ಬಿಸಿ ಬಿಸಿ ಸುದ್ದಿ

ಸತ್ಯಂ ಶಿವಂ ಸುಂದರಂ: ದೇವರ ಸ್ವರೂಪ ಕಟ್ಟಿಕೊಟ್ಟ ಶರಣರು

ನಮ್ಮ ಬದುಕಿನಲ್ಲಿ ಸಾಧನೆಯಿಲ್ಲದೆ ಪ್ರತಿಫಲ ಪಡೆಯುವುದು ಕಷ್ಟ. ಹೀಗಾಗಿ ನಾವು ವಚಿಸುವ ನುಡಿ ಶುದ್ಧವಾಗಿರಲಿ. ನಾಲಿಗೆಯ ಮೇಲೆ ಸತ್ಯ ಮೂಡಿ ಬರಲಿ. ‘ಸತ್ಯವೇವ ಜಯತೆ’ ಎಂದು ಬಾಳಬೇಕು.

ಶರಣರು, ಮಹಾನುಭಾವರು ‘ ಸತ್ಯಂ ವದ, ದರ್ಮಂ ಚರ’ ಎಂದು ಹೇಳಿದ್ದಾರೆ. ಸತ್ಯವನ್ನೇ ಹೇಳು, ಧರ್ಮದಿಂದ ಬಾಳು ಎಂಬುದು ಇದರರ್ಥ. ಸತ್ಯಂ ಶಿವಂ ಸುಂದರಂ ಮಾತುಗಳನ್ನು ಹೇಳುವ ಮೂಲಕ ದೇವರ ಸ್ವರೂಪವನ್ನು ಸ್ಪಷ್ಟವಾಗಿ ಕಟ್ಟಿಕೊಟ್ಟಿದ್ದಾರೆ.

ಅರ್ಥರೇಖೆಯಿದ್ದು ಫಲವೇನು?
ಆಯುಷ್ಯರೇಖೆ ವಿಲ್ಲದನ್ನಕ್ಕರ ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದು ಫಲವೇನು?
ಅಂಧಕನ ಕೈಯಲ್ಲಿಬದರ್ಪಣವಿದ್ದು ಫಲವೇನು?
ಮರ್ಕಟನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು?
ನಮ್ಮ ಕೂಡಲಸಂಗಮ ಶರಣರನರಿಯದವರ ಕೈಯಲ್ಲಿ ಲಿಂಗವಿದ್ದು ಫಲವೇನು?
ಶಿವಪಥವನ್ನರಿಯದಕ್ಕರ

ಶರಣರು ಬಾಯಿ ಮಾತಿನಲ್ಲಿ ಸಂದೇಶ ಕೊಡಲಿಲ್ಲ. ಅವರು ಮಾತಿಗಿಂತ ಶಬ್ದದೊಳಗಣ ನಿಶ್ಯಬ್ದಕ್ಕೆ ಹೆಚ್ಚಿನ ಮಹತ್ವ ಕೊಟ್ಟರು. ಶರಣರ ಇಂತಹ ಎತ್ತರದ ಸಾಧನೆಯನ್ನು ನಮ್ಮದಾಗಿಸಿಕೊಳ್ಳಬೇಕು. ನಾವು ಆಡುವ ಮಾತುಗಳು ಶಬ್ದಾಡಂಬರವಾಗದೆ, ಮಾತೆಂಬುದು ಜ್ಯೋತಿರ್ಲಿಂಗವಾಗಬೇಕು ಎಂದು ಅವರು ಹೇಳುತ್ತಾರೆ.

ನಾವಾಡುವ ಮಾತುಗಳು ಮಾತಿನ ಇತಿ ಮಿತಿ ಕಳೆದುಕೊಂಡು ಆನುಭಾವಿಕ ನೆಲೆಯಲ್ಲಿ ನಾಂಸಿಯಾಗಬೇಕು. ಜ್ಯೋತಿಯಿಂದ ಬರುವ ಅಮಿತ ಪ್ರಕಾಶ ಮಹತ್ವದ್ದು. ಸೀಮಿತವಾದ ಮಾತು ಸೀಮಾತೀತವಾಗಬೇಕಾದರೆ ಸ್ವರದಿಂದ ಬರುವ ಮಾತು ಪರತತ್ವವಾಗಿರಬೇಕಾಗುತ್ತದೆ.

ಶರಣ ಧ್ವನಿ ಮೌನ ಧ್ವನಿಯಾಗಿ ಎಲ್ಲರ ಹೃದಯದಲ್ಲಿ ಗಟ್ಟಿಯಾಗಿ ನಿಲ್ಲುತ್ತದೆ. ಶರಣರು ಲೋಕಕ್ಕಾಗಿ ಮಾನವ ಸಂದೇಶ ನೀಡಿದರು. ನಿಜದ ನೆಲೆಯ ಗತಿ ಶರಣರಿಗೆ ಗೊತ್ತಿತ್ತು.

ಶಬ್ದಾಡಂಬರ, ಶಬ್ದಜಾಲದಲ್ಲಿ ಸಿಲುಕಿಕೊಂಡಿರುವ ನಾವುಗಳು ಇಂದು ತಳಮಳದಲ್ಲಿದ್ದೇವೆ. ಕಳವಳದಲ್ಲಿದ್ದೇವೆ. ಗೊಂದಲದ ಈ ಬದುಕಿಗೆ ಶರಣರ ಸೂಳ್ನುಡಿಗಳೆ ನುಡಿಗಡಣಗಳಾಗಿವೆ.

emedialine

Recent Posts

ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಝೈನ್ ಗ್ಲೋಬಲ್ (UK) ಲಿಮಿಟೆಡ್ ಜೊತೆಗೆ ಒಪ್ಪಂದ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಹಾಗೂ ಝೈನ್ ಗ್ಲೋಬಲ್ UK ಸಂಸ್ಥೆಗಳ ನಡುವೆ ಇಂದು ಸಂಸ್ಥೆಯ ಮುಖ್ಯ ಕಚೇರಿಯಲ್ಲಿ…

4 hours ago

ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ 27ರಂದು ರಾಜ್ಯ ಭವನ ಚಲೋ

ಕಲಬುರಗಿ: ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ 27ರಂದು ರಾಜ್ಯ ಭವನ ಚಲೋ ಹಮ್ಮಿಕೊಳ್ಳಾಗಿದೆ ಎಂದು ಕರ್ನಾಟಕ ರಾಜ್ಯ ಶೋಷಿತ…

6 hours ago

ಸೇಡಂನಲ್ಲಿ ಸಮಗ್ರ ಕೃಷಿ ಪದ್ಧತಿಯ ಉತ್ಕೃಷ್ಟ ಕೇಂದ್ರ ಉದ್ಘಾಟನೆ

ಸೋಮವಾರದಿಂದ ಹೆಸರು ಖರೀದಿ ಕೇಂದ್ರ ಆರಂಭ: ಡಾ.ಶರಣಪ್ರಕಾಶ ಪಾಟೀಲ ಕಲಬುರಗಿ: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹೆಸರು ಖರೀದಿಸಲು ಸರ್ಕಾರ…

8 hours ago

ಬುಡಕಟ್ಟು ಜನರು ಮೂಲ ಜಾನಪದ ಕಲಾವಿದರು

ಕಲಬುರಗಿ ಕನ್ನಡ ಜಾನಪದ ಪರಿಷತ್, ಜಿಲ್ಲಾ ಘಟಕ ಕಲಬುರಗಿ ಹಾಗೂ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಜಾಫರಬಾದ ವತಿಯಿಂದ “ವಿಶ್ವ…

9 hours ago

ಕಲಬುರಗಿ: ಫರಸಿ ತುಂಬಿದ ಲಾರಿ ಪಲ್ಟಿ: ಹಲವರಿಗೆ ಗಾಯ

ಕಲಬುರಗಿ: 11ಕ್ಕೂ ಹೆಚ್ಚು ಜನ ಕಾರ್ಮಿಕರು ಮತ್ತು ಪರಸಿ ತುಂಬಿದ ಲಾರಿಯೊಂದು ಉರುಳಿಬಿದ್ದು ಹಲವರಿಗೆ ಗಂಭೀರವಾಗಿ ಗಾಯಗೊಂಡ ಘಟನೆ ಚಿಂಚೋಳಿ…

9 hours ago

ವಾಡಿ: ಶ್ರಾವಣ ಶನಿವಾರದ ಪ್ರಯುಕ್ತ ಪ್ರಸಾದ ಸಂತರ್ಪಣೆ

ವಾಡಿ: ಪಟ್ಟಣದ ಬಸ್ ನಿಲ್ದಾಣದ ಹತ್ತಿರ ವಿರುವ ಶಕ್ತಿ ಆಂಜನೇಯ ದೇವಸ್ಥಾನ ದಲ್ಲಿ ಮೂರನೇ ಶ್ರಾವಣ ಶನಿವಾರದ ಹಿನ್ನೆಲೆಯಲ್ಲಿ ವಡೆ…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420