ಶ್ರೀಪ್ರಭು ಕಾಲೇಜ್ ಸಮಾಜಶಾಸ್ತ್ರ ವಿಭಾಗ ವಿದ್ಯಾರ್ಥಿಗಳ ಹೆಳವರ ಅಧ್ಯಯನ

ಸುರಪುರ: ನಗರದ ಶ್ರೀ ಪ್ರಭು ಮಹಾವಿಧ್ಯಾಲಯದ ಸಮಾಜಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ರಾಯಚೂರು ವಿಶ್ವವಿದ್ಯಾಲಯದ ಆದೇಶದಂತೆ ಬಿ. ಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಕ್ಷೇತ್ರಾಧ್ಯಯನ ಕಡ್ಡಾಯವಾಗಿ ಕೈಗೊಳ್ಳಬೇಕೆನ್ನುವ ಆದೇಶದ ಭಾಗವಾಗಿ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಹೆಳವ ಸಮುದಾಯದ ಸಂಸ್ಕೃತಿ ಎನ್ನುವ ವಿಷಯದ ಕುರಿತು ಅಧ್ಯಯನ ಕೈಗೊಂಡು ಇದಕ್ಕಾಗಿ ಸುರಪುರದ ಕುಂಬಾರಪೇಟೆಯ ಹೊರವಲಯದಲ್ಲಿ ತಂಗಿರುವ ಹೆಳವ ಸಮುದಾಯದ ಜನರನ್ನು ಸಂಧರ್ಶಸಿ ಸಮಗ್ರ ಮಾಹಿತಿಯನ್ನು ಕಲೆಹಾಕಲಾಯಿತು.

ಈ ಕ್ಷೇತ್ರಾಧ್ಯಯನ ಮಹತ್ವದ ಕುರಿತು ಅಭಿಪ್ರಾಯವನ್ನು ಹಂಚಿಕೊಂಡ ವಿಭಾಗದ ಮುಖ್ಯಸ್ಥರಾದ ಡಾ. ಸಾಯಿಬಣ್ಣ ಮುಡಬುಳರವರು ಶೈಕ್ಷಣಿಕ ಸಂಸ್ಥೆಗಳು ಹಮ್ಮಿಕೊಳ್ಳುವ ಕ್ಷೇತ್ರಾಧರಿತ ಅಧ್ಯಯನಗಳು ಅತ್ಯಂತ ಸತ್ವಪೂರ್ಣ, ಯತವತ್ತಾದ ಮಾಹಿತಿಯ ಆಗರಗಳಾಗಿವೆ. ಭಿನ್ನ ನೆಲೆಯ ಪರಿಭಾವನೆಯೊಂದಿಗೆ ಇಡಿಯಾದ ವಸ್ತುನಿಷ್ಠ ಚಿತ್ರಣವನ್ನು ಸಮಾಜಕ್ಕೆ ಮತ್ತು ಆಡಳಿತಗಾರರಿಗೆ ಇಂತಹ ಅಧ್ಯಯನಗಳು ಒದಗಿಸುತ್ತವೆ. ಪ್ರಸ್ತುತ ಅಧ್ಯಯನವು ಸಹ ಹೆಳವ ಸಮುದಾಯದ ಸಮಸ್ಯೆ ಮತ್ತು ಸವಾಲುಗಳನ್ನು ಹೊರಹಾಕುತ್ತವೆ.

ಅಲೆಮಾರಿ ಸಮುದಾಯದ ಸಂಕಷ್ಟಗಳನ್ನು ಸಮಾಜಕ್ಕೆ ಬಿತ್ತರಿಸುವಂತಹ ಅನನ್ಯವಾದ ಕಾರ್ಯಗಳನ್ನು ಈ ತರಹದ ಸಂಶೋಧನಾ ಮಾಡುತ್ತವೆ. ಆಧುನಿಕರಣ, ನಗರಿಕರಣ, ಜಾಗತಿಕರಣದದ ಪ್ರಭಾವದಿಂದ ಅನೇಕ ಸಮುದಾಯಗಳು ಪರಿವರ್ತನೆಯ ಕಕ್ಷೆಗೆ ಮರಳುತ್ತಿವೆ, ಇಂತಹ ಆಧುನಿಕ ಆತಂಕಗಳನ್ನು ಮೀರಿ ಇಂದಿಗೂ ಕೂಡಾ ಹೆಳವ ಸಮುದಾಯ ತನ್ನ ವೃತ್ತಿಯನ್ನು ಮುಂದುವರೆಸುತ್ತಿರುವದು ಬರುತ್ತಿದೆ. ಮನೆತನವೊಂದರ ಇತಿಹಾಸವನ್ನು ತಮ್ಮ ಕಡತಗಳಲ್ಲಿ ಸುಭದ್ರವಾಗಿಟ್ಟುಕೊಂಡು ಅವರ ಇತಿಹಾಸದ ಕುರುಹಗಳ ಕುರಿತು ದಿಗ್ದರ್ಶನ ಮಾಡುವ ಅಪರೂಪ ಕಾಯಕದ ಇವರ ಸಂಸ್ಕೃತಿ ವಿಶೇಷವಾಗಿದೆ ಎಂದರು.

ಇದೆ ಸಂಧರ್ಭದಲ್ಲಿ ಸಮಾಜಶಾಸ್ತ್ರ ಉಪನ್ಯಾಸಕರಾದ ನಿಂಗಯ್ಯ ಪೂಜಾರಿ ಚೌಡೇಶ್ವರಿಹಾಳ ಅವರು ತಮ್ಮ ನುಡಿಗಳನ್ನು ಹಂಚಿಕೊಳ್ಳುತ್ತಾ,ಹೆಳವ ಸಮುದಾಯವು ಆಧುನಿಕ ವಿಸ್ಮಯವಾಗಿದೆ. ಮಾಹಿತಿ ತಂತ್ರಜ್ಞಾನದ ಇಂತಹ ದಿನಗಳಲ್ಲೂ ತಮ್ಮ ಆಚಾರ ವಿಚಾರಗಳ ಮೂಲಕ ಸಮಾಜಕ್ಕೆ ಮಹತ್ತರವಾದ ಸಂದೇಶ ನೀಡುತ್ತಿದೆ ಎಂದರು.

ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳು ಹೆಳವ ಸಮುದಾಯದ ಜನರು ಹಾಜರಿದ್ದರು.

emedialine

Recent Posts

ಕಲಬುರಗಿ: ಇಎಸ್ ಐಸಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್, ನರರೋಗ ತಜ್ಞರ ಪ್ರಾರಂಭಕ್ಕೆ ಆಗ್ರಹ

ಕಲಬುರಗಿ: ನಗರದಲ್ಲಿನ ಇಎಸ್ ಐಸಿ ವೈದ್ಯಕೀಯ ಆಸ್ಪತ್ರೆಯಲ್ಲಿ ವಿಕಿರಣಶಾಸ್ತ್ರ ವಿಭಾಗದಲ್ಲಿ ಸಿಟಿ ಸ್ಕ್ಯಾನ್ ಮಾಡುವುದಕ್ಕೆ 30 ದಿನಗಳ ಸಮಯ ತೆಗೆದುಕೊಳ್ಳುತ್ತಿರುವುದನ್ನು…

18 mins ago

ರಾಜ್ಯಮಟ್ಟದ ಗಮಕ‌ ಸಮ್ಮೇಳ‌ನ

ಕಲಬುರಗಿ: ಜೇವರ್ಗಿ ತಾಲೂಕು‌ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮೈಸೂರಿನ ಪರಂಪರೆ ಸಂಸ್ಥಯ ಸಹಯೋಗದಲ್ಲಿ ಜೇವರ್ಗಿಯ ಟೌನ್ ಹಾಲ್ ಹಳೆ…

22 mins ago

ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಪಟ್ಟಣದ ವಾರ್ಡ್ ಸಂಖ್ಯೆ12 ರಲ್ಲಿ ಸಿ.ಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಪುರಸಭೆ ಮಾಜಿ ಅಧ್ಯಕ್ಷ,…

11 hours ago

ಭ್ರಷ್ಟಾಚಾರ ರಹಿತ ವಿವಿಗೆ ಆದ್ಯತೆ: ರಾಘವೇಂದ್ರ ಭೈರಪ್ಪ

ಕಲಬುರಗಿ: ವಿಶ್ವವಿದ್ಯಾಲಯದಲ್ಲಿ ನಡೆಯುವ ಪ್ರತಿಯೊಂದು ಕಾರ್ಯವು ಕೂಡ ಭ್ರಷ್ಟಾಚಾರ ರಹಿತವಾಗಿರಬೇಕು ಎನ್ನುವ ಮನೋಭಾವ ಹೊಂದಿ ಕೆಲಸ ಮಾಡುತ್ತಿದ್ದೇನೆ ಎಂದು ಗುಲಬರ್ಗಾ…

11 hours ago

ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

ಕಲಬುರಗಿ: ಸ್ವಸ್ತಿಕ ನಗರದ ಅಮರಾವತಿ ಅಪಾಟೆರ್ಂಟ್ ನಿವಾಸಿಗಳಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಜರುಗಿತು. ನಮ್ಮ ದೇಶದ ಪ್ರಧಾನಮಂತ್ರಿ ಅವರ ಸ್ವಚ್ಛ…

12 hours ago

ಸಚಿವ ಸಂಪುಟ ಸಭೆಯಲ್ಲಿ ವಿವಿಧ ಬೇಡಿಕೆ ಈಡೇರಿಕ್ಕೆಗೆ ಆಗ್ರಹ

ಕಲಬುರಗಿ:ಸಚಿವ ಸಂಪುಟ ಸಭೆಯಲ್ಲಿ ಮುಖ್ಯವಾಗಿ ರಾಜ್ಯ ಸರಕಾರದ ವತಿಯಿಂದ ಕಲಬುರಗಿಯಲ್ಲಿ ತೊಗರಿ ಪಾರ್ಕ ಸ್ಥಾಪಿಸಬೇಕು, ಕಲಬುರಗಿ ಅಭಿವೃದ್ದಿ ಮಂಡಳಿಯನ್ನು ಕೆ.ಎಂ.ಎಫ್…

12 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420