ಭಾರತ ದೇಶದ ಪರಂಪರೆಯಲ್ಲಿ ಪ್ರತಿ ಮಾಸವು ವಿಶೇಷ

ಕಲಬುರಗಿ: ಜ್ಞಾನದಾಸೋಹ ಹಾಗೂ ಅನ್ನದಾಸೋಹ ಮೂಲಕ ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದು ಮುಗುಳನಾಗಾವಿ ಕಟ್ಟಿಮನಿ ಸಂಸ್ಥಾನ ಹಿರೇಮಠದ ಒಡೆಯರಾದ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಹೇಳಿದರು.

ನಗರದ ಬಸವೇಶ್ವರ ಕಾಲೊನಿಯ ನೂತನ ಬಡಾವಣೆಯ ಶಿವ ಮಂದಿರದಲ್ಲಿ ಶ್ರಾವಣ ಮಾಸದ ಅಂಗವಾಗಿ ಮೂರನೇ ವರ್ಷದ ಮಹಾದಾಸೋಹೀ ಶ್ರೀ ಶರಣಬಸವೇಶ್ವರ ಪುರಾಣದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜಗತ್ತಿನಲ್ಲಿ ಬಹಳ ಕಿಮ್ಮತ್ತಿನ ಮೂರು ರತ್ನಗಳು ಅದರಲ್ಲಿ ಸುಭಾಷಿತ ಒಂದು ಸುಭಾಷಿತ ಅಂದರೆ ಉತ್ತಮವಾದ ಮಾತು ಎಂದು ಅರ್ಥ ಭಾರತ ದೇಶದ ಪರಂಪರೆಯಲ್ಲಿ ಪ್ರತಿಮಾಸವು ಬಹಳ ವಿಶೇಷತೆಯಿಂದ ಕೂಡಿದೆ ಶ್ರಾವಣ ಮಾಸ ಒಂದು ತಿಂಗಳು ಒಳ್ಳೆಯ ಮಾತು ಆಲಿಸುವುದಕ್ಕಾಗಿ ಇರುವ ಮಾಸ ಶ್ರಾವಣ ಇದರ ಅರ್ಥ ಶ್ರವಣ ಅಂದೆ ಕೇಳುವುದು ಏನನ್ನ ಕೇಳುವುದು ಎಂದರೆ ಶರಣರ ,ಸಂತರ, ಸತ್ಪುರುಷರ ಜೀವನದ ಸಾರವನ್ನು ಆಲಿಸುವುದಕ್ಕಾಗಿ ಮೀಸಲಿರುವ ತಿಂಗಳು ಎಂದು ತಿಳಿಸಿದರು.

ಪುರಾಣಿಕರಾದ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಶಾಸ್ತ್ರಿಗಳು ಶರಣಬಸವೇಶ್ವರ ಪ್ರಾಣಿ ಪಕ್ಷಿಗಳಲ್ಲಿಯೂ ಕೂಡ ದೇವರನ್ನು ಕಂಡು ದಾಸೋಹವನ್ನು ಮಾಡಿದರು ಎಂದು ಪುರಾಣ ಹೇಳಿದರು.

ಕಲಾವಿದರಾದ ಚೇತನ ಸ್ವಾಮಿ ಬೀದಿಮನಿ, ತಬಲಾ ವಾದಕ ಕಲ್ಮೇಶ ದೇಸಾಯಿ ಕಲ್ಲೂರ ಅವರಿಂದ ಸಂಗೀತ ಜರುಗಿತು ಶಿವ ಮಂದಿರ ಸಮಿತಿ ಅಧ್ಯಕ್ಷರಾದ ಭಿಮಾಶಂಕರ ಚಕ್ಕಿ, ಉಪಾಧ್ಯಕ್ಷರಾದ ಮಲ್ಲಿನಾಥ ಭೋಳಶೆಟ್ಟಿ , ಕಾರ್ಯದರ್ಶಿಯಾದ ಉಮೇಶ ಸಂಗೊಳ್ಳಿ, ವಚನೋತ್ಸವ ಮಹಿಳಾ ಘಟಕದ ಸರ್ವ ಪದಾಧಿಕಾರಿಗಳು. ಶಿವ ಮಂದಿರ ಸಮಿತಿ ಸದಸ್ಯರು ಕಾಲೊನಿಯ ಸಮಸ್ತ ಸದ್ಭಕ್ತರು ಭಾಗವಹಿಸಿದ್ದರು.

emedialine

Recent Posts

ನಾಳಿನ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನ್ಯಾಯವಾದಿ ಕೋರಿಕೆ

ಕಲಬುರಗಿ: ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಸರ್ಕಾರ ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಎಲ್ಲ ನ್ಯಾಯವಾದಿಗಳು ಹೆಚ್ಚಿನ…

3 hours ago

ಕೊಪ್ಪಳದಲ್ಲಿ ವಧು ವರರ ಸಮಾವೇಶ, ಪ್ರತಿಭಾ ಪುರಸ್ಕಾರ

ಕಲಬುರಗಿ: ಎಲ್ಲಾ ಜಾತಿಯನ್ನು ಗೌರವಿಸು, ನಿನ್ನ ಜಾತಿಯನ್ನು ಆರಾಧಿಸು ಎಂಬ ಭಾವನೆಯೊಂದಿಗೆ ಕೊಪ್ಪಳ ಜಿಲ್ಲಾ ಗಾಣಿಗ ಸಮಾಜ, ಡಾ.ಚೌಧರಿ ಮತ್ತು…

3 hours ago

ಪ್ರಜಾಪ್ರಭುತ್ವ ದಿನಾಚರಣೆ ಹಿನ್ನಲೆ ಮಾನವ ಸರಪಳಿ ಯಶಸ್ವಿಗೊಳಿಸಿ; ಜಗದೀಶ ಚೌರ್

ಶಹಾಬಾದ: ಇದೆ ಸೆಪ್ಟೆಂಬರ್ 15ರಂದು ಕರ್ನಾಟಕ ಸರ್ಕಾರದಿಂದ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನಲೆಯಲ್ಲಿ ಬೀದರ ಜಿಲ್ಲೆಯಿಂದ ಚಾಮರಾಜನಗರದವರೆಗೆ ರಾಜ್ಯದ್ಯಾದಂತ ಏಕಕಾಲಕ್ಕೆ ದಾಖಲೆ…

4 hours ago

ಪಡಿತರ ಚೀಟಿ ಶಾಶ್ವತವಾಗಿ ರದ್ದು ಪಡಿಸುವ ಸರಕಾರದ ವಿರುದ್ಧ ಆಕ್ರೋಶ

ಶಹಾಬಾದ: ಅನ್ನಭಾಗ್ಯಕ್ಕೆ ಕನ್ನಹಾಕುತ್ತಿರುವ ಸರಕಾರಗಳ ವಿರುದ್ಧ ಪ್ರಬಲ ಜನಾಂದೋಲನವನ್ನು ಬೆಳೆಸುವ ಅವಶ್ಯಕತೆಯಿದೆ ಎಂದು ಎಸ್‍ಯುಸಿಐ (ಸಿ) ಪಕ್ಷದ ಶಹಾಬಾದ ಸ್ಥಳೀಯ…

4 hours ago

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ

ಕಲಬುರಗಿ: ಸೈಯದ್ ಚಿಂಚೋಳಿಯಲ್ಲಿರುವ ಚಂದ್ರಶೇಖರ ಪಾಟೀಲ್ ರೇವೂರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜರುಗಿದ 2024-25 ನೇ ಸಾಲಿನ ಕಲಬುರಗಿ…

4 hours ago

ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ

ಕಲಬುರಗಿ: ನಗರದ ಪಬ್ಲಿಕ್ ಗಾರ್ಡನನಲ್ಲಿ ಆರೋಗ್ಯ ಸಹಾಯಕರ (ಹಿರಿಯ, ಕಿರಿಯ) ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಮಹಾನಗರ…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420