಈ ಸ್ಪಷ್ಟತೆಯು ಜಯಂತಿ ನಡೆಸುವ ಸಂಘ ಸಂಸ್ಥೆ ಮತ್ತು ಆ ವ್ಯಕ್ತಿಗಳಿಗೂ ಇರುವ ಅಗತ್ಯವಿದೆ ಎಂದು ಹೇಳಿದರು.

ಇನ್ನೊಬ್ಬ ಮುಖ್ಯ ಅತಿಥಿಗಳಾದ ಶಿವಶರಣ ಮುಳೆಗಾಂವ ಅವರು ಮಾತನಾಡುತ್ತ “ಬಸವ ತತ್ವವು ಶ್ರಮಜೀವಿಗಳ ತತ್ವವಾಗಿದೆ. ಕಾಯದಿಂದ ಕಷ್ಟಗೈದು ಲೋಕ ನಿರ್ಮಿಸಿದವರು ಕಾಯಕ ಜೀವಿಗಳು. ಅವರ ದೇಹವೇ ದೇವಾಲಯವೆಂದ ಬಸವಣ್ಣನವರ ಚಿಂತನೆಗಳು ಅತ್ಯಂತ ವೈಜ್ಞಾನಿಕ ಮೌಲ್ಯ ಹೊಂದಿವೆ ಎಂದು ಹೇಳಿದರು.

ಡಾ.ಶಿವಗಂಗಾ ರುಮ್ಮ ಇವರು ಬಸವಾದಿ ಶರಣರ ಚುಂತನೆಗಳ ಪ್ರಸ್ತುತತೆಯನ್ನು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಚಂದಮ್ಮ ವಹಿಸಿದರು. ಯುವ ವಕೀಲರಾದ ಶಾಂತೇಷ ಕೋಡ್ಲೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ವಿದ್ಯಾರ್ಥಿ ಯುವ ಸಂಘಟನೆಯ ಸಾಂಸ್ಕೃತಿಕ ವಿಭಾಗದಿಂದ ಲವಿತ್ರ, ಸುಜಾತಾ, ಬೃಂದಾ, ಪ್ರಿಯಾಂಕ, ಸವ್ಯ ಇವರಿಂದ ವಚನ ಮತ್ತು ಕ್ರಾಂತಿ ಗೀತೆಗಳನ್ನು ಹಾಡಲಾಯಿತು.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

5 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420