ಬಿಸಿ ಬಿಸಿ ಸುದ್ದಿ

ಕೊಲುವೆನೆಂಬ ಭಾಷೆ ದೇವನದಾದರೆ ಗೆಲುವೆನೆಂಬ ಭಾಷೆ ಭಕ್ತನದಾಗಬೇಕು

ಬಸವಾದಿ ಶರಣರ ರಚನೆಯ ವಚನ ಎನ್ನುವುದು ಬಹಳ ಮೌಲಿಕವಾದ ನುಡಿ. ‘ವ’ ಎಂಬ ಸೂತ್ರವನ್ನು ಬಿಡಿಸುವುದಾದರೆ, ವ ಎಂಬ ಮೊದಲ ಸೂತ್ರ ಬಿಡಿಸಿ ಹೇಳುವುದಾದರೆ ವಚನದಲ್ಲಿ ಶುದ್ಧನಾಗಿರು ಎಂದರ್ಥ.

ಮಾತನಾಡುವ ಮೂಲಕ ಮನುಷ್ಯ. ಮಾತಿನಿಂದ ಮನುಷ್ಯತ್ವ. ಮಾತು ಮನುಷ್ಯನ ಬಹು ದೊಡ್ಡ ಸಂಪತ್ತು. ಮಾತನಾಡುವ ಯೋಗ್ಯತೆಯನ್ನು ಪ್ರಕೃತಿದತ್ತವಾಗಿ ಪಡೆದುಕೊಂಡ ಮನುಷ್ಯನ ವಚಿಸುವಿಕೆ ಶುದ್ಧವಾಗಿರಬೇಕು. ಮಾತಿನಲ್ಲಿ ಸತ್ಯ ತುಂಬಿರಬೇಕು.

೧೨ನೇ ಶತಮಾನದ ಶರಣರು ವಾಚಾಳಿಗಳಂತೆ ವಚಿಸಲಿಲ್ಲ. ನುಡಿದಂತೆ ನಡೆದ ಶರಣರು ತಾವು ಬರೆದಂತೆ ಬಾಳಿದರು. ನಡೆದಂತೆ ನುಡಿದ ಅವರ ಅನುಭಾವದ ನುಡಿಗಳು ವಚನಗಳಾದವು. ಅಂತೆಯೇ ವಿಚಾರವಂತರು
ವಚನಗಳನ್ನು ತತ್ವಶಾಸ್ತ್ರದ ಸಂಗಮ ಎಂದು ಕರೆದರು.

ಜಂಬೂದ್ವೀಪದ ನವಖಂಡ ಪೃಥ್ವಿಯೊಳಗೆ
ಕೇಳಿರಯ್ಯ ಎರಡಾಳಿನ ಭಾಷೆಯ
ಕೊಲುವೆನೆಂಬ ಭಾಷೆ ದೇವನದು
ಗೆಲುವೆನೆಂಬ ಭಾಷೆ ಭಕ್ತನದು
ಸತ್ಯವೆಂಬ ಕೂರಲಗನೆ ಎತ್ತಿಕೊಂಡು
ಸದ್ಭಕ್ತರು ಗೆದ್ದರು ಕಾಣಾ
ಕೂಡಲಸಂಗಮದೇವಾ

ಎಂಬ ಬಸವಣ್ಣನವರ ವಚನವು ಶರಣರ ವಚನ ಹಾಗೂ ಮಾತಿನ ಮಹತ್ವ ತಿಳಿಸಿಕೊಡುವುದಲ್ಲದೆ ಶರಣರ ನಿಲುವು ತೋರಿಸಿಕೊಡುವಂತಿದೆ.

ಜ್ಞಾನ, ವಿಜ್ಞಾನ ಸುಜ್ಞಾನಗಳ ಸಂಗಮವೇ ವಚನ ಸಾಹಿತ್ಯ. ಇದರಲ್ಲಿ ಅಂಗ ಬದುಕಿನಿಂದ ಲಿಂಗ ಬದುಕಿನೆಡೆಗೆ ಸಾಗುವ ಮೌಲ್ಯಗಳಿವೆ. ಶರಣರ ಮುಂದೆ ಬದುಕಿನ ಗುರಿ, ನಿಲವು ಸ್ಪಷ್ಟವಾಗಿತ್ತು.

ಶರಣರ ಆನುಭಾವಿಕ ವಚನಗಳನ್ನು ಮುಂದಿಟ್ಟುಕೊಂಡು ‘ ನುಡಿದರೆ ಮತ್ತಿನ ಹಾರ, ಸ್ಪಟಿಕದ ಸಲಾಕೆ ಅಷ್ಟೇ ಏಕೆ ಆ ಲಿಂಗವೇ ಮೆಚ್ಚಿ ಹೌದು, ಹೌದು ಎನ್ನುವಂತೆ ಬದುಕಬೇಕು.

emedialine

Recent Posts

ಸಾಧನೆ ಮಾಡಲು ಓದಿನಷ್ಟೆ ಕ್ರೀಡೆಯಲ್ಲೂ ಅವಕಾಶವಿದೆ

ಸುರಪುರ:ಯಾವುದೇ ವ್ಯಕ್ತಿ ಸಾಧನೆ ಮಾಡಲು ಕೇವಲ ಓದು ಒಂದೇ ಮುಖ್ಯವಲ್ಲ,ಇಂದು ಓದಿನಷ್ಟೆ ಕ್ರೀಡೆಯಲ್ಲೂ ಸಾಧನೆ ಮಾಡಲು ಅವಕಾಶವಿದೆ ಎಂದು ಕ್ಷೇತ್ರ…

2 hours ago

ಕನ್ನಡ ನಾಡಿನ ಅಭಿವೃದ್ಧಿಯಲ್ಲಿ ಅರಸು ಕೊಡುಗೆ ಅಪಾರವಾಗಿದೆ

ಸುರಪುರ: ಕನ್ನಡ ನಾಡು ಇಂದು ಇಷ್ಟೊಂದು ಸಮೃದ್ಧವಾಗಿದೆ,ಅಭಿವೃಧ್ಧಿಯಾಗಿದೆ ಎಂದರೆ ಅದಕ್ಕೆ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಕೊಡುಗೆ ಅಪಾರವಾಗಿದೆ…

2 hours ago

ಸ್ಲಂ ಜನಾಂದೋಲನ ಸಂಘಟನೆಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಹೊಸ ಪಡಿತರ ಚೀಟಿ ನೀಡುವ ನಿಯಮ ಸರಳೀಕರಣಗೊ- ಳಿಸಬೇಕು ಹಾಗೂ ನೈಜ ಫಲಾನುಭ- ವಿಗಳಿಗೆ ಹೊಸ ಪಡಿತರ ಚೀಟಿಗಳನ್ನು…

2 hours ago

ಕಲ್ಯಾಣ ಕರ್ನಾಟಕ ಛಾಯಾ ಸಾಧಕ ಪ್ರಶಸ್ತಿ ಪ್ರದಾನ

ಕಲಬುರಗಿ: ಛಾಯಾಗ್ರಾಹಕರು ಇಂದಿನ ಸಮಾಜದ ಪ್ರತಿಬಿಂಬರಾಗಿ ಕಾಣುತ್ತಾರೆ. ಎಲ್ಲಾ ಛಾಯಾಗ್ರಾಹಕರು ಒಗ್ಗಟ್ಟು ಇಟ್ಟುಕೊಂಡು ಸಂಘಟಿತರಾದರೆ ಸಂಘಕ್ಕೆ ಇನ್ನೂ ಹೆಚ್ಚಿನ ಬಲ…

2 hours ago

ಪ್ರತ್ಯೇಕ ಸ್ಮಶಾನ ಭೂಮಿಗಾಗಿ ಎಸ್ಸಿಖ/ಎಸ್ಟಿ ಒಗ್ಗಟು ಸಮಿತಿ ಸಿಎಂಗೆ ಮನವಿ

ಕಲಬುರಗಿ: ಜಿಲ್ಲೆಯಲ್ಲಿ ಎಸ್ಸಿ ಮತ್ತು ಎಸ್ಟಿ ಸಮುದಾಯಕ್ಕೆ ಸ್ಮಶಾನ ಭೂಮಿ ಇರುವುದಿಲ್ಲ, ಬಹುತೇಕರು ತಮ್ಮ ತಮ್ಮ ಹೊಲಗಳಲ್ಲಿ ಶವ ಸಂಸ್ಕಾರ…

2 hours ago

ಸಚೀನ್ ಫರತಾಬಾದ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿಗೆ ಮನವಿ

ಕಲಬುರಗಿ: ಪ್ರತಿ ವರ್ಷ ಆಚರಣೆ ಮಾಡುತ್ತಾ ಬರುತ್ತಿರುವ ಸೆಪ್ಟೆಂಬರ್ 17 ರಂದು ಕಲ್ಯಾಣ-ಕರ್ನಾಟಕ ವಿಮೋಚನೆ ದಿನಾಚರಣೆ ದಿನದಂದು ಸರಕಾರಿ ರಜೆ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420