ಕಲಬುರಗಿ: ಜಿಲ್ಲೆಯ ಕಮಲಾಪೂರ, ಓಕಳಿ ಆಲಗೂಡ್ ಗ್ರಾಮಗಳಲ್ಲಿ ಗುಲಾಬಿ ಗಿಡದ ಎಲೆಗಳಲ್ಲಿ ಎಲೆ ಚುಕ್ಕಿ ರೋಗ ಕಂಡು ಬಂದಿದ್ದು, ಇದರಿಂದಾಗಿ ಎಲೆಗಳ ರಚೆನ, ಹೂವುಗಳ ಗಾತ್ರ, ಇಳುವರಿ ಕುಂಟಿತ ತಡೆಯಲು ಕಾರ್ಬನ್ಡೈಜಿಂ 1 ಗ್ರಾ. ಅಥವಾ ಡೈಪನ್ಕೋನೊಜ್ವಾಲ್ 1 ಮೀ. ಅಥವಾ ಪ್ರೋಬಿಕನೋಜೋಲ್ 1 ಮೀ. ಪ್ರತಿ ಲೀಟರ್ ನೀರಿನಲ್ಲಿ ಬರೆಸಿ ಸಿಂಪಡಿಸಬೇಕೆಂದು ಕೆವಿಕೆ, ಕಲಬುರಗಿಯ ಸಸ್ಯರೋಗ ವಿಜ್ಞಾನಿಗಳಾದ ಡಾ. ಜಹೀರ್ ಅಹ್ಮದ್ ತಿಳಿಸಿದ್ದಾರೆ.
ಮುಂಗಾರು ಮಳೆ ಸಾಧಾರಣದಿಂದ ಉತ್ತಮವಾಗಿದ್ದು, ಗಿಡಗಳಿಗೆ ಯೋಗ್ಯ ಪೋಷಕಾಂಶ ಹಾಗೂ ಚಾಚನೆ ಸಮಯ ಗುಲಾಬಿ ರೈತರು ಸಮರ್ಪಕವಾಗಿ ಕೈಗೊಳ್ಳಬೆಕೆಂದು ಕೆವಿಕೆಯ ತೋಟಗಾರಿಕೆಯ ವಿಜ್ಞಾನಿಗಳಾದ ಡಾ. ಸನ್ಮತಿ ನಾಯಕ್ ರವರು ತಿಳಿಸಿದರು. ರೈತ ಮಹಾದೇವಪ್ಪಾ, ಬಸವರಾಜ, ರೇವಣಸಿದ್ದಪ್ಪಾ, ಸುಲೋಚನಾ ಮತ್ತು ಆನಂದ ಉಪಸ್ಥಿತರಿದ್ದರು.
ಕಲಬುರಗಿಯಲ್ಲಿ ಗುಲಾಬಿ ಕೃಷಿಗೆ ಉತ್ತಮ ಬೇಡಿಕೆ ಇದ್ದು, ರೈತರು ನೂತನ ತಳಿಗಳನ್ನು ಬೆಳೆಸಿದ್ದಲ್ಲಿ ಹಾಗೂ ಯೋಗ್ಯ ಸಸ್ಯ ಸಂರಕ್ಷಣೆ ಕೈಗೊಂಡಲ್ಲಿ ಹೈದ್ರಾಬಾದ್ ಮಾರುಕಟ್ಟೆಗೆ ಗುಣಮಟ್ಟದ ಗುಲಾಬಿ ಹೂವು ಸಂಪರ್ಕ ಸಾಧ್ಯ ಎಂದು ಕೆವಿಕೆ ಮುಖ್ಯಸ್ಥರಾದ ಡಾ. ರಾಜು ತೆಗ್ಗೆಳ್ಳಿ ತಿಳಿಸಿದರು.
ನವದೆಹಲಿ: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ ಕಾಳಗಿ ರವರು ಎಐಸಿಸಿ ಅಧ್ಯಕ್ಷರು…
ಕಲಬುರಗಿ: ಕರ್ನಾಟಕ ಸರ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷ ಜುಲೈ…
ಕಲಬುರಗಿ: ‘ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕು. ಮುಂಬರುವ ದಿನಗಳಲ್ಲಿ ಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ…
ಕಲಬುರಗಿ: ವಚನ ಪಿತಾಮಹ ಎಂದು ಕರೆಸಿಕೊಳ್ಳುವ ಡಾ. ಫ.ಗು. ಹಳಕಟ್ಟಿ ಯವರು ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವ…
ಶಹಾಬಾದ: ಖಾಸಗಿ ಟೆಲಿಕಾಂ ಕಂಪನಿಗಳು ಮೊಬೈಲ್ ರೀಚಾರ್ಜ್ಗಳ ಬೆಲೆಗಳನ್ನು ಅನಿಯಂತ್ರಿತವಾಗಿ ಹೆಚ್ಚಳ ಮಾಡಿರುವುದನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿವಾಯ್ಓ ವತಿಯಿಂದ…
ಶಹಾಬಾದ :ಎಲ್ಲರಿಗೂ ಸರಕಾರಿ ನೌಕರಿ ಬೇಕು.ಆದರೆ ಸರಕಾರಿ ಶಾಲೆಯಲ್ಲಿ ನಿಮ್ಮ ಮಕ್ಕಳು ಓದುವುದು ಬೇಡ ಎಂದರೆ ಹೇಗೆ ? ಮೊದಲು…