ವಾಡಿ: ಮಳೆಗಾಲದಲ್ಲೂ ನೀರಿನ ಹಾಹಾಕಾರ

ವಾಡಿ: ಪಟ್ಟಣದಲ್ಲಿ ಕಳೆದ ಐದು ದಿನಗಳಿಂದ ನೀರಿಗಾಗಿ ಜನರು ಪರದಾಡುತ್ತಿದ್ದಾರೆ ಇದನ್ನು ಗಂಭೀರವಾಗಿ ಪರಿಗಣಿಸಿ ನೀರಿನ ಸಮಸ್ಯೆಯನ್ನು ಬಗೆಹರಿಸಿ ಎಂದು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಪಟ್ಟಣಕ್ಕೆ ನೀರು ಪೂರೈಕೆ ಆಗುತ್ತಿಲ್ಲ ಇದನ್ನು ಸ್ಥಳೀಯ ಪುರಸಭೆ ಮುಖ್ಯಾಧಿಕಾರಿಗಳಿಗೆ ಪ್ರಶ್ನಿಸಿದರೆ ಮೊದಲಿನಂತೆ ಮೋಟಾರ್ ದುರಸ್ತಿ ಉತ್ತರ ಹೇಳುತ್ತಾರೆ. ಇಂತಹ ಸಂಧರ್ಭದಲ್ಲಿ ಪ್ರತಿ ವಾರ್ಡ್ ಗಳಿಗೆ ಟ್ಯಾಂಕ್‌ ಗಳಿಂದ ನಿಂದ ನೀರು ಪೂರೈಸುವ ಕಾರ್ಯ ಕೂಡಾ ಸ್ಥಳೀಯ ಆಡಳಿತ ಮಾಡುತ್ತಿಲ್ಲ.ಇಂತಹ ಮಳೆಗಾಲದಲ್ಲಿಯೂ ನೀರಿಗಾಗಿ ಪರಿತಪಿಸುವಂತಾಗಿದೆ.

ಇಂತಹ ನೀರಿನ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸುಮಾರು ಸಲ ಗಮನಕ್ಕೆ ತಂದಿರುತ್ತೆವೆ,ಆದರೂ ಅವರು ಪಟ್ಟಣದ ನೀರಿನ ಪರದಾಟಕ್ಕೆ ಸ್ಪಂದಿಸದೇ ಇರುವುದು ಯಾಕೆ ಅಂತಹ ಗೊತ್ತಾಗುತ್ತಿಲ್ಲ. ಪಟ್ಟಣದ ಪಕ್ಕದಲ್ಲಿ ಎರಡೆರಡು ನದಿಗಳಿದ್ದರೂ ಜನರ ಗೊಳಾಟ ತಪ್ಪುತ್ತಿಲ್ಲ. ಪೂರೈಕೆ ಆಗುವ ನೀರು ಸಹ ಶುದ್ದವಾಗಿರುವುದಿಲ್ಲ. ಚರಂಡಿ ನೀರು ಹಾಗೂ ಮಳೆಯಿಂದ ಕಲುಷಿತ ನೀರು ಸೇರ್ಪಡೆಯಾಗಿ ಸಾರ್ವಜನಿಕರು ಅನಿವಾರ್ಯವಾಗಿ ರಾಡಿ ನೀರು ಬಳಸುವ ಪರಿಸ್ಥಿತಿ ಬಂದಿದೆ‌ .

ಶಾಶ್ವತ ಕುಡಿಯುವ ನೀರಿನ ಯೋಜನೆಯಡಿ ನೀರು ಶುದ್ಧೀಕರಣ ಘಟಕ ನಿರ್ಮಾಣವಾದರೂ ಸಹ ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಶುದ್ದಿಕರಣ ಗೊಳ್ಳುತ್ತಿಲ್ಲ.

ನೀರಿನ ಮೋಟಾರ್ ಸಮಸ್ಯೆ,ವಿದ್ಯುತ್ ಸಮಸ್ಯೆ ಉಂಟಾದರೆ ಪರ್ಯಾಯವಾಗಿ ಪುರಸಭೆ ವತಿಯಿಂದ ಸುಮಾರು ಎರಡು ವರ್ಷಗಳ ಹಿಂದೆ ಐವತ್ತು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಇಂಗಳಗಿ ಮಾರ್ಗದ ಎಸಿಸಿ ಪೈಪ್ ಲೈನಿಗೆ ಸಂಪರ್ಕ ಕಲ್ಪಸಿದರು ಅದನ್ನು ಕಾರ್ಯಗತಗೊಳಿಸದೇ ಪುರಸಭೆ ಸಂಪತ್ತು ಹಾಳು ಮಾಡಿ ಜನರು ಗೊಳಾಡುವಂತೆ ಮಾಡಿದ್ದಾರೆ.

ಪಟ್ಟಣದ ಎರಡು ವಾರ್ಡಗಳನ್ನು ಹೊಂದಿದೆ ಎಸಿಸಿ ಒಡೆತನದ ಕಾಲೋನಿ ಹಾಗೂ ಎರಡು ವಾರ್ಡಗಳನ್ನು ಹೊಂದಿದ ಕೇಂದ್ರ ಸರ್ಕಾರದ ಒಡೆತನದ ರೈಲ್ವೆ ಕಾಲೋನಿಗಳಲ್ಲಿ ಇಂತಹ ಯಾವುದೇ ನೀರಿನ ಸಮಸ್ಯೆ ಇರುವುದಿಲ್ಲ ಮತ್ತು ಅಲ್ಲಿ ಶುದ್ಧ ನೀರು ಸರಬರಾಜಾಗುತ್ತದೆ. ಆದರೆ ಇಲ್ಲಿ ಮಾತ್ರ ಸುಮಾರು ವರ್ಷಗಳ ನೀರಿನ ಸಮಸ್ಯೆ ಇನ್ನೂ ನಿಂತಿಲ್ಲ. ನೀರಿಗಾಗಿ ಲಕ್ಷಾಂತರ ರೂಪಾಯಿಗಳ ಖರ್ಚು ಖಾತೆಯಲ್ಲಿ ದಾಖಲಾಗುತ್ತಿದೆ.

ಇಲ್ಲಿನ ಪುರಸಭೆ ಯಲ್ಲಿ ನಕಲು ಬಿಲ್ ಗಳ ಹಾವಳಿ ಕೂಡಾ ಹೆಚ್ಚಾಗಿದ್ದು ಇದನ್ನು ಪರೀಕ್ಷೀಸಿ ಕ್ರಮಕೈಗೊಳ್ಳಿ. ಇದೇ ರೀತಿ ಪಟ್ಟಣದಲ್ಲಿ ನೀರಿನ ಹಾಹಾಕಾರ ಮುಂದುವರೆದರೆ ಬರುವ ಅಗಸ್ಟ್ 01ನೇ ದಿನಾಂಕದಂದು ಸಾರ್ವಜನಿಕರೊಂದಿಗೆ ಪುರಸಭೆ ಎದರು ಪ್ರತಿಭಟನೆ ಮಂದಾಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾರೆ.

emedialine

Recent Posts

ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಿ: ಶಾಸಕ ಡಾ.ಅಜಯ್ ಸಿಂಗ್

ಕಲಬುರಗಿ: ಪ್ಲಾಸ್ಟಿಕ್ ನಿಷೇಧಕ್ಕೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಸಹಕರಿಸಿದಾಗ ಮಾತ್ರ ನಗರವನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಾಧ್ಯವಿದೆ ಎಂದು…

8 mins ago

ಮಾಜಿ ಸಚಿವ ಎಸ್.ಕೆ ಕಾಂತ ಅವರ ಆರೋಗ್ಯ ವಿಚಾರಿಸಿದ ಸಿಎಂ

ಕಲಬುರಗಿ: 19ನೇ ಸಚಿವ ಸಂಪುಟದ ಹಿನ್ನೆಲೆಯಲ್ಲಿ ಕಲಬುರಗಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ…

25 mins ago

ಶಹಾಬಾದ ತಾಲ್ಲೂಕಿನದ್ಯಂತ ಸೆ. 17ಕ್ಕೆ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಿ

ಶಹಾಬಾದ: ಸಪ್ಟೆಂಬರ್ 17ರಂದು ತಾಲೂಕಿನ ಎಲ್ಲಾ ಸರ್ಕಾರಿ,ಅರೆ ಸರ್ಕಾರಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನ ಹಾಗೂ ವಿಶ್ವಕರ್ಮ…

28 mins ago

ಶಹಾಬಾದ ಕಾರ್ಖಾನೆಗಳನ್ನು ಪ್ರಾರಂಭಿಸಲು ಹಿರೇಮಠ ಒತ್ತಾಯ

ಶಹಾಬಾದ: ತಾಲೂಕಿನ ಜೆಪಿ ಕಾರ್ಖಾನೆ ಮತ್ತು ಜಿಇ ಕಾರ್ಖಾನೆ ಕಾರ್ಖಾನೆಗಳನ್ನು ಪುನಃ ಪ್ರಾರಂಭ ಮಾಡಲು ಮಂಗಳವಾರ ಕಲಬುರಗಿಯಲ್ಲಿ ನಡೆಯುವ ಸಚಿವ…

57 mins ago

MRW/VRW/URW ಕಾರ್ಯಕರ್ತರ ಅನಿರ್ಧಿಷ್ಟಾವಧಿ ಧರಣಿ ದಲಿತ ಸೇನೆ ಬೆಂಬಲ

ಕಲಬುರಗಿ: ನವ ಕರ್ನಾಟಕ MRW/VRW/URW ಗೌರವ ಧನ ಕಾರ್ಯಕರ್ತರ ಖಾಯಮಾತಿಗಾಗಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿಗೆ ಅಖಿಲ ಕರ್ನಾಟಕ ದಲಿತ ಸೇನೆ…

1 hour ago

ಸಚಿವ ಸಂಪುಟದಲ್ಲಿ ಸಭೆಯಲ್ಲಿ ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ: ಸುಪ್ರೀಂಕೋರ್ಟ್ ತೀರ್ಪಿನಂತೆ ಒಳಮೀಸಲಾತಿಯನ್ನು ರಾಜ್ಯ ಸರಕಾರ ಕಲಬುರಗಿಯಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ಮಾದಿಗ ಸಂಘಟನೆಗಳ ಒಕ್ಕೂಟ…

1 hour ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420