ಪಹಣಿಗೆ ಆಧಾರ್ ಜೋಡಣೆ,ಜಿಲ್ಲೆಯಲ್ಲಿ ಶೇ.67ರಷ್ಟು ಕಾರ್ಯ ಪೂರ್ಣ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ನಕಲಿ ದಾಖಲೆ ಸೃಷ್ಠಿಸಿ ನಡೆಯುವ ಮೋಸದ ವ್ಯವಹಾರಗಳಿಗೆ ಕಡಿವಾಣ ಹಾಕಲು ರಾಜ್ಯದಲ್ಲಿ ಪಹಣಿಗೆ ಆಧಾರ್ ಜೋಡಣೆ ಮಾಡುವ ಮಹತ್ವದ ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ ಇದೂವರೆಗೆ 4.77 ಲಕ್ಷ ಪಹಣಿಗೆ ಆಧಾರ್ ಸೀಡಿಂಗ್ ಮಾಡಿದ್ದು, ಶೇ.67ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ಗ್ರಾಮ ಆಡಳಿತಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ 8,76,177 ಪಹಣಿ ಪೈಕಿ 4.77 ಲಕ್ಷ ಪಹಣಿಗೆ ಆಧಾರ್ ಜೋಡಣೆ ಮಾಡಿದ್ದಾರೆ. ಗ್ರಾಮ ಭೇಟಿ ಸಂದರ್ಭದಲ್ಲಿ 41,489 ಜಮೀನು ಭೂ ಪರಿವರ್ತನೆಯಾದರೆ, 67,375 ಪಹಣಿಗಳ ಮಾಲೀಕರು ನಿಧನರಾಗಿರುವುದು ಬೆಳಕಿಗೆ ಬಂದಿದೆ. ಉಳಿದ ಜೋಡಣೆ ಕಾರ್ಯ ಇದೇ ಜುಲೈ ಮಾಸಾಂತ್ಯಕ್ಕೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.

ಆಧಾರ್ ಜೋಡಣೆ ಕಡ್ಡಾಯವಲ್ಲವಾದರು ಜೋಡಣೆ ಮಾಡಿಕೊಳ್ಳುವುದರಿಂದ ಆಸ್ತಿಗಳ ಗ್ಯಾರಂಟಿ ಭೂಮಾಲಿಕರಿಗೆ ಸಿಗಲಿದೆ. ಇದರಿಂದ ಆಸ್ತಿಯನ್ನು ಮೋಸ, ವಂಚನೆ ಮೂಲಕ ಅವ್ಯವಹಾರ ತಡೆಯಲು ಸಾಧ್ಯವಾಗಲಿದೆ. ಸರ್ಕಾರಿ ಸೌಲಭ್ಯ, ಬೆಳೆ ಪರಿಹಾರ ನೇರವಾಗಿ ರೈತರಿಗೆ ದೊರಕಲಿದೆ. ಗ್ರಾಮ ಆಡಳಿತಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಓ.ಟಿ.ಪಿ. ಎಸ್.ಎಂ.ಎಸ್. ಮೂಲಕ ಮಾಲೀಕರನ್ನು ಖಾತ್ರಿಪಡಿಸಿಕೊಂಡು ಅವರ ಭಾವಚಿತ್ರ ಸೆರೆಹಿಡಿದು ಸ್ಥಳದಲಿಯೇ ಆಧಾರ್ ಜೋಡಣೆ ಮಾಡಲಿದ್ದಾರೆ. ಕಂದಾಯ ಇಲಾಖೆಯ ಈ ಹೊಸ ಯೋಜನೆಗೆ ರೈತಾಪಿ ವರ್ಗ ಅಗತ್ ಮಾಹಿತಿ ನೀಡಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲೆಯ ತಾಲೂಕಾವಾರು ಅಂಕಿ-ಸಂಖ್ಯೆ ಗಮನಿಸಿದಲ್ಲಿ ಚಿತ್ತಾಪುರ 71,906, ಕಮಲಾಪುರ 54,909, ಚಿಂಚೋಳಿ 86,379, ಕಲಬುರಗಿ 95,386, ಶಹಾಬಾದ 20,813, ಕಾಳಗಿ 66182, ಸೇಡಂ 1,17,231, ಆಳಂದ 1,38,526, ಅಫಜಲಪೂರ 92,741, ಜೇವರ್ಗಿ 77,566 ಹಾಗೂ ಯಡ್ರಾಮಿಯಲ್ಲಿ 54,538 ಪಹಣಿಗೆ ಆಧಾರ್ ಜೋಡಣೆ ಮಾಡಲಾಗಿದೆ. ರಾಜ್ಯದ ಸರಾಸರಿ ಆಧಾರ್ ಸೀಡಿಂಗ್ ಶೇ.63 ಇದ್ದರೆ, ಜಿಲ್ಲೆಯ ಪ್ರಮಾಣ ಶೇ.67ರಷ್ಟಿದೆ ಎಂದರು.

ಆಗಸ್ಟ್ 15 ರಿಂದ ಪೌತಿ ಖಾತೆ ಅಭಿಯಾನ: ಆರ್.ಟಿ.ಸಿ. ಮಾಲೀಕರ ಮರಣ ಪ್ರಕರಣಗಳಲ್ಲಿ ಆಸ್ತಿಯನ್ನು ಅವರ ಕುಟುಂಬಸ್ಥರ ಅಥವಾ ವಾರಸುದಾರರ ಹೆಸರಿನಲ್ಲಿ ವರ್ಗಾಯಿಸಲು ಬರುವ ಆಗಸ್ಟ್-15 ರಿಂದ ಜಿಲ್ಲೆಯಾದ್ಯಂತ ಪೌತಿ ಖಾತೆ ಅಭಿಯಾನ ನಡೆಸಲಾಗುವುದು. ಡಿಸ್ಪೂಟ್, ಕಂದಾಯ ನ್ಯಾಯಾಲಯ, ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳಲ್ಲಿ ನ್ಯಾಯಾಲಯದ ಅಂತಿಮ ತೀರ್ಪಿನ ಪ್ರಕಾರ ಮುಂದಿನ ಕ್ರಮ ವಹಿಸಲಾಗುತ್ತದೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸ್ಪಷ್ಟಪಡಿಸಿದರು.

ಶೇ.94ರಷ್ಟು ಬಿತ್ತನೆ: ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗ್ಗಿಂತ ಶೇ.45ರಷ್ಟು ಹೆಚ್ಚಿನ ಮಳೆಯಾಗಿದ್ದು, ಇದೂವರೆಗೆ ಶೇ.94ರಷ್ಟು ಬಿತ್ತನೆ ಕಾರ್ಯ ಮುಗಿದಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ನೋಂದಣಿ ಮಾಡಿಸಲು ಇದೇ ಜುಲೈ 31 ಕೊನೆ ದಿನವಾಗಿದ್ದು, ಜಿಲ್ಲೆಯ ಅನ್ನದಾತರು ಶೇ.10ರಂತೆ ಪ್ರೀಮಿಯಮ್ ಹಣ ಪಾವತಿಸಿ ಕೂಡಲೆ ನೊಂದಣಿ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನೊಂದಣಿ ಮಾಡಿಸಿದಲ್ಲಿ ಅತಿವೃಷ್ಠಿ, ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಬೆಳೆ ಪರಿಹಾರ ದೊರಕಲಿದೆ. ಒಟ್ಟಾರೆ 3 ಲಕ್ಷ ಬೆಳೆ ವಿಮೆ ನೋಂದಣಿ ಗುರಿ ಹೊಂದಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.

emedialine

Recent Posts

ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಿ: ಶಾಸಕ ಡಾ.ಅಜಯ್ ಸಿಂಗ್

ಕಲಬುರಗಿ: ಪ್ಲಾಸ್ಟಿಕ್ ನಿಷೇಧಕ್ಕೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಹಕರಿಸಿದಾಗ ಮಾತ್ರ ನಗರವನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾಧ್ಯವಿದೆ ಎಂದು…

2 mins ago

ಮಾಜಿ ಸಚಿವ ಎಸ್.ಕೆ ಕಾಂತ ಅವರ ಆರೋಗ್ಯ ವಿಚಾರಿಸಿದ ಸಿಎಂ

ಕಲಬುರಗಿ: 19ನೇ ಸಚಿವ ಸಂಪುಟದ ಹಿನ್ನೆಲೆಯಲ್ಲಿ ಕಲಬುರಗಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ…

19 mins ago

ಶಹಾಬಾದ ತಾಲ್ಲೂಕಿನದ್ಯಂತ ಸೆ. 17ಕ್ಕೆ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಿ

ಶಹಾಬಾದ: ಸಪ್ಟೆಂಬರ್ 17ರಂದು ತಾಲೂಕಿನ ಎಲ್ಲಾ ಸರ್ಕಾರಿ,ಅರೆ ಸರ್ಕಾರಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನ ಹಾಗೂ ವಿಶ್ವಕರ್ಮ…

22 mins ago

ಶಹಾಬಾದ ಕಾರ್ಖಾನೆಗಳನ್ನು ಪ್ರಾರಂಭಿಸಲು ಹಿರೇಮಠ ಒತ್ತಾಯ

ಶಹಾಬಾದ: ತಾಲೂಕಿನ ಜೆಪಿ ಕಾರ್ಖಾನೆ ಮತ್ತು ಜಿಇ ಕಾರ್ಖಾನೆ ಕಾರ್ಖಾನೆಗಳನ್ನು ಪುನಃ ಪ್ರಾರಂಭ ಮಾಡಲು ಮಂಗಳವಾರ ಕಲಬುರಗಿಯಲ್ಲಿ ನಡೆಯುವ ಸಚಿವ…

51 mins ago

MRW/VRW/URW ಕಾರ್ಯಕರ್ತರ ಅನಿರ್ಧಿಷ್ಟಾವಧಿ ಧರಣಿ ದಲಿತ ಸೇನೆ ಬೆಂಬಲ

ಕಲಬುರಗಿ: ನವ ಕರ್ನಾಟಕ MRW/VRW/URW ಗೌರವ ಧನ ಕಾರ್ಯಕರ್ತರ ಖಾಯಮಾತಿಗಾಗಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿಗೆ ಅಖಿಲ ಕರ್ನಾಟಕ ದಲಿತ ಸೇನೆ…

55 mins ago

ಸಚಿವ ಸಂಪುಟದಲ್ಲಿ ಸಭೆಯಲ್ಲಿ ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಸುಪ್ರೀಂಕೋರ್ಟ್ ತೀರ್ಪಿನಂತೆ ಒಳಮೀಸಲಾತಿಯನ್ನು ರಾಜ್ಯ ಸರಕಾರ ಕಲಬುರಗಿಯಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ಮಾದಿಗ ಸಂಘಟನೆಗಳ ಒಕ್ಕೂಟ…

58 mins ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420