ಕಲಬುರಗಿ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ರಾಷ್ಟ್ರ ಮಟ್ಟಕ್ಕೆ ಸಂಬಂಧಿಸಿದಂತೆ “ರಾಷ್ಟ್ರೀಯ ಲೋಕ ಅದಾಲತ್” ಕಾರ್ಯಕ್ರಮವನ್ನು ಇದೇ ಜುಲೈ 13 ರಂದು ನಡಿಯಲಿದೆ ಎಂದು ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್. ನಾಗಶ್ರೀ ಅವರು ಹೇಳಿದರು.
ಅವರು ಶನಿವಾರದಂದು ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವÀ ಎ,ಡಿ.ಆರ್. ಕಟ್ಟಡದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪ್ರತಿವರ್ಷ ಹೆಚ್ಚಿನ ಕೇಸ್ಗಳು ಬರುತ್ತಿದ್ದು, ಅವುಗಳನ್ನು ಇತ್ಯರ್ಥ ಮಾಡಿದ್ದೇವೆ ಕಲಬುರಗಿ ಜಿಲ್ಲಾ ನ್ಯಾಯಾಲಯಗಳಲ್ಲಿ ಹೆಚ್ಚಿನ 50,300 ಪ್ರಕರಣಗಳು ಬಾಕಿ ಇದ್ದು, ಇವುಗಳನ್ನು ಬೇಗನೆ ಇತ್ಯರ್ಥಪಡಿಸಲಾಗುವುದು ಎಂದರು.
ಚೆಕ್ ಬೌನ್ಸ್ ಕೇಸ್ಗಳು ಹಣವಸೂಲಿ ಅಪಘಾತ ಕೇಸ್ಗಳು ಹಾಗೂ ಇದಲ್ಲದೇ ಸಿವಿಲ್ ವ್ಯಾಜ್ಯಗಳು ಹಲವಾರು ವರ್ಷಗಳಿಂದ ಸುಮಾರು ಎಲ್ಲಾ ತರಹದ ಕೇಸ್ ರಾಜಿ ಸಂಧಾನ ಮಾಡುವ ವಿಚಾರ ಇರುವುದರಿಂದ ಕಕ್ಷೀದಾರ ಮನವೋಲಿಸಿ ಸಾಧ್ಯವಾದಷ್ಟು ಜನತಾ ನ್ಯಾಯಾಲಯಗಳಲ್ಲಿ ಉಭಯ ಪಕ್ಷಗಾರರು ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ನೀಡಲಾಗುವುದು ಎಂದರು.
ಕಲಬುರಗಿ ಜಿಲ್ಲಾ ನ್ಯಾಯಾಲಯಗಳಲ್ಲಿ ಹೆಚ್ಚಿನ ಪ್ರಕರಣಗಳು ಬಾಕಿ ಇದ್ದು, ಈ ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದ ಪ್ರಕರಣಗಳು ರಾಜಿ ಸಂಧಾನ ಮಾಡುವುದರ ಮೂಲಕ ಇತ್ಯರ್ಥಪಡಿಸುವ ಗುರಿಯನ್ನು ಇಟ್ಟುಕೊಳ್ಳಾಗಿದೆ ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುಕೊಳ್ಳುವ ಉಭಯ ಪಕ್ಷಗಾರರಿಗೆ ಮಾಹಿತಿ ನೀಡಲಾಗುತ್ತಿದೆ. ಜನತಾ ನ್ಯಾಯಾಲಯದಲ್ಲಿ ಕೊಡುವ ತೀರ್ಪು ನ್ಯಾಯಾಲಯದಲ್ಲಿ ಕೊಡುವ ತೀರ್ಪಿನಷ್ಟು ಪರಿಣಾಮಕಾರಿಯಾಗಿರುತ್ತದೆ. ಯಾವುದೇ ಮೇಲ್ಮನವಿ ಅಥಾವ ಖರ್ಚು ವೆಚ್ಚ್ ಇರುವುದಿಲ್ಲ ಇಂತಹ ಒಂದು ಸದುಪಯೋಗ ಪಡೆದುಕೊಳ್ಳಬೇಕೆಂದರು
ಹೆಚ್ಚು ಜನರಿಗೆ ಅದರಲ್ಲೂ ಸಹ ಹಳ್ಳಿಯಲ್ಲಿರುವ ಜನ, ಮುಗ್ದರು,ಅನಕ್ಷರಸ್ಥರಿಗೆ ಇದರ ಬಗ್ಗೆ ಅರಿವಿಲ್ಲಾ ಅದಕ್ಕಾಗಿ ಇದರ ಬಗ್ಗೆ ಹೆಚ್ಚು ಪ್ರಚಾರ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನಮ್ಮ ನ್ಯಾಯಾಲಯಗಳಲ್ಲಿ ಅತಿ ಹೆಚ್ಚು ಕೇಸುಗಳು ದಾಖಲಿಸಿದೆ ಎಷ್ಟೇ ನ್ಯಾಯಾಲಯಗಳು ಹೆಚ್ಚಿಗೆ ಮಾಡಿದ್ರು ಪ್ರಬಲವಾಗಿ ಮತಷ್ಟು ಕೇಸುಗಳು ಜಾಸ್ತಿ ಆಗುತ್ತಿವೆ ಈ ರಾಜಿ ಸಂಧಾನದ ಮೂಲಕ ಕೇಸ್ಗಳ ತೀರ್ಮಾನ ಮಾಡಿದರೆ ಬೇರೆ ಕೇಸ್ ತೀರ್ಮಾನ ಮಾಡುವುದಕ್ಕೆ ಸಮಯ ಸಿಗುತ್ತೆ ಹೀಗಾಗಿ ಜುಲೈ 13 ರಂದು ರಾಷ್ಟ್ರೀಯ ಲೋಕ ಆದಾಲತ್ನಲ್ಲಿ ಎಲ್ಲಾರು ಅತ್ಯಂತ ಆಸಕ್ತಿಯಿಂದ ಭಾಗವಹಿಸಿ ಇತ್ಯಾರ್ಥ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡರು.
ನಿಮ್ಮ ವ್ಯಾಜ್ಯವನ್ನು ಜನತಾ ನ್ಯಾಯಾಲಯದ ಮೂಲಕ ಕಡಿಮೆ ಖರ್ಚಿನದಲ್ಲಿ ಮತ್ತು ಶೀಘ್ರವಾಗಿ ಇತ್ಯರ್ಥಗೊಳಿಸಿಕೊಳ್ಳಬಹುದು,. ಜನತಾ ನ್ಯಾಯಾಲಯದಲ್ಲಿ ನೀವು ವಕೀಲರ ಮುಖಾಂತರ ಅಥವಾ ನೀವೇ ನೇರವಾಗಿ ಭಾಗವಹಿಸಬಹುದು, ಸೌಹಾರ್ದಯುತವಾಗಿ ಪ್ರಕರಣಗಳು ಇತ್ಯರ್ಥಗೊಳ್ಳುವುದರಿಂದ ಉತ್ತಮ ಬಾಂಧವ್ಯ ಉಳಿಯುವದರ ಜೊತೆ ನೆಮ್ಮದಿಯು ಸಹ ಉಳಿಯುವುದು ಎಂದು ತಿಳಿಸಿದರು.
ಜನತಾ ನ್ಯಾಯಾಲಯದಲ್ಲಿ ಎಲ್ಲ ರೀತಿಯ ವ್ಯಾಜ್ಯಪೂರ್ವ ಪ್ರಕರಣಗಳನ್ನು ಪ್ರತಿ ನಿತ್ಯ ನಡೆಯುತ್ತಿರುವ ಜನತಾ ನ್ಯಾಯಾಲಯದಲ್ಲಿ ಸಂಧಾನದ ಮುಖೇನ ಇತ್ಯರ್ಥಪಡಿಸಿಕೊಳ್ಳುವ ಅತ್ಯುತ್ತಮ ಅವಕಾಶವಿದೆ ಎಂದರು.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಜಿಲ್ಲೆಯಲ್ಲಿರುವ ಯಾವುದೇ ತಾಲೂಕು ಕಾನೂನು ಸೇವೆ ಸಮಿತಿಯನ್ನು ಸಂಪರ್ಕಿಸಬಹುದು. ಅದೇ ರೀತಿಯಾಗಿ ಖಾಯಂ ಜನತಾ ನ್ಯಾಯಾಲಯದ ಕಚೇರಿಯಲ್ಲಿ ಸಹ ಸಂಪರ್ಕಿಸಲು ಕೋರಲಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿಗಳಾದ ಶ್ರೀನಿವಾಸ ನವಲೇ ಅವರು ಇದ್ದರು.