ಕಾನೂನು ಸುವ್ಯವಸ್ಥೆಗಾಗಿ ರಾಜ್ಯಪಾರಿಗೆ ಪತ್ರ

ವಾಡಿ; ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿನ ಹತ್ಯೆಗಳ ಹೆಚ್ಚಳ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮಕೈಗೊಳ್ಳಿ ಎಂದು ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹತ್ಯೆಗಳು ಸಾಮಾನ್ಯವಾಗಿವೆ. ನಿನ್ನೆ ಶನಿವಾರ ಯಾದಗಿರಿ ನಗರ ಠಾಣೆಯ ಪಿಎಸ್ಐ ಪರಶುರಾಮ ವರ್ಗಾವಣೆಗೆ ಸಂಭವಿಸಿದಂತೆ ಖಿನ್ನತೆಗೆ ಒಳಗಾಗಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದು,ಇದರ ಹಿಂದೆ ಯಾದಗಿರಿ ಯ ಕಾಂಗ್ರೆಸ್ ಪಕ್ಷದ ಶಾಸಕ ಚೆನ್ನಾರಡ್ಡಿ ಪಾಟೀಲ ಮತ್ತು ಅವರ ಮಗ ಪಂಪನಗೌಡ ಬಗ್ಗೆ ದಟ್ಟ ಅನುಮಾನವಿರುವುದರಿಂದ ಅವರ ವಿರುದ್ಧ ಎಫ್ಐರ್ ದಾಖಲಾಗಿದೆ. ಮೃತ ಬಡ ಪ್ರತಿಭಾನ್ವಿತನಾಗಿದ್ದ ಪಿಎಸ್ಐ ಪರಶುರಾಮ ಕುಟುಂಬಕ್ಕೆ ನ್ಯಾಯ ಒದಗಿಸಿ.

ಈ ಸರ್ಕಾರದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸಲು ಆಸ್ಪದ ನೀಡದೆ, ಅವರನ್ನು ಮಾನಸಿಕವಾಗಿ ಕಿರುಕುಳ ನೀಡುತ್ತಿರುವ ಪರಿಣಾಮದಿಂದ ಅನೇಕ ಅಧಿಕಾರಿಗಳು ಆತ್ಮಹತ್ಯೆ ಶರಣಾಗುತ್ತಿರುವುದನ್ನು ಕಾಣುತ್ತಿದ್ದೇವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತವಾಗಿ ಇಲ್ಲದೆ ಇರುವುದರಿಂದ ಅಮಾಯಕರ ಹತ್ಯ,ಮಹಿಳೆಯರ ಮೇಲೆ ದೌರ್ಜನ್ಯ ಆಗುತ್ತಿರುವುದು ತಮ್ಮ ಗಮನಕ್ಕೂ ಪ್ರತಿದಿನ ಬರುತ್ತಿದೆ.

ಆಡಳಿತದ ಬಹುತೇಕ ಸಚಿವರು ಮತ್ತು ಶಾಸಕರು ಮುಡಾ ಹಾಗೂ ವಾಲ್ಮೀಕಿ ನಿಗಮದ ಹಗರಣ ಸೇರಿದಂತೆ ಇನ್ನಿತರ ಹಗರಣದಲ್ಲಿ ಭಾಗಿಯಾಗಿರುವುದರಿಂದ ಇವರ ವಿರುದ್ಧ ಕ್ರಮಕೈಗೊಂಡು ಸಾರ್ವಜನಿಕ ಸಂಪತ್ತನ್ನು ರಕ್ಷಿಸಿ ಜನಸಾಮಾನ್ಯರ ಕಲ್ಯಾಣಕ್ಕೆ ತಾವು ಮುಂದಾಗಬೇಕು ಎಂದು ಪತ್ರದಲ್ಲಿ ವಿನಂತಿಸಿದ್ದಾರೆ.

emedialine

Recent Posts

ಕಲಬುರಗಿ: “ವೆಲ್ಫೇರ್ ಯುವ ಕರ್ನಾಟಕ” ಉದ್ಘಾಟನೆ

ಕಲಬುರಗಿ: ನಗರದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯದ ಯುವ ಸಂಘಟನೆ "ವೆಲ್ಫೇರ್ ಯುವ ಕರ್ನಾಟಕ" ಇದರ ಉದ್ಘಾಟನೆ…

5 hours ago

ರಾಜ್ಯ ಸರಕಾರಿ, ಅನುದಾನಿತ ನೌಕರರಿಗೆ ಹಳೆಯ ಪಿಂಚಣಿ ಕೂಡಲೇ ಜಾರಿಯಾಗಲಿ: ನಮೋಶಿ

ಕಲಬುರಗಿ: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾ ಘಟಕ ಕಲಬುರ್ಗಿ, ಪ್ರೌಢ ಶಾಲಾ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಾಗಾರ…

5 hours ago

ಸಂಪುಟ ಸಭೆ | ಕಕ ಭಾಗದ ಸಮಗ್ರ ಅಭಿವೃದ್ದಿಯ ಚರ್ಚೆ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿ: ಜಿಲ್ಲೆಯಲ್ಲಿ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಯ ಕುರಿತಂತೆ ಸಮಗ್ರವಾಗಿ ಚರ್ಚೆ ನಡೆಯಲಿದೆ ಎಂದು…

5 hours ago

ಕಲಬುರಗಿ: SDPI ಪಕ್ಷದ ನಾಯಕರ ಸಭೆ ಯಶಸ್ವಿ

ಕಲಬುರಗಿ: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಾಯಕರ ನೇತೃತ್ವದಲ್ಲಿ ರವಿವಾರ ಜಿಲ್ಲಾ ಮಟ್ಟದ ನಾಯಕರ ಸಭೆ ಜರುಗಿತು. ಸಭೆಯಲ್ಲಿ…

20 hours ago

ಜನಪ್ರಿಯ ಲೇಖಕರಿಗಿಂತ ಜನಪರ ಲೇಖಕರ ಅಗತ್ಯ

'ಬುದ್ಧ ಗಂಟೆಯ ಸದ್ದು' ಕಥಾ ಸಂಕಲನ ಬಿಡುಗಡೆ ಕಲಬುರಗಿ: ಓದುಗರನ್ನು ಕೆಣಕುವ, ಬಡವರ ಬವಣೆಯನ್ನು ವಿವರಿಸುವ, ಸತ್ಯವನ್ನು ಪ್ರತಿಪಾದಿಸುವ ಕೃತಿಗಳಿಗೆ…

22 hours ago

ಶ್ರೀ ಈಶ್ವರ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ

ಕಲಬುರಗಿ: ನಗರದ ಗಂಜ ಬ್ಯಾಂಕ್ ಕಾಲೋನಿ ಶ್ರೀ ಈಶ್ವರ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ನಡೆಯಿತು. ಬಡಾವಣೆಯ ಸಮಸ್ತ ನಾಗರಿಕರು ಈ…

23 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420