ಸಮಾಜದ ಅಭಿವೃದ್ಧಿಗೆ ಶ್ರಮಿಸುವವರಿಗೆ ಪ್ರೋತ್ಸಾಹಿಸಬೇಕು: ಜ್ಯೋತಿ ರಾಠೋಡ

ಕಲಬುರಗಿ: ಸಮಾದಲ್ಲಿ ವಿವಿಧ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಮಹನೀಯರನ್ನು ಸನ್ಮಾನಿಸಿ ಪ್ರೋತ್ಸಾಹಿಸುವದು ಅಗತ್ಯವಾಗಿದೆ ಎಂದು ಇನ್ನರ್ ವೀಲ್ ಕ್ಲಬ್ ಜಿಲ್ಲಾಧ್ಯಕ್ಷೆ ಶ್ರೀಮತಿ ಜ್ಯೋತಿ ರಾಠೋಡ ಹೇಳಿದರು.

ಅವರು ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಗುಲ್ಬರ್ಗಾ ಮಿಡ್‌ಟೌನ್ ನೂತನ ಪದಾಧಿಕಾರಿಗಳ ಸ್ವಾಗತ ಸಮಾರಂಭದಲ್ಲಿಮಾತನಾಡುತ್ತ, ನಮ್ಮ ಸಂಸ್ಥೆ ಬಡವರ ಏಳ್ಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮೊಂಡಿದೆ ಎಂದು ವಿವರಿಸಿದರು.

ಪತ್ರಕರ್ತ ದೇವೇಂದ್ರಪ್ಪ ಅವಂಟಿಯವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ಇನ್ನರ್ ವೀಲ್ ಕ್ಲಬ್ ಕಲಬುರಗಿ ಘಟಕವು ಹಲವಾರು ವರ್ಷಗಳಿಂದ ಉತ್ಕ್ರಷ್ಟವಾದ ವಿಚಾರಗಳೊಂದಿಗೆ ಆರೋಗ್ಯ ಸೇವೆಗಳನ್ನು ಜನರಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ವೇದಿಕೆ ಮೇಲೆ ಇನ್ನರ್ ವೀಲ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ರಾಜಶ್ರೀ, ಕಾರ್ಯದರ್ಶಿ ಶ್ರೀಮತಿ ಇಂದಿರಾ ರಾಠೋಡ. ಐಎಸ್ ಓ ಸ್ರೀಮತಿ ಶ್ರೀದೇವಿ ಕುಲಕರ್ಣಿ, ಖಜಾಂಚಿ ಶ್ರೀಮತಿ ಸದ್ರೀಮತಿ ಲತಾ ದೇಶಪಾಂಡೆ, ಇಸಿ ಸದಸ್ಯರುಗಳಾದ ರೋಹಿಣಿ ಯಲ್ಸಂಗಿಕರ್. ಮೋಹಿನಿ ಜಿಡ್ಗೇಕರ್ ಸೇರಿದಂತೆ ಇತರರು ಇದ್ದರು.

ಈ ಕಾರ್ಯಕ್ರಮದಲ್ಲಿ ದಂತ ವೈದ್ಯರಾದ ಡಾ. ಆರಾಧನಾ ಜಾಧವ್. ಚಾರ್ಟರ್ಡ್ ಅಕೌಂಟೆಂಟ್ ಸುವರ್ಣ ಚವ್ಹಾಣ್ , ಶವಣ್ಯ ಮಹಾಂತಗೋಳ, ಡಾ. ರಾಜೇಶ್ವರಿ ನಾಯಕ್. ಮತ್ತು ಜಿಲ್ಲಾ ಜಿಮ್ಸ್ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಶೇಷ ಆರೈಕೆ ಘಟಕದ ಸಮಾಲೋಚಕರಾದ ಮಂಜುನಾಥ ಕಂಬಾಳಿಮಠ ಅವರು ತಮ್ಮ ಮದುವೆ ವಾರ್ಷಿಕೋತ್ಸವ ಸಂಧರ್ಭದಲ್ಲಿ ಧರ್ಮಪತ್ನಿಯೊಂದಿಗೆ ದೇಹದಾನ ಮಾಡಿದ ಪ್ರಯುಕ್ತ ಸನ್ಮಾನಿಸಲಾಯಿತು.

ಕೊನೆಯಲ್ಲಿ ಶ್ರೀಮತಿ ಇಂದಿರಾ ರಾಠೋಡ ವಂದನಾರ್ಪಣೆ ಮಾಡಿದರು.

emedialine

Recent Posts

ಪ್ರಾಧ್ಯಾಪಕ ಹೋರಾಟಗಾರ ಅನಾದಿ ಚಂದ್ರಶೇಖರ್ ಗೆ ಸನ್ಮಾನ

ಕಲಬುರಗಿ: ಈ ಭಾಗದ ನೇಕಾರ ಸಮುದಾಯಕ್ಕೆ ಉದ್ಯೋಗದಲ್ಲಿ ಮೀಸಲಾತಿ ಪಡೆದು ಕೊಳ್ಳಲು ದಿ. ಎಲ್.ಜಿ.ಹಾವನೂರ ರ ತತ್ವದ ಮೇಲೆ ಹೋರಾಟ…

11 hours ago

ಸರಕಾರಿ ನೌಕರರ ಗೃಹ ನಿರ್ಮಾಣ ಸಂಘದ 51ನೇ ವಾರ್ಷಿಕ ಸಭೆ

ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ರಾಜ್ಯ ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 51ನೇ ವಾರ್ಷಿಕ ಮಹಾಸಭೆಯನ್ನು…

12 hours ago

ಕರಾಟೆ ಚಾಂಪಿಯನ್ಶಿಪ್: ರಾಷ್ಟ್ರಮಟ್ಟಕ್ಕೆ ಆಯ್ಕೆ

ಕಲಬುರಗಿ: ಅಖಿಲ ಕರ್ನಾಟಕ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ 15ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ಶಿಪ್ ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ…

12 hours ago

ನೆಲ-ಜಲ ಪ್ರೀತಿಸುವ ಸಂಸ್ಕøತಿ ಭಾಷೆಯಲ್ಲಿದೆ: ಅಕಾಡೆಮಿ ಅಧ್ಯಕ್ಷೆ ಆಯೇಷಾ ಅಭಿಮತ

ಕಲಬುರಗಿ: ಕಸಾಪದಿಂದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಕಲಬುರಗಿ: ನಾಡಿನ ನೆಲ ಜಲ ಪ್ರೀತಿಸುವ ಸಂಸ್ಕøತಿ ನಮ್ಮ ಮಾತೃ ಭಾಷೆಯಲ್ಲಿದೆ…

12 hours ago

ಇಂದು ಶ್ರಮಿಸಿದರೆ ಮುಂದಿನ ಸುಖ ಜೀವನಕ್ಕೆ ದಾರಿದೀಪ

ಕಲಬುರಗಿ: ಇಂದಿನ ಮಕ್ಕಳು ಬಹಳ ಕಷ್ಟಪಟ್ಟು ಇಂತಹ ಸ್ಪರ್ಧಾ ಯುಗದಲ್ಲಿ ಶ್ರಮ ಪಟ್ಟು ಓದಿದರೆ ಮುಂದಿನ ನಿಮ್ಮ ಜೀವನಕ್ಕೆ ದಾರಿದೀಪವಾಗುವುದೆಂದು…

12 hours ago

ಯಾದಗಿರಿ: ಪ್ರಜಾಪ್ರಭುತ್ವ ದಿನ ಆಚರಣೆ

ಯಾದಗಿರಿ:ಪ್ರಜಾಪ್ರಭುತ್ವ ದಿನ ಆಚರಣೆ ಕಾರ್ಯಕ್ರಮ ವಡಗೇರ ತಾಲೂಕಿನ ಅಜೀಮ್ ಪ್ರೇಮ್ ಜಿ ಶಾಲೆಯ ಹತ್ತಿರ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.…

14 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420