ಬಿಸಿ ಬಿಸಿ ಸುದ್ದಿ

ಹಟ್ಟಿ ಪಟ್ಟಣಕ್ಕೆ ಪದವಿ ಕಾಲೇಜು ಮಂಜೂರುಗೆ ಒತ್ತಾಯಿಸಿ ಸಂಸದರಿಗೆ ಎಸ್ಎಫ್ಐ ಆಗ್ರಹ

ಹಟ್ಟಿ: ಪಟ್ಟಣಕ್ಕೆ ಪದವಿ ಕಾಲೇಜನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ರಾಯಚೂರು ಜಿಲ್ಲಾ ಸಮಿತಿಯಿಂದ ರಾಯಚೂರು-ಯಾದಗಿರಿ ಲೋಕಸಭಾ ಸದಸ್ಯ ಕುಮಾರ್ ನಾಯಕ್ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದೆ.

ಬುಧವಾರ ದಂದು ಹಟ್ಟಿ ಚಿನ್ನದ ಗಣಿ ಪ್ರವಾಸಿ ಮಂದಿರದಲ್ಲಿ ಮನವಿ ಪತ್ರ ಸಲ್ಲಿಸಿದ ಎಸ್ಎಫ್ಐ ಸಂಘಟನೆಯು ಕಾರ್ಯಕರ್ತರು ಹಟ್ಟಿಯಲ್ಲಿ ಕೇವಲ ಪಿಯುಸಿ ವರೆಗೂ ಕಾಲೇಜು ಇದೆ. ಆದ್ರೆ ಪದವಿ 20 ಕಿ.ಮೀ. ದೂರದ ಲಿಂಗಸುಗೂರು ಹೋಗುವ ಅನಿರ್ವಾಯತೆ ಇದೆ. ಬಡ ವಿದ್ಯಾರ್ಥಿಗಳಿಗೆ ಇದು ನುಂಗಲಾರದ ತುತ್ತಾಗಿದ್ದು ಜನಪ್ರತಿನಿಧಿಗಳು, ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.

ದೇಶದಲ್ಲಿಯೇ ಅತೀ ಹೆಚ್ಚು ಚಿನ್ನ ಉತ್ಪಾದಿಸುವ ಗಣಿ ಹಟ್ಟಿಯಲ್ಲಿದ್ದು, ಸುಮಾರು ನಾಲ್ಕು ಸಾವಿರದಷ್ಟು ಚಿನ್ನದ ಗಣಿ ಕಾರ್ಮಿಕರು ಗಣಿಯಲ್ಲಿ ತಮ್ಮ ಪ್ರಾಣ ಒತ್ತೆ ಇಟ್ಟು ರಕ್ತ ಬೆವರು ಸುರಿಸಿ ದುಡಿಯುತ್ತಿದ್ದಾರೆ. ಇಂತಹ ಕಾರ್ಮಿಕರ ಮಕ್ಕಳಿಗೆ ಕನಿಷ್ಠ ಪದವಿ ಶಿಕ್ಷಣವನ್ನು ಒದಗಿಸುವ ಬದ್ಧತೆ ತೋರದ ವಿದ್ಯಾರ್ಥಿ ವಿರೋಧಿ ಶಿಕ್ಷಣ ವಿರೋಧಿ ಜನಪ್ರತಿನಿಧಿಗಳಿಗೆ ಹಾಗೂ ಸರ್ಕಾರಗಳಿಗೆ ಎಸ್ ಎಫ್ ಐ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆಲ ವಿದ್ಯಾರ್ಥಿಗಳು ಪಟ್ಟಣದಲ್ಲಿಯೇ ಪಿಯುಸಿ ಮುಗಿಸಿದ ನಂತರ ಪದವಿ ಪಡೆಯಲು ಬೇರೆ ಬೇರೆ ಊರುಗಳಿಗೆ ತೆರಳಬೇಕಿದೆ. ಹೀಗಾಗಿ ಕೆಲ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಎಸ್‌ಎಫ್‌ಐ 2 ದಶಕದಿಂದಲೂ ನಾನಾ ಹೋರಾಟ, ಮನವಿ ಪತ್ರ ನೀಡಿ ಆಡಳಿತಕ್ಕೆ ಈ ಬಗ್ಗೆ ಒತ್ತಾಯ ಮಾಡುತ್ತಾ ಬಂದಿದ್ದರೂ ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸರಕಾರಗಳು ಅಸಡ್ಡೆ ತೋರುತ್ತಾ ಬರಲಾಗಿದೆ. ರಾಜಕಿಯ ಇಚ್ಛಾಶಕ್ತಿ ಕೊರತೆಯಿಂದ ಪದವಿ ಕಾಲೇಜ್‌ನಲ್ಲಿ ಮಂಜೂರು ಆಗಿಲ್ಲ ಇದು ನಮ್ಮ ಜನ ಪ್ರತಿನಿಧಿಗಳ ಇಚ್ಛಾ ಶಕ್ತಿ ಎಷ್ಟು ಇದೆ ಓದಕ್ಕೆ ಉದಾಹರಣೆಯಾಗಿದೆ ಎಂದರು.

ಈಗಲಾದರೂ ಪದವಿ ಕಾಲೇಜ್ ಮಂಜೂರು ಮಾಡಿಸಬೇಕು. ಇಲ್ಲದೇ ಇದ್ದಲ್ಲಿ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಸ್ಎಫ್ಐ ಎಚ್ಚರಿಸಿದೆ.

ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾಧ್ಯಕ್ಷ ರಮೇಶ್ ವೀರಾಪುರ್, ತಾಲೂಕು ಕಾರ್ಯದರ್ಶಿ ಪವನ್ ಕಮದಾಲ್, ಹಟ್ಟಿ ಕಾರ್ಯದರ್ಶಿ ವಿನಯ್ ಕುಮಾರ್, ಡಿವೈಎಫ್ಐ ಮುಖಂಡರಾದ ಪಯಾಜ್ ಬಂಡಿ, ನಾಗರಾಜ್ ಹೊಸೂರು, ಸಿಐಟಿಯು ಮುಖಂಡ ವೆಂಕಟೇಶ ಗೋರ್ ಕಲ್, ಶೌಕತ್ ಅಲಿ, ದಾವೂದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

emedialine

Recent Posts

ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕ ಕೃಷಿ ಶಿಬಿರ

ಕಲಬುರಗಿ: "ಕಲಿಕೆಯೊಂದಿಗೆ ಕೌಶಲ್ಯ" ಧ್ಯೇಯದೊಂದಿಗೆ ನಗರದಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ ಹಾಗೂ ಜಿಲ್ಲಾ…

18 seconds ago

ಶರಣ ಡೋಹರ ಕಕ್ಕಯ್ಯ ದೇವಸ್ಥಾನದ ಜೀರ್ಣೋದ್ದಾರದ ಉದ್ಘಾಟನೆ, ಪಲ್ಲಕ್ಕಿ ಉತ್ಸವ

ಕಲಬುರಗಿ: ನಗರದ ಜಗತ್ ಬಡಾವಣೆಯಲ್ಲಿರುವ ಶರಣ ಡೋಹರ ಕಕ್ಕಯ್ಯ ದೇವಸ್ಥಾನದ ಆವರಣದಲ್ಲಿ ಶರಣ ಡೋಹರ ಕಕ್ಕಯ್ಯ ದೇವಸ್ಥಾನದ ಜೀರ್ಣೋದ್ದಾರದ ಉದ್ಘಾಟನೆ…

19 hours ago

ಯುವಕ/ಯುವತಿಯರ ಸ್ವಾವಲಂಬನೆ ಜೀವನಕ್ಕೆ ಉದ್ಯಮಶೀಲ ಸಹಕಾರಿ: ಅಧ್ಯಕ್ಷ ಡಾ.ಅಜಯ್ ಸಿಂಗ್

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಉದ್ಯಮಶೀಲತಾಭಿವೃದ್ದಿ ತರಬೇತಿ…

19 hours ago

ಕಲಬುರಗಿ ಪಾಲಿಕೆ ವ್ಯಾಪ್ತಿಯಲ್ಲಿ ಎತ್ತರದ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯ ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಮಹಾನಗರ ದಿನೇ ದಿನೇ ಬೆಳೆಯುತ್ತಿದ್ದು ಕೈಗಾರಿಕೆ ಹಾಗೂ ವಾಣಿಜ್ಯ ಕ್ಷೇತ್ರಗಳಲ್ಲಿ‌ ಗಣನೀಯ ಅಭಿವೃದ್ದಿ ಹೊಂದುತ್ತಿದೆ. ಹಾಗಾಗಿ, ಬಹುಮಹಡಿ ಕಟ್ಟಡಗಳ…

19 hours ago

ವಿವಿಎಸ್ ಶಾಲೆಯಲ್ಲಿ ಸುಕಿ ಸಂಗೀತ ತಂಡದಿಂದ ಶ್ರಾವಣ ಸಂಗೀತ ಸಂಭ್ರಮ

ಕಲಬುರಗಿ: ಶ್ರಾವಣ ಮಾಸ ಪ್ರಕೃತಿ ಮೂಲಕ ಕಣ್ಣಿಗೆ ಹಬ್ಬ ಮನಸ್ಸಿಗೂ ನೆಮ್ಮದಿ ನೀಡಲು ಸಂಗೀತ ಬೇಕು ಅಂತಹ ಸಂಗೀತ ರಸದೌತಣ…

19 hours ago

ನಾಳೆಯಿಂದ ಗುಡ್ಡಾಪುರ ವರದಾನೇಶ್ವರಿ ಪುರಾಣ ಆರಂಭ

ಕಲಬುರಗಿ: ಜಿಲ್ಲಾ ಬಣಗಾರ ಸಮಾಜ ಹಾಗೂ ಶ್ರೀ ಜಡೆ ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಶ್ರಾವಣ ಮಾಸದ ಅಂಗವಾಗಿ ಮಕ್ತಂಪುರದ…

20 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420