ಕೊಪ್ಪಳ: “ಕರ್ನಾಟಕ ರಾಜ್ಯ ಪೋಲಿಸ್ ದೂರುಗಳ ಪ್ರಾಧಿಕಾರ ಬೆಂಗಳೂರು ಮತ್ತು ಕೇಂದ್ರ ಸರ್ಕಾರಿ ಉಚ್ಚ ನ್ಯಾಯಾಲಯ ವಕೀಲರಾದ ಮೋಹನ್ ಕುಮಾರ್ ದಾನಪ್ಪ ರವರು ಕೊಪ್ಪಳ ನಗರಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಇಲ್ಲಿನ ಅತಿಥಿ ಗೃಹದಲ್ಲಿ ಪ್ರಗತಿ ಪರ ಚಿಂತಕರು ವಿವಿಧ ಸಂಘಟಕರು ಸೇರಿ ವಕೀಲ ಮೋಹನ ಕುಮಾರ ದಾನಪ್ಪ ಅವರಿಗೆ ವಿಶೇಷವಾಗಿ ಸ್ವಾಗತಿಸಿ, ಸನ್ಮಾನ ಮಾಡಿ ಗೌರವಿಸಲಾಯಿತು.
ಸಭೆಯ ಅತಿಥಿಗಳಾಗಿ ಮಹಾಂತೇಶ್ ಮಲ್ಲನಗೌಡರ ಮತ್ತು ಮುತ್ತುರಾಜ , ಪಾಮಣ್ಣ ಅರಳಿಗನೂರ ಕನಕಗಿರಿ ಅವರು ವಹಿಸಿ ನಂತರ ಮಾತನಾಡಿದ ಅವರು ‘ ಮೋಹನ್ ಕುಮಾರ್ ಅವರು ಬಡತನದಿಂದ ನೊಂದು ಬೆಂದು ,ಸಾಕಷ್ಟು ನೋವುಗಳನ್ನು ಅನುಭವಿಸಿ ಇಂಡಿಯನ್ ಆಮಿ೯ಯಲ್ಲಿ ಆಯ್ಕೆ ಯಾಗಿ ಅಲ್ಲಿ ಕೆಲಸದಲ್ಲಿ ವಡ್೯ ಗಿನ್ನಿಸ್ ದಾಖಲೆ ಮಾಡಿ,ಮತ್ತು ಕೇಂದ್ರ ಸರಕಾರಿ ವಕೀಲರಾಗಿ ಸುಮಾರು ವಷ೯ಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅದನ್ನು ಮೆಚ್ಚಿ ,ಈಗ ಕನಾ೯ಟಕ ರಾಜ್ಯ ಪೋಲಿಸ್ ದೂರುಗಳ ಪ್ರಾಧಿಕಾರದ ಸದಸ್ಯರಾಗಿ ಆಯ್ಕೆಯಾಗಿ ಜನಗಳ ಸೇವೆಗಳಿಗೆ ಮುಂದಾಗಿದ್ದಾರೆ ಎಂದು ಅವರ ನಡೆದ ಬಂದ ದಾರಿ ಬಗ್ಗೆ ಸಂಕ್ಷಿಪ್ತ ವಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಮುತ್ತುರಾಜ್ ಕುಷ್ಟಗಿ ಅವರು ವಹಿಸಿದರು.
ಸಭೆಯನ್ನು ಉದ್ದೇಶಿಸಿ ವಕೀಲ ಮೋಹನ್ ಕುಮಾರ ಮಾತನಾಡಿ, ‘ಯುವಕರಿಗೆ ಸಂವಿಧಾನ ಆಶಯಗಳು ಮತ್ತು ಕಾನೂನು ಸಲಹೆಗಳ ಕುರಿತಾಗಿ ಸೂಚನೆಗಳ ಮಾಹಿತಿ ನೀಡಿದರು’.
ಈ ಸಂದರ್ಭದಲ್ಲಿ ಸಂಜೀವಪ್ಪ ಚನ್ನದಾಸರ, ನೀಲಪ್ಪ ಹೊಸಮನಿ,ಆನಂದ ಕಕಿ೯ಹಳ್ಳಿ,ಲಕ್ಷ್ಮಣ್ ಕಾಳೆ,ಸೋಮಣ ಬಡಿಗೇರಿ, ಗವಿ ಬೆಲ್ಲದ್ ವಕೀಲರು, ಪರಶುರಾಮ ಕೆರಹಳ್ಳಿ, ನಾಗರಾಜ್ ಬೆಲ್ಲದ್, ಮಾಕ೯ಂಡಯ್ಯ ಬೆಲ್ಲದ್, ರಾಮಲಿಂಗ ಶಾಸ್ತ್ರೀ,ಹುಲಿಗೇಶ ಕಕ್ಕರಗೋಳ,ಶೀವು ಕಕ್ಕರಗೋಳ,ನಾಗರಾಜ. ಶರಣಪ್ಪ ಓಜನಳ್ಳಿ,ರವಿ ಹೊಸಕೋಟೆ, ಇನ್ನು ಅನೇಕರು ಯುವಮುಂಡರಗಳು ಉಪಸ್ಥಿತರಿದ್ದರು ಈ ಕಾರ್ಯಕ್ರಮದ ನಿರೂಪಣೆಯನ್ನು ಕಾಶಪ್ಪ ಚಲವಾದಿ ಅವರು ಮಾಡಿದರು
ಹಾಗೂ ವಂದನಾರ್ಪಣೆಯನ್ನು ಯುವ ಮುಖಂಡ ರಾಘು ಚಾಕ್ರಿಯವರು ವಹಿಸಿ ಸಭೆ ಮುಕ್ತಾಯಗೊಳಿಸಿದರು.
ಕಲಬುರಗಿ: ಅಲ್ಪಸಂಖ್ಯಾತ ಕಲ್ಯಾಣ ಹಾಗೂ ವಕ್ಫ್ ಮತ್ತು ವಸತಿ ಸಚಿವರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ್ ಅವರು ಗುರುವಾರ ಇಲ್ಲಿನ…
ಕಲಬುರಗಿ: ನೇತ್ರದಾನ ಮಹಾದಾನ, ಪ್ರತಿಯೊಬ್ಬರೂ ತಮ್ಮ ನೇತ್ರದಾನ ಮಾಡುವುದರೊಂದಿಗೆ ಅಂಧರ ಬಾಳಿಗೆ ಬೆಳಕಾಗಲು ಮುಂದೆ ಬರಬೇಕು ಎಂದು ಜಿಲ್ಲಾ ಪಂಚಾಯತ್…
ಕಲಬುರಗಿ: ದಿ.ಲಿಂಗರಾಜ ಶಾಸ್ತ್ರಿ ಅವರದು ಬಹುಮುಖ ವ್ಯಕ್ತಿತ್ವ ಎಂದು ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಅಭಿಮತ ವ್ಯಕ್ತಪಡಿಸಿದರು. ನಗರದ ಕನ್ನಡ…
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ನಕಲಿ ವೈದ್ಯರ ವಹಾವಳಿ ತಡೆಯಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಯುವ ಕರ್ನಾಟಕ ವೇದಿಕೆ ಚಿಂಚೋಳಿ ಮತ್ತು…
ಸುರಪುರ: ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸುರಪುರ ತಾಲೂಕ ವಿದ್ಯಾರ್ಥಿ ಘಟಕದ ಅಧ್ಯಕ್ಷರನ್ನಾಗಿ ಬಸವರಾಜ ಎಸ್.ಶೆಳ್ಳಗಿ ಅವರನ್ನು ನೇಮಕಗೊಳಿಸಲಾಗಿದೆ. ಈ…
ಸುರಪುರು: ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಯಾದಗಿರಿಯವರ ಸಂಯೋಗದಲ್ಲಿ “ವಿಶ್ವ ಓಜೋನ್ ದಿನ”…