ಕರುನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷ ಪೃಥ್ವಿರಾಜ ಎಸ್. ರಾಂಪುರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ : ನಗರದ ಕರುನಾಡ ವಿಜಯ ಸೇನೆಯ ಜಿಲ್ಲಾ ಕಾರ್ಯಲಯದಲ್ಲಿ ಕರುನಾಡ ವಿಜಯ ಸೇನೆಯ ಜಿಲ್ಲಾ ಮಹಿಳಾ ಘಟಕ ಹಾಗೂ ಕಲಬುರಗಿ ತಾಲೂಕು ಘಟಕ ನೂತನ ಪದಾಧಿಕಾರಿಗಳನ್ನು ಸೇನೆಯ ಜಿಲ್ಲಾಧ್ಯಕ್ಷ ಪೃಥ್ವಿರಾಜ ಎಸ್. ರಾಂಪುರ ರವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.

ಪೃಥ್ವಿರಾಜ ಎಸ್. ರಾಂಪುರ ಮಾತನಾಡುತ್ತಾ ಕರುನಾಡ ವಿಜಯ ಸೇನೆ ಸಂಘಟನೆ ಕನ್ನಡದ ನೆಲ ಜಲ ಭಾಷೆ ಕನ್ನಡದ ಸಂಸ್ಕøತಿಕ ಉಳಿವಿಗಾಗಿ ಹಾಗೂ ಕನ್ನಡಿಗರಿಗೆ ಮೊದಲ ಆದ್ಯತೆ ಕೊಡಬೇಕೆ ಸಮಾಜದಲ್ಲಿ ಬದುಕುತ್ತಿರುವ ಬಡ ನಿರ್ಗತಿಕರು ಪರವಾಗಿ ಸಂಘಟನೆ ನಿರಂತರವಾಗಿ ಕೆಲಸ ಮಾಡುತ್ತಾ ಬರುತ್ತಿದೆ ಕರುನಾಡ ವಿಜಯಸೇನೆ ಇದು ಒಂದು ಕೇವಲ ಸಂಘಟನೆ ಅಲ್ಲ ಇದು ಒಂದು ಕರ್ನಾಟಕ ರಾಜ್ಯದಲ್ಲಿ ದೊಡ್ಡ ಶಕ್ತಿ ಇವತ್ತಿನ ದಿನಗಳಲ್ಲಿ ಈ ರಾಜ್ಯದ ಕನ್ನಡಿಗರಿಗಾಗಿ ರಾಜ್ಯದ ಸಂಸ್ಕೃತಿಕ ಕಾರ್ಯಕ್ರಮಗಳು ಕರುನಾಡ ವಿಜಯಸೇನೆ ಸಂಘಟನೆ ಈ ರಾಜ್ಯಕ್ಕೆ ಅಪಾರ ಕೊಡುಗೆಗಳನ್ನು ಕೊಟ್ಟಿದೆ.

ವಿಜಯಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್ ಅವರು ಸರಕಾರಿ ಶಾಲೆಗಳು ಉಳಿಯಬೇಕು ಸರಕಾರಿ ಶಾಲೆಗಳಿಗೆ ಹೆಚ್ಚಿನ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡಬೇಕೆ ಸರಕಾರಿ ಶಾಲೆಗಳು ಖಾಸಗಿ ಶಾಲೆಗಳ ತರ ಅಂದ ಚೆಂದ ಕಾಣಬೇಕೆಂದು ವಿಜಯಸೇನೆ ಸ್ಥಾಪನೆಗೊಂಡ ನಂತರ ಅವರ ಮೊಟ್ಟ ಮೊದಲ ಕಾರ್ಯಕ್ರಮ ಸರಕಾರಿ ಶಾಲೆಗಳಿಗೆ ಬಣ್ಣದ ರಂಗೇರಿಸುವ ಮುಖಾಂತರ ಈಗಾಗಲೇ ವಿಜಯಸೇನೆ ರಾಜ್ಯದಲ್ಲಿ ಸುಮಾರು 500 ಸರಕಾರಿ ಶಾಲೆಗಳಿಗೆ ಬಣ್ಣದ ರಂಗೇರಿಸಿ ಅಂದ ಚಂದ ಕಾಣುವ ಹಾಗೆ ಮಾಡಿದೆ ವಿಜಯಸೇನೆ ಈಗಲೂ ಕೂಡ ಈ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ.

ತದನಂತರ ನ್ಯಾಯಾಲಯದ ತಿರ್ಪು ಕೇವಲ ಆಂಗ್ಲ ಭಾಷೆಯಲ್ಲಿ ಆದೇಶ ಇರುತ್ತಾ ಇತ್ತು ಅದನ್ನು ವಿಜಯಸೇನೆ ಗಮನಕ್ಕೆ ತೆಗೆದುಕೊಂಡು ಇನ್ನು ಮುಂದೆ ನ್ಯಾಯಾಲಯದ ತರ್ಪು ಕನ್ನಡದಲ್ಲಿ ಇರಬೇಕೆಂದು ಹೋರಾಟ ಮಾಡುವ ಮುಖಾಂತರ ಸರಕಾರಕ್ಕೆ ಒತ್ತಾಯಿಸಿ ಹೋರಾಟ ಮಾಡಿದ ನಂತರ ಸರಕಾರ ಎಚ್ಚೆತ್ತುಕೊಂಡು ಕರ್ನಾಟಕ ನ್ಯಾಯಾಲಯದ ತಿರ್ಫಘನ್ನು ಕನ್ನಡದಲ್ಲಿ ನೀಡಬೇಕೆಂದು ಆದೇಶ ಹೊರಡಿಸಿತ್ತು.

ಇದು ವಿಜಯಸೇನೆ ಹೋರಾಟದ ಪ್ರತಿಫಲವಾಗಿದೆ ಕೇವಲ ಹೋರಾಟಕ್ಕೆ ಮೀಸಲಾಗಾದೆ (ಕೊರೋನಾ) ಕೋವಿಡ್ ಮಹಾಮಾರಿಯಿಂದ ಲಾಕ್ ಡೌನ್ ಪರಿಣಾಮದಿಂದ ದೇಶವೆ ನಲೋಗಿ ಹೋದಾಗ ಈ ದೇಶದ ಜನರಿಗೆ ಜೀವದ ಭಯದ ವಾತಾವರಣ ಸೃಷ್ಟಿ ಆದರು ಕೂಡ ವಿಜಯಸೇನೆ ರಾಜ್ಯ ಪದಾಧಿಕಾರಿಗಳು ತಮ್ಮ ಪ್ರಾಣವನ್ನು ಲೆಕ್ಕಿಸದೆ ರಾಜ್ಯದ ಸುಮಾರು 5000 ಕುಟುಂಬಗಳಿಗೆ ಆಹಾರ ಕಿಟ್ಟುಗಳನ್ನು ವಿತರಣೆ ಮಾಡಿರುತ್ತಾರೆ ಹೀಗೆ ವಿಜಯಸೇನೆ ಕೊಡುಗೆಗಳು ಅಪ್ಪಾರವಾಗಿ ಈ ರಾಜ್ಯದ ಕುಟುಂಬಗಳಿಗೆ ನೀಡಿದೆ ಇದೆ.

ಬೆಂಗಳೂರಿನ ಮಹಾ ಜನತೆಗೆ ಮಹಾಜನತೆಯ ಒಳಿತಿಗಾಗಿ ಬೆಂಗಳೂರಿನ ಜನತೆ ಕುಡಿಯುವ ನೀರಿಗಾಗಿ ಮೇಕೆದಾಟು ಆಣೆ ಕಟ್ಟಿಗಾಗಿ ರಾಮನಗರದಿಂದ ವಿಧಾನಸೌಧದ ವರೆಗೆ ಸಾವಿರಾರು ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿ ಬೃಹತ್ ಪ್ರತಿಭಟನೆ ಮಾಡುವ ಮುಖಾಂತರ ಸರಕಾರಕ್ಕೆ ಎಚ್ಚರಗೆ ನೀಡಿದ್ದು ಇದೇ ವಿಜಯಸೇನೆ ಅದು ಅಲ್ಲದೆ ಕನ್ನಡ ನಾಡಿನ ಹನುಮನಿಗೆ ಕನ್ನಡಿಗರಿಂದ ಉತ್ಸವ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದು,್ದ ರಾಜ್ಯ ಯುವ ಘಟಕ ಅಧ್ಯಕ್ಷ ಆರ್ ಎಸ್ ಮಹೇಶ್ ರವರ ನೇತೃತ್ವದಲ್ಲಿ ನಡೆದ ಕರ್ಯಕ್ರಮ ಅತ್ಯಂತ ಅದ್ದೂರಿಯಾಗಿ ಯಶಸ್ವಿಗೊಂಡಿತು.

ವಿಜಯ ಸೇನೆ ಕರ್ಯಕ್ರಮಗಳು ಇಷ್ಟೇ ಅಲ್ಲದೆ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಪುತ್ರ ಗಣಧಾಳ್ ರವರ ನೇತೃತ್ವದಲ್ಲಿ ರಾಯಚೂರಿನ ಲಿಂಗಸುಗೂರ ತಾಲೂಕಿನಲ್ಲಿ 101 ಜೋಡಿಗಳಿಗೆ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಅತ್ಯಂತ ಯಶಸ್ವಿಕೊಂಡಿತ್ತು ಇಷ್ಟಲ್ಲದೆ ಬೃಹತ್ ಸಮಾವೇಶ ಕಾರ್ಯಕ್ರಮ, ಕಲಾಬ್ರಹ್ಮ ಪ್ರಶಸ್ತಿ ಪ್ರಧಾನ, ರಾಯಣ್ಣ ಉತ್ಸವ, ಕನ್ನಡ ಸಂಸ್ಕೃತಿಕ ಹಬ್ಬ, ಕೆಂಪೇಗೌಡರ ಜಯಂತಿ, ಅತ್ಯುತ್ತಮ ಶಿಕ್ಷಕರಿಗೆ ವಿದ್ಯಾವಾರಿಧಿ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಕದಂಬ ಕನ್ನಡಿಗ ಪ್ರಶಸ್ತಿ ಹೀಗೆ ಹಲವಾರು ಕಾರ್ಯಕ್ರಮ ಈ ರಾಜ್ಯದಲ್ಲಿ ಮಾಡುತ್ತಾ ಬಂದಿದೆ ಎಂದು ಜಿಲ್ಲಾಧ್ಯಕ್ಷ ಪೃಥ್ವಿರಾಜ ಎಸ್ ರಾಂಪುರ ಅವರು ನೂತನ ಪದಾಧಿಕಾರಿಗಳಿಗೆ ಹೇಳುವ ಮುಖಾಂತರ ಸಂಘಟನೆಯ ಹೋರಾಟಗಳು ಹಾಗೂ ಕಾರ್ಯಕ್ರಮಗಳು ಈ ರಾಜ್ಯದ ಕನ್ನಡಿಗರಿಗೆ ಕೊಡುಗೆಗಳ ಬಗ್ಗೆ ಹೇಳಿದರು.

ನಂತರ ಕಲಬುರಗಿ ತಾಲೂಕು ಅಧ್ಯಕ್ಷರನ್ನಾಗಿ ಕಲ್ಯಾಣಿ ಎಸ್. ತಳವಾರ್, ಮಹಿಳಾ ಘಟಕ ಜಿಲ್ಲಾಧ್ಯಕ್ಷರಾಗಿ ನಿರ್ಮಲಾ ಎಂ. ತಳವಾರ್, ತಾಲೂಕು ಗೌರವಾಧ್ಯಕ್ಷರನ್ನಾಗಿ ಅಲ್ಲಿಸಾ ಅಗಸಿಮನಿ, ತಾಲೂಕು ಉಪಾಧ್ಯಕ್ಷರಾಗಿ ಪ್ರಭುಲಿಂಗ ಎ ತಳವಾರ್ ಇವರನ್ನು ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ಯುವ ಘಟಕ ಅಧ್ಯಕ್ಷ ನಾಗರಾಜ ಮೈತ್ರಿ, ನಗರ ಅಧ್ಯಕ್ಷ ರಾಜು ಎಚ್ ಗುಂಟ್ರಳ, ರಾಜೇಂದ್ರ ಟೈಗರ್, ಸತೀಶ್ ಸೇರಿದಂತೆ ಇತರರು ಇದ್ದರು.

emedialine

Recent Posts

ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಪಟ್ಟಣದ ವಾರ್ಡ್ ಸಂಖ್ಯೆ12 ರಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಪುರಸಭೆ ಮಾಜಿ ಅಧ್ಯಕ್ಷ,…

3 hours ago

ಭ್ರಷ್ಟಾಚಾರ ರಹಿತ ವಿವಿಗೆ ಆದ್ಯತೆ: ರಾಘವೇಂದ್ರ ಭೈರಪ್ಪ

ಕಲಬುರಗಿ: ವಿಶ್ವವಿದ್ಯಾಲಯದಲ್ಲಿ ನಡೆಯುವ ಪ್ರತಿಯೊಂದು ಕಾರ್ಯವು ಕೂಡ ಭ್ರಷ್ಟಾಚಾರ ರಹಿತವಾಗಿರಬೇಕು ಎನ್ನುವ ಮನೋಭಾವ ಹೊಂದಿ ಕೆಲಸ ಮಾಡುತ್ತಿದ್ದೇನೆ ಎಂದು ಗುಲಬರ್ಗಾ…

4 hours ago

ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಕಲಬುರಗಿ: ಸ್ವಸ್ತಿಕ ನಗರದ ಅಮರಾವತಿ ಅಪಾಟೆರ್ಂಟ್ ನಿವಾಸಿಗಳಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಜರುಗಿತು. ನಮ್ಮ ದೇಶದ ಪ್ರಧಾನಮಂತ್ರಿ ಅವರ ಸ್ವಚ್ಛ…

4 hours ago

ಸಚಿವ ಸಂಪುಟ ಸಭೆಯಲ್ಲಿ ವಿವಿಧ ಬೇಡಿಕೆ ಈಡೇರಿಕ್ಕೆಗೆ ಆಗ್ರಹ

ಕಲಬುರಗಿ:ಸಚಿವ ಸಂಪುಟ ಸಭೆಯಲ್ಲಿ ಮುಖ್ಯವಾಗಿ ರಾಜ್ಯ ಸರಕಾರದ ವತಿಯಿಂದ ಕಲಬುರಗಿಯಲ್ಲಿ ತೊಗರಿ ಪಾರ್ಕ ಸ್ಥಾಪಿಸಬೇಕು, ಕಲಬುರಗಿ ಅಭಿವೃದ್ದಿ ಮಂಡಳಿಯನ್ನು ಕೆ.ಎಂ.ಎಫ್…

4 hours ago

ಸೇಡಂ: ನೀರಿನಲ್ಲಿ ಮುಳುಗಿ ಮೃತ ಕುಟುಂಬಕ್ಕೆ ಸರ್ಕಾರದಿಂದ 3 ಎಕ್ಕರೆ ಜಮೀನು ನೀಡಿ

ಕಲಬುರಗಿ: ಸೇಡಂ ತಾಲೂಕಿನ ಕುರುಗುಂಟ ಗ್ರಾಮದ  ರಾಜು ನಾಮವಾರ್ ಸಂಗಾವಿ ಹೊಳೆಯಲ್ಲಿ ಮುಳಗಿ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ 3 ಎಕ್ಕರೆ …

4 hours ago

ಟಿಎಪಿಸಿಎಂ ಅಧ್ಯಕ್ಷರಾಗಿ ಪಾಟೀಲ್ ಅವಿರೋಧ ಆಯ್ಕೆ

ಕಲಬುರಗಿ: ಸಹಕಾರಿ ಕ್ಷೇತ್ರದ ಇಲ್ಲಿನ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ (ಟಿಎಪಿಸಿಎಂ) ಸಂಘದ ಅಧ್ಯಕ್ಷರಾಗಿ ಶರಣಬಸಪ್ಪ ಜಗದೀಶ ಪಾಟೀಲ್…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420