ಸಮಾಜದ ಅಭಿವೃದ್ಧಿಗೆ ಶ್ರಮಿಸುವವರಿಗೆ ಪ್ರೋತ್ಸಾಹಿಸಬೇಕು: ಜ್ಯೋತಿ ರಾಠೋಡ

0
83

ಕಲಬುರಗಿ: ಸಮಾದಲ್ಲಿ ವಿವಿಧ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಮಹನೀಯರನ್ನು ಸನ್ಮಾನಿಸಿ ಪ್ರೋತ್ಸಾಹಿಸುವದು ಅಗತ್ಯವಾಗಿದೆ ಎಂದು ಇನ್ನರ್ ವೀಲ್ ಕ್ಲಬ್ ಜಿಲ್ಲಾಧ್ಯಕ್ಷೆ ಶ್ರೀಮತಿ ಜ್ಯೋತಿ ರಾಠೋಡ ಹೇಳಿದರು.

ಅವರು ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಗುಲ್ಬರ್ಗಾ ಮಿಡ್‌ಟೌನ್ ನೂತನ ಪದಾಧಿಕಾರಿಗಳ ಸ್ವಾಗತ ಸಮಾರಂಭದಲ್ಲಿಮಾತನಾಡುತ್ತ, ನಮ್ಮ ಸಂಸ್ಥೆ ಬಡವರ ಏಳ್ಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮೊಂಡಿದೆ ಎಂದು ವಿವರಿಸಿದರು.

Contact Your\'s Advertisement; 9902492681

ಪತ್ರಕರ್ತ ದೇವೇಂದ್ರಪ್ಪ ಅವಂಟಿಯವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ಇನ್ನರ್ ವೀಲ್ ಕ್ಲಬ್ ಕಲಬುರಗಿ ಘಟಕವು ಹಲವಾರು ವರ್ಷಗಳಿಂದ ಉತ್ಕ್ರಷ್ಟವಾದ ವಿಚಾರಗಳೊಂದಿಗೆ ಆರೋಗ್ಯ ಸೇವೆಗಳನ್ನು ಜನರಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ವೇದಿಕೆ ಮೇಲೆ ಇನ್ನರ್ ವೀಲ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ರಾಜಶ್ರೀ, ಕಾರ್ಯದರ್ಶಿ ಶ್ರೀಮತಿ ಇಂದಿರಾ ರಾಠೋಡ. ಐಎಸ್ ಓ ಸ್ರೀಮತಿ ಶ್ರೀದೇವಿ ಕುಲಕರ್ಣಿ, ಖಜಾಂಚಿ ಶ್ರೀಮತಿ ಸದ್ರೀಮತಿ ಲತಾ ದೇಶಪಾಂಡೆ, ಇಸಿ ಸದಸ್ಯರುಗಳಾದ ರೋಹಿಣಿ ಯಲ್ಸಂಗಿಕರ್. ಮೋಹಿನಿ ಜಿಡ್ಗೇಕರ್ ಸೇರಿದಂತೆ ಇತರರು ಇದ್ದರು.

ಈ ಕಾರ್ಯಕ್ರಮದಲ್ಲಿ ದಂತ ವೈದ್ಯರಾದ ಡಾ. ಆರಾಧನಾ ಜಾಧವ್. ಚಾರ್ಟರ್ಡ್ ಅಕೌಂಟೆಂಟ್ ಸುವರ್ಣ ಚವ್ಹಾಣ್ , ಶವಣ್ಯ ಮಹಾಂತಗೋಳ, ಡಾ. ರಾಜೇಶ್ವರಿ ನಾಯಕ್. ಮತ್ತು ಜಿಲ್ಲಾ ಜಿಮ್ಸ್ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಿಶೇಷ ಆರೈಕೆ ಘಟಕದ ಸಮಾಲೋಚಕರಾದ ಮಂಜುನಾಥ ಕಂಬಾಳಿಮಠ ಅವರು ತಮ್ಮ ಮದುವೆ ವಾರ್ಷಿಕೋತ್ಸವ ಸಂಧರ್ಭದಲ್ಲಿ ಧರ್ಮಪತ್ನಿಯೊಂದಿಗೆ ದೇಹದಾನ ಮಾಡಿದ ಪ್ರಯುಕ್ತ ಸನ್ಮಾನಿಸಲಾಯಿತು.

ಕೊನೆಯಲ್ಲಿ ಶ್ರೀಮತಿ ಇಂದಿರಾ ರಾಠೋಡ ವಂದನಾರ್ಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here