ಶಶೀಲ್ ನಮೋಶಿಯ ಅಧ್ಯಕ್ಷತೆಯಲ್ಲಿ ಬಸವೇಶ್ವರ ಆಸ್ಪತ್ರೆ ಬದಲಾವಣೆ ಕಂಡಿದೆ: ಪೂಜ್ಯ ಷ ಬ್ರ ಗಂಗಾದರಯ್ಯ ಮಹಾಸ್ವಾಮೀಜಿ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪ್ರತಿಷ್ಟಿತ ಬಸವೇಶ್ವರ ಭೊದನಾ ಮತ್ತು ಸಾರ್ವಜನಿಕ ಆಸ್ಪತ್ರೆಯ ಅತಿಕಡಿಮೆ ಬೆಲೆಯಲ್ಲಿ ತಯಾರದ ಇತರ ಸಂಸ್ಥಗಳಿಗೆ ಮಾದರಿಯಾಗಿ ನಿರ್ಮಿಸಿದ ಉತ್ಕೃಷ್ಟ ಮಟ್ಟದ ಸುಸಜ್ಜಿತ ಆಪರೇಷನ್ ಥಿಯೇಟರ್ ಹಾಗೂ ಆಸ್ಪತ್ರೆಯ ರೋಗಿಗಳು ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುವಂತೆ ಕೆನರಾಬ್ಯಾಂಕ್ ಎ.ಟಿ.ಎಮ್ ಕೇಂದ್ರ ಮತ್ತು ಆಸ್ಪತ್ರೆಯ ಸ್ವಚ್ಚತೆಗಾಗಿ ತರಿಸಲಾದ ಯಾಂತ್ರಿಕ ಉಪಕರಣಗಳನ್ನು ಉದ್ಘಾಟನೆ ಮಾಡಿದ ಷ ಬ್ರ ಶ್ರೀ ಗಂಗಾಧರಯ್ಯ ಸ್ವಾಮಿಜಿ ಹೇಳಿದರು.

ಶಶೀಲ್ ನಮೋಶಿಯವರು ಹಿಡಿದ ಕೆಲಸವನ್ನು ಸಾಧಿಸಿ ತೋರಿಸುವ ಛಲಗಾರರು, ಮಹಾದೇವಪ್ಪ ರಾಂಪುರೆ ಅವರ ಕನಸನ್ನು ಸಾಕಾರಗೊಳಿಸುವಲ್ಲಿ ನಮೋಶಿಯವರ ಪಾತ್ರ ಹೆಚ್ಚಿದೆ, ಇಂದು ಉದ್ಘಾಟಿಸಿದ ಶಸ್ತ್ರಚಿಕಿತ್ಸಾ ಕೇಂದ್ರದಿಮದ ಬಡ ರೋಗಿಗಳು ಕಡಿಮೆ ಬೆಲೆಯಲ್ಲಿ ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆ ಹೊಂದಬಹುದಾಗಿದೆ, ಸಂಸ್ಥೆಯ ಅಭಿವೃದ್ಧಿಯ ವೇಗ ಪಡೆದಿರುವು ಅಷ್ಟೇ ಅಲ್ಲದೆ ಸರಿಯಾದ ದಾರಿಯಲ್ಲಿ ಸಾಗುತ್ತಿದೆ ಎಂದು ಇದರ ಮೂಲಕ ತಿಳಿಯುತ್ತಿದೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಅತ್ತಾರ್ ಅವರ ಸಹಕಾರದಿಂದ ಆಸ್ಪತ್ರೆಯ ಸ್ವಚ್ಚತಾ ಸಿಬ್ಬಂದಿಗಳಿಗೆ ದಾನ್ಯ ವಿತರಣೆ ಮಾಡಿ ಮಾಡಲಾಯಿತು ಹಾಗೂ ಅತ್ಯುತ್ತಮ ಕಾರ್ಯನಿರ್ವಹಿಸಿದ ಪರಿಚಾರಕರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು.

ನಂತರ ಮಾತನಾಡಿದ ಸಂಸ್ಥೆಯ ಅದ್ಯಕ್ಷರಾದ ಶಶೀಲ್ ಜಿ ನಮೋಶಿಯವರು ಬಸವೆಶ್ವರ ಆಸ್ಪತ್ರೆ ಸಂಸ್ಥಾಪಕರ ಆಶಯದಂತೆ ಇನ್ನೂ ಎತ್ತರಕ್ಕೆ ಬೆಳೆಯಬೇಕಿತ್ತು ಈಗ ಅವರ ಆಶಯವನ್ನು ಸಾಕಾರ ಮಾಡಲು ಸಂಸ್ಥೆಯ ಎಲ್ಲಾ ಆಡಳಿತ ಮಂಡಳಿಯವರು, ಸದಸ್ಯರು, ಸಿಬ್ಬಂದಿಗಳು, ಹಾಗು ವಿದ್ಯಾರ್ಥಿಗಳು ಒಂದು ಕುಟುಂಬದಂತೆ ಎಂದು ಬಾವಿಸಿ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ಪ್ರಮಾಣ ಮಾಡಿದ್ದೇವೆ ಅದರಂತೆ ಈ ಸಂಸ್ಥೆಯನ್ನು ಈ ಭಾಗದಲ್ಲಿಯೇ ದೊಡ್ಡದಾದ ಮಾದರಿ ಸಂಸ್ಥೆಯಾಗಿ ಬೆಳೆಸುವ ಗುರಿ ಹೊಂದಿದ್ದೇವೆ ಎಂದರು.

ಕಾರ್ಯಕ್ರಮಲ್ಲಿ ಸಂಸ್ಥೆಯ ಉಪಾದ್ಯಕ್ಷ ರಾಜ ಭಿ ಭೀಮಳ್ಳಿ, ಕಾರ್ಯಧಶಿಗಳಾದ ಉದಯ ಕುಮಾರ ಚಿಂಚೋಳಿರವರು, ಜಂಟಿ ಕಾರ್ಯದರ್ಶಿ ಡಾ. ಕೈಲಾಶ್ ಪಾಟೀಲರವರು, ಆಡಳಿತ ಮಂಡಳಿ ಸದಸ್ಯರು, ವೈದ್ಯಕೀಯ ಕಾಲೇಜಿನ ಡೀನ್ ಡಾ. ಶರಣಗೌಡ ಪಾಟೀಲ್ ಹಾಗು ಮೆಡಿಕಲ್ ಸೂಪರಿಡೆಂಟ್ ಡಾ. ಶರಣ ಬಸಪ್ಪ ಅವಂತಿ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಡಾ. ಅರುಂಧತಿ ಪಾಟೀಲ್ ನಿರೂಪಿಸಿದರೂ.

emedialine

Recent Posts

ಕಾಳಗಿ ತಲುಪಿದ ವಿಕಾಸ ಪಥ ಯಾತ್ರೆ

ಕಾಳಗಿ: ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ವಿಕಾಸ ಪಥ ಯಾತ್ರೆಗೆ ಅದ್ದೂರಿ ಸ್ವಾಗತ ನೀಡಲಾಯಿತು. 7ನೇ ಭಾರತ ವಿಕಾಸ ಸಂಗಮದ (ಭಾರತ…

4 hours ago

ಕಲಬುರಗಿ ಕಸಾಪ ದಿಂದ ಶಿಕ್ಷಕರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ 15 ರಂದು

ಕಲಬುರಗಿ: ಸುಭದ್ರ ಸಮಾಜ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಜಿಲ್ಲೆಯ ಆಯ್ದ ಶಿಕ್ಷಕರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ…

4 hours ago

ಕೆಬಿಎನ ವಿವಿಯಲ್ಲಿ ಒಂದು ದಿನದ ಕಾರ್ಯಾಗಾರ

ಕಲಬುರಗಿ: ಸ್ಥಳೀಯ ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಇಂಜಿನಿಯರಿಂಗ ನಿಕಾಯದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗ ಮತ್ತು ಕಂಪ್ಯೂಟರ್ ಸೈನ್ಸ್…

7 hours ago

ಹನಿಟ್ರ್ಯಾಪ್ ಆರೋಪಿಗಳು ಸ್ವಯಂ ಶರಣಗಾತರಾಗಿಲ್ಲ: ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ

ಕಲಬುರಗಿ: ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಆರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಆ ಆರೋಪಿಗಳು ಸ್ವಯಂ ಪ್ರೇರಿತರಾಗಿ ಶರಣಾಗತರಾಗಿಲ್ಲ.…

15 hours ago

ಚಿಂಚೋಳಿಯಲ್ಲಿ ಬೀದರ್ ಸಂಸದರಿಗೆ ಅಭಿನಂದನಾ ಸಮಾರಂಭ: ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಭರವಸೆ

ಚಿಂಚೋಳಿ: ನನ್ನ ಗೆಲುವಿಗೆ ಶ್ರಮಿಸಿದ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೆ ನಾನು ಚಿರರುಣಿಯಾಗಿರುತ್ತೇನೆ. ಅತಿ ಹೆಚ್ಚು ಮತಗಳಿಂದ ನನಗೆ ಲೋಕಸಭೆಗೆ ಕಳುಹಿಸಿದ್ದು,…

16 hours ago

ಚಿಂಚೋಳಿ ಪುರಸಭೆ ನೂತನ ಅಧ್ಯಕ್ಷರಾಗಿ ಟೈಗರ್, ಉಪಾಧ್ಯಕ್ಷರಾಗಿ ಸುಲ್ತಾನಬೇಗಂ ಆಯ್ಕೆ

ಚಿಂಚೋಳಿ: ಅವಳಿ ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆನಂದ್ ತಂದೆ ನಾಗೇಂದ್ರಪ್ಪ ಟೈಗರ್,…

16 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420