ವಿವಿಎಸ್ ಶಾಲೆಯಲ್ಲಿ ಸುಕಿ ಸಂಗೀತ ತಂಡದಿಂದ ಶ್ರಾವಣ ಸಂಗೀತ ಸಂಭ್ರಮ

ಕಲಬುರಗಿ: ಶ್ರಾವಣ ಮಾಸ ಪ್ರಕೃತಿ ಮೂಲಕ ಕಣ್ಣಿಗೆ ಹಬ್ಬ ಮನಸ್ಸಿಗೂ ನೆಮ್ಮದಿ ನೀಡಲು ಸಂಗೀತ ಬೇಕು ಅಂತಹ ಸಂಗೀತ ರಸದೌತಣ ನೀಡಲು ಜಿಲ್ಲೆಯ ಪ್ರಸಿದ್ಧ ಸುಕಿ ಸಾಂಸ್ಕೃತಿಕ ಸಂಸ್ಥೆಯ ತಂಡವು ನಮ್ಮ ವಿವೇಕಾನಂದ ವಿದ್ಯಾನಿಕೇತನ ಶಾಲೆಯ ಸಿಬ್ಬಂದಿ ಹಾಗು ವಿದ್ಯಾರ್ಥಿಗಳಿಗೆ ಶ್ರಾವಣ ಮಾಸದ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಮೆಚ್ಚುವಂತ ಕಾರ್ಯವಾಗಿದೆ ಎಂದು ವಿವಿಎಸ್ ಶಾಲೆಯ ಪ್ರಾಚಾರ್ಯರಾದ ಸಿದ್ದಪ್ಪ ಭಗವತಿ ಹೇಳಿದರು.

ನಗರದ ವಿವೇಕಾನಂದ ವಿದ್ಯಾನಿಕೇತನ ಶಾಲೆಯ ಆವರಣದಲ್ಲಿ ಸುಕಿ ಸಂಗೀತ ತಂಡದವರು ಆಯೋಜಿಸಿದ ಶ್ರಾವಣ ಮಾಸದ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೆ ಸಂದರ್ಭದಲ್ಲಿ ಆಳಂದ ಯುವ ಬಾಲ ಪ್ರತಿಭೆ ಎಸ್ ರಾಜ್ ಶಿವಕುಮಾರ ಬಾಲಕನನ್ನು ಆತನ ಗಾಯನಕ್ಕೆ ಮನಸೋತು ಸಂಗೀತ ಲೋಕದಲ್ಲಿ ಉಜ್ವಲ ಭವಿಷ್ಯ ಕಾಣು ಎಂದು ವಿವಿಎಸ್ ಸಂಸ್ಥೆಯ ಅಧ್ಯಕ್ಷೆ ಸುವರ್ಣ ಭಗವತಿ ಅವರು ಸನ್ಮಾನಿಸಿದರು.

ಸುಕಿ ತಂಡದ ಅಧ್ಯಕ್ಷ ಕಿರಣ್ ಪಾಟೀಲ್ ಆವರ ಗಾಯನದಿಂದ ಆರಂಭವಾದ ಶ್ರಾವಣ ಮಾಸದ ಸಂಗೀತ ಸಂಭ್ರಮ ಗಾಯನವನ್ನುಆರಂಭಿಸಿದರು ತಂಡದ ಶರಣು ಪಟ್ಟಣಶೆಟ್ಟಿ ಪ್ರಕಾಶ ದಂಡೋವತಿ ಆನಂದ ಪಾಟೀಲ ಮಹೇಶ ನಿಪ್ಪಾಣಿ ಕವಿರಾಜ್ ನಿಂಬಾಳ ಅಂಬರೀಶ್ ಕುಲಕರ್ಣಿ ಅನ್ನಪೂರ್ಣ ಚವಾಣ್ ಭೀಮರಾವ್ ಅರಕೇರಿ ಎಸ್ ರಾಜ್ ಹಾಗು ಸಂಸ್ಥೆಯ ಪ್ರಾಧ್ಯಾಪಕರು ಮುದ್ದು ಮಕ್ಕಳು ಗಾಯನ ಸಂಭ್ರಮದಲ್ಲಿ ಭಾಗಿಯಾಗಿ ಭಕ್ತಿ ಗೀತೆಗಳನ್ನು ಹಾಡಿ ಭಕ್ತಿ ಪರವಶರಾದರು.

ನೆರೆದಿದ್ದ ಮಕ್ಕಳು ಶ್ರಾವಣ ಮಾಸದ ಸಂಗೀತ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿದರು .

emedialine

Recent Posts

ನಾಳಿನ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನ್ಯಾಯವಾದಿ ಕೋರಿಕೆ

ಕಲಬುರಗಿ: ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆಪ್ಟೆಂಬರ್ 15ರಂದು ಸರ್ಕಾರ ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಎಲ್ಲ ನ್ಯಾಯವಾದಿಗಳು ಹೆಚ್ಚಿನ…

9 hours ago

ಕೊಪ್ಪಳದಲ್ಲಿ ವಧು ವರರ ಸಮಾವೇಶ, ಪ್ರತಿಭಾ ಪುರಸ್ಕಾರ

ಕಲಬುರಗಿ: ಎಲ್ಲಾ ಜಾತಿಯನ್ನು ಗೌರವಿಸು, ನಿನ್ನ ಜಾತಿಯನ್ನು ಆರಾಧಿಸು ಎಂಬ ಭಾವನೆಯೊಂದಿಗೆ ಕೊಪ್ಪಳ ಜಿಲ್ಲಾ ಗಾಣಿಗ ಸಮಾಜ, ಡಾ.ಚೌಧರಿ ಮತ್ತು…

9 hours ago

ಪ್ರಜಾಪ್ರಭುತ್ವ ದಿನಾಚರಣೆ ಹಿನ್ನಲೆ ಮಾನವ ಸರಪಳಿ ಯಶಸ್ವಿಗೊಳಿಸಿ; ಜಗದೀಶ ಚೌರ್

ಶಹಾಬಾದ: ಇದೆ ಸೆಪ್ಟೆಂಬರ್ 15ರಂದು ಕರ್ನಾಟಕ ಸರ್ಕಾರದಿಂದ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನಲೆಯಲ್ಲಿ ಬೀದರ ಜಿಲ್ಲೆಯಿಂದ ಚಾಮರಾಜನಗರದವರೆಗೆ ರಾಜ್ಯದ್ಯಾದಂತ ಏಕಕಾಲಕ್ಕೆ ದಾಖಲೆ…

9 hours ago

ಪಡಿತರ ಚೀಟಿ ಶಾಶ್ವತವಾಗಿ ರದ್ದು ಪಡಿಸುವ ಸರಕಾರದ ವಿರುದ್ಧ ಆಕ್ರೋಶ

ಶಹಾಬಾದ: ಅನ್ನಭಾಗ್ಯಕ್ಕೆ ಕನ್ನಹಾಕುತ್ತಿರುವ ಸರಕಾರಗಳ ವಿರುದ್ಧ ಪ್ರಬಲ ಜನಾಂದೋಲನವನ್ನು ಬೆಳೆಸುವ ಅವಶ್ಯಕತೆಯಿದೆ ಎಂದು ಎಸ್‍ಯುಸಿಐ (ಸಿ) ಪಕ್ಷದ ಶಹಾಬಾದ ಸ್ಥಳೀಯ…

9 hours ago

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವ

ಕಲಬುರಗಿ: ಸೈಯದ್ ಚಿಂಚೋಳಿಯಲ್ಲಿರುವ ಚಂದ್ರಶೇಖರ ಪಾಟೀಲ್ ರೇವೂರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜರುಗಿದ 2024-25 ನೇ ಸಾಲಿನ ಕಲಬುರಗಿ…

9 hours ago

ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ

ಕಲಬುರಗಿ: ನಗರದ ಪಬ್ಲಿಕ್ ಗಾರ್ಡನನಲ್ಲಿ ಆರೋಗ್ಯ ಸಹಾಯಕರ (ಹಿರಿಯ, ಕಿರಿಯ) ನೌಕರರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯನ್ನು ಮಹಾನಗರ…

9 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420