ಬಿಸಿ ಬಿಸಿ ಸುದ್ದಿ

ಸಡಗರ – ಸಂಭ್ರಮದಿಂದ ಜರುಗಿದ ಭಂಕೂರಿನ ಬಂಡಿ ಓಡಿಸಿ ಕರಿ ಹರಿಯುವ ಜಾತ್ರೆ

ಶಹಾಬಾದ: ತಾಲೂಕಿನ ಭಂಕೂರ ಗ್ರಾಮದ ಗ್ರಾಮ ದೇವತೆಯಾದ ಕೆರಿಯಮ್ಮ ದೇವಿಯ ಜಾತ್ರೆಯಲ್ಲಿ ಮಂದಿರದ ಪಕ್ಕದಲ್ಲಿರುವ ಗುಡ್ಡದಿಂದ ಬಂಡಿ ಓಡಿಸಿ ಹಾಗೂ ಕರಿ ಹರಿಯುವ ವಿಶಿಷ್ಟವಾದ ಕಾರ್ಯಕ್ರಮ ಕಾರ ಹುಣ್ಣಿಮೆ ನಿಮಿತ್ಯ ಶನಿವಾರ ಗ್ರಾಮದಲ್ಲಿ ಅಪಾರ ಭಕ್ತಾಧಿಗಳ ಮಧ್ಯೆ ಸಡಗರ – ಸಂಭ್ರಮದಿಂದ ನಡೆಯಿತು.

ಬಂಡಿ ಓಡಿಸಿ ಕರಿ ಹರಿದರು : ಕರಿ ಹರಿಯುವುದಕ್ಕಾಗಿ ಸುಮಾರು ದಿನಗಳಿಂದ ಜೋಡೆತ್ತುಗಳನ್ನು ಮೇಯಿಸಿ ಬಂಡಿಗೆ ಕಟ್ಟುತ್ತಾರೆ. ಅದರೂಳಗೆ ಖಡ್ಗದಾರಿಯಾದ ಕುಲಕರ್ಣಿ ಹಾಗೂ ಬಾರಕೋಲು ಹಿಡಿದ ಮಜ್ಜಿಗೆ ಮನೆತನದ ವ್ಯಕ್ತಿ ವಿಶೇಷ ಪೂಜೆ ಸಲ್ಲಿಸಿ ಸಂಜೆ ಮಂದಿರದ ಗುಡ್ಡದಿಂದ ಬಂಡಿ ಓಡುವ ಮನಮೋಹಕ ದೃಶ್ಯವನ್ನು ನೋಡಲು ಸಾವಿರಾರು ಜನರು ತುದಿಗಾಲಿನಲ್ಲಿ ನಿಂತ್ತಿತ್ತು. ಬಂಡಿ ಓಡುವ ರೋಮಾಂಚನ ನೋಟವನ್ನು ನೋಡಿ ದೇವಿಗೆ ಕೈ ಮುಗಿದು ಧನ್ಯಾರ್ಥತೆಯನ್ನು ಅನುಭವಿಸಿದರು.

ನಂತರ ಬಂಡಿಯೂ ಊರೊಳಗೆ ಪ್ರವೇಶಿಸಿ ಈಶ್ವರ ದೇವಸ್ಥಾನದ ಹತ್ತಿರ ಬಂದು ನಿಂತು ಅಗಸಿಗೆ ಕಟ್ಟಿದ ಸಿಂಗರಿಸಿದ ಹಗ್ಗವನ್ನು (ಕರಿ) ಹರಿಯುವ ರೋಮಾಂಚನ ದೃಶ್ಯವನ್ನು ನೋಡಲು ಸಾವಿರಾರು ಜನರು ಕಿಕ್ಕಿರಿದು ನಿಂತ್ತಿತ್ತು. ಖಡ್ಗದಾರಿಯಾದ ಕುಲಕರ್ಣಿ ಹಗ್ಗವನ್ನು ಕಡಿದಾಗ ಎಲ್ಲರೂ ಕರಿಹರಿಯಿತು ಎಂದು ಹರ್ಷೋದ್ಘಾರಗೈದರು.

ಬೆಳಿಗ್ಗೆಯಿಂದಲೇ ಉಪವಾಸವಿದ್ದ ಗ್ರಾಮಸ್ಥರು ಕರಿ ಹರಿದ ನಂತರವೇ ಉಪವಾಸವನ್ನು ಬಿಟ್ಟರು. ಈ ಪದ್ಧತಿ ಎಂದಿನಿಂತಲೂ ನಡೆದುಬಂದಿದೆ.ಅಲ್ಲದೇ ಬಂಧು ಮಿತ್ರರನ್ನು ನೆರೆ ಹೊರೆಯವರನ್ನು ಕರೆದು ಪ್ರಸಾದ ಸ್ವೀಕರಿಸುವ ಕ್ಷಣಗಳು ಗ್ರಾಮದ ತುಂಬೆಲ್ಲಾ ಕಂಡುಬಂದಿತು.ಅಲ್ಲದೇ ದೇವಿಯ ಜಾತ್ರೆಯಾಗುವವರೆಗೂ ಯಾರು ಬಿತ್ತನೆ ಕಾರ್ಯ ಕೈಗೊಳ್ಳುವುದಿಲ್ಲ. ಜಾತ್ರೆಯ ನಂತರವೇ ಈ ಗ್ರಾಮದ ಜನರು ಬಿತ್ತನೆ ಮಾಡುವುದು ಎಂದಿನಿಂದಲೂ ನಡೆದುಕೊಂಡು ಬದಿರುವುದು ಇಲ್ಲಿನ ವಿಶೇಷ ಪದ್ಧತಿಯಾಗಿದೆ. ಈ ಒಂದು ಜಾತ್ರೆಯಲ್ಲಿ ಎಲ್ಲಾ ಜಾತಿ ಜನಾಂಗದವರು ತಮ್ಮ ತಮ್ಮ ಚಾಜಾ ಮಾಡುತ್ತಾ ದೇವಿಗೆ ಸೇವೆ ಸಲ್ಲಿಸಿದರು.

ಗ್ರಾಮದ ಎಲ್ಲಾ ಸಮುದಾಯದ ಮುಖಂಡರು ಸೇರಿಕೊಂಡು ಜಾತ್ರೆಯನ್ನು ಯಶಸ್ವಿಗೊಳಿಸಿದರು.

ದೂರದ ಆಂದ್ರಪ್ರದೇಶ, ಗುಜರಾತ, ಮಹಾರಾಷ್ಟ್ರ ಹಾಗೂ ಸುತ್ತಮುತ್ತಲಿನ ಶಹಾಬಾದ, ವಾಡಿ,ರಾವೂರ, ಮುತ್ತಗಿ, ಶಂಕರವಾಡಿ, ವಾಡಾ ತಾಂಡಾ, ತರಿತಾಂಡಾ, ತೆಗನೂರ ಮುಗುಳನಾಗಾಂವ, ನಂದೂರ , ಅಲ್ದಿಹಾಳ, ಪೇಠಸಿರೂರ, ಗೋಳಾ,ಮಾಲಗತ್ತಿ ,ಶಹಾಬಾದ ಮುಂತಾದ ಗ್ರಾಮದ ಸಮಸ್ತ ಜನರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜಾತ್ರೆಯ ನಿಮಿತ್ತ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿತ್ತು.

emedialine

Recent Posts

ಸುರಪುರ-ಕಲಬುರ್ಗಿ ಸಗರನಾಡು ಬಸ್‍ಗಳ ಸಂಚಾರ ಹೆಚ್ಚಿಸಿ; ರಮೇಶ ದೊರೆ

ಸುರಪುರ: ನಗರದಿಂದ ಕಲಬುರಗಿ ನಗರಕ್ಕೆ ಸಗರನಾಡು ಬಸ್‍ಗಳ ಸಂಚಾರದಲ್ಲಿ ಸಾಕಷ್ಟು ಕಡಿಮೆಗೊಂಡಿದ್ದು ಇದರಿಂದಾಗಿ ಸುರಪುರ ದಿಂದ ಕಲಬುರಗಿ ನಗರಕ್ಕೆ ಸಂಚರಿಸಲು…

9 hours ago

ಸುರಪುರ:ಬಸ್ ಪಾಸ್ ನೀಡಲು ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಸುರಪುರ: ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುವಂತೆ ಹಾಗೂ ವಿವಿಧ ಗ್ರಾಮಗಳಿಗೆ ಬಸ್ ಓಡಿಸಲು ಆಗ್ರಹಿಸಿ ಅಖಿಲ ಭಾರತ…

9 hours ago

ಬೆಂಗಳೂರ ನಿರ್ಮಾತೃ ಕೆಂಪೇಗೌಡ ಹೆಸರು ಅಜಾರಾಮರ

ಸುರಪುರ:ಬೆಂಗಳೂರ ನಿರ್ಮತೃ ನಾಡಪ್ರಭು ಕೆಂಪೇಗೌಡ ಅವರು ಭಾರತದ ಇತಿಹಾಸದಲ್ಲಿ ಅವರ ಹೆಸರು ಅಜರಾಮರವಾಗಿದೆ ಎಂದು ತಹಸಿಲ್ದಾರ್ ಕೆ.ವಿಜಯಕುಮಾತ ಮಾತನಾಡಿದರು. ನಗರದ…

9 hours ago

ಸಿಮೆಂಟ್ ಕಾರ್ಖಾನೆಗಳಲ್ಲಿ 50% ಸ್ಥಳಿಯರಿಗೆ ಉದ್ಯೋಗ ನೀಡಲು ಕೇಂದ್ರ ಸಚಿವರಿಗೆ ಮನವಿ

ಶಹಾಬಾದ, ಕಡೇಚೂರು-ಬಾಡಿಯಾಳ ಕಾರ್ಖಾನೆ ಪುನರ ಪ್ರಾರಂಭಿಸಲು ಮನವಿ ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಅನೇಕ ಸಿಮೆಂಟ್ ಕಾರ್ಖಾನೆ ಹಾಗೂ ಸಕ್ಕರೆ…

9 hours ago

ಶಾಲೆ-ಅಂಗನವಾಡಿಗಳಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ವ್ಯವಸ್ಥೆ ವೀಕ್ಷಣೆ

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ ಭೇಟಿ  ಕಲಬುರಗಿ; ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ…

10 hours ago

ದಲಿತ ಚಳುವಳಿಗೆ: ಹಾಸನದಲ್ಲಿ 50ನೇ ವರ್ಷ ರಾಜ್ಯಮಟ್ಟದ ಸಮಾವೇಶ ಜೂನ್ 29ರಂದು

ಕೊಪ್ಪಳ : ದಲಿತ ಚಳುವಳಿಯ ರೂವಾರಿ ಪ್ರೊ.ಬಿ,ಕೃಷ್ಣಪ್ಪ ಅವರ ಜನುಮ ದಿನ ಹಾಗೂ ದಲಿತ ಚಳುವಳಿ ಗೆ 50 ವರ್ಷ…

10 hours ago