ಕಲಬುರಗಿ; ನಾಡಿನ ಶಿಕ್ಷಣ, ಆರೋಗ್ಯ ಮತ್ತು ಹೈನುಗಾರಿಕೆ ಉತ್ಪಾದನಾ ಕ್ಷೇತ್ರ ಸೇರಿದಂತೆ ನಾಡಿನ ಪ್ರಗತಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರ ಕೊಡುಗೆ ಅಪಾರವಾಗಿದೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮಡು ರವರು ನುಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸದ್ಭಕ್ತ ಬಳಗ ಕಲಬುರಗಿ, ಜಿಲ್ಲಾ ಸಕಲ ಜೈನ ಸಮಾಜ ಮತ್ತು ಎಸ್.ಆರ್.ಎನ್. ಮೆಹತಾ ಶಾಲೆ, ವತಿಯಿಂದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಆಯೋಜಿಸಿದ ಗುರುವಂದನಾ ಮಹೋತ್ಸವವನ್ನು ಜ್ಯೋತಿ ಬೆಳಗಿಸುವ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರ ಆರ್ಥಿಕ ಚೇತರಿಕೆ, ಸ್ವಾವಲಂಬನೆ ಮೂಲಕ ಸಮಾಜದಲ್ಲಿ ಬಹುದೊಡ್ಡ ಕ್ರಾಂತಿಕಾರಿ ಬದಲಾವಣೆಯನ್ನು ಪೂಜ್ಯ ಹೆಗ್ಗಡೆಯವರು ತರುತ್ತಿದ್ದು ನಗರ ಪ್ರದೇಶ ಸೇರಿದಂತೆ ಗ್ರಾಮೀಣ ಮಹಿಳೆಯರು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಜನೋಪಯೋಗಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿರುವುದು ಬಹು ಸಂತಸದ ಸಂಗತಿಯಾಗಿದೆ ಎಂದರು.
ತಮ್ಮ ಇಡೀ ಜೀವನವನ್ನೇ ಸಮಾಜಕ್ಕಾಗಿ ಧಾರೆಯೆರೆದ ಪೂಜ್ಯಮ ಹೆಗ್ಗಡೆಯವರು ಸರ್ಕಾರದ ಯೋಜನೆಗಳೊಂದಿಗೆ ಕೈಗೂಡಿಸಿ ಅರ್ಹ ಫಲಾನುಭವಿಗಳಿಗೆ ತಲುಪಿಸುತ್ತಿರುವ ಪರಿಣಾಮವಾಗಿ ಇಂದು ಕಲಬುರಗಿ ವಿಭಾಗದಲ್ಲಿಯೂ ಸಹ ಹತ್ತಾರು ಸಾವಿರ ಮಹಿಳೆಯರು ಧರ್ಮಸ್ಥಳ ಸಂಸ್ಥೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆಂದು ನುಡಿದರು. ಪೂಜ್ಯ ಹೆಗ್ಗಡೆಯವರ ಬದುಕು ಇಂದಿನ ಯುವ ಪೀಳಿಗೆಗೆ ಆದರ್ಶಪ್ರಾಯವಾಗಿದ್ದು ಅವರ ಬದುಕು ನಮಗೆಲ್ಲ ಸನ್ಮಾರ್ಗದರ್ಶನವಾಗಿದೆ ಎಂದು ಮತ್ತಿಮಡು ರವರು ನುಡಿದರು.
ಗುರುವಂದನಾ ಸ್ವೀಕರಿಸಿ ಮಾತನಾಡಿದ ಪೂಜ್ಯ ಹೆಗ್ಗಡೆಯವರು ಕಲಬುರಗಿ ಜಿಲ್ಲೆಯ ಜನತೆಯ ಭಕ್ತಿ ಮತ್ತು ಪ್ರೀತಿಗೆ ಗೌರವ ಮತ್ತು ಆತಿಥ್ಯ ನಮ್ಮ ಮನಸೂರೆಗೊಂಡಿದ್ದು ಇಲ್ಲಿಯವರ ಭಕ್ತಿಯಲ್ಲಿ ಶಕ್ತಿ ಇದ್ದು ಹೀಗಾಗಿ ಧರ್ಮಾಧಿಕಾರಿಗಳನ್ನು ಇವತ್ತು ಗೌರವಿಸಿದ್ದು ನಮ್ಮ ಜೀವಮಾನದಲ್ಲಿಯೇ ಮರೆಯಲಾಗದ ಕ್ಷಣವೆಂದು ಭಾವುಕರಾದರು. ಪ್ರತಿಯೊಬ್ಬರು ನಿಷ್ಠೆಯಿಂದ ಕಾಯಕ ಮಾಡಿ ಭಕ್ತಿಯಿಂದ ದಾಸೋಹ ಮಾಡುವಂತೆ ಕರೆ ನೀಡಿದ ಪೂಜ್ಯರು ಸುಂದರ ಸಮಾಜಕ್ಕಾಗಿ ಮತ್ತು ಮನುಕುಲ ನೆಮ್ಮದಿಯಿಂದ ಬದುಕುವುದಕ್ಕಾಗಿ ಶ್ರಮಿಸುವಂತೆ ಕಿವಿ ಮಾತು ಹೇಳಿದರು.
ಎಸ್.ಆರ್.ಎನ್.ಮೆಹತಾ ಸಂಸ್ಥೆಯ ಮುಖ್ಯಸ್ಥರಾದ ಚಕೋರ ಮೆಹತಾ ಅದ್ಯಕ್ಷತೆ ವಹಿಸಿದ್ದರು, ಶ್ರೀಮತಿ ಶೃದ್ಧಾ ಅಮೀತ, ಶ್ರೀಮತಿ ತ್ರಿಶುಲಾ ಮಾಲಗತ್ತಿ, ಜೈನ ಸಮಾಜದ ಮುಖಂಡರಾದ ಬಾಹುಬಲಿ ಚಿಂದೆ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ನಿಗಮ ನಿಯಮಿತದ ನಿಕಟಪೂರ್ವ ನಿರ್ದೇಶಕರಾದ ಸುರೇಶ ಎಸ್. ತಂಗಾ, ಶಾಲೆಯ ಪ್ರಾಂಶುಪಾಲರಾದ ರಾಜಶೇಖರ ರೆಡ್ಡಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಎಸ್.ಆರ್.ಎನ್. ಮೆಹತಾ ಸಂಸ್ಥೆಯ ಮ್ಯಾನೇಜಿಂಗ ಡೈರೆಕ್ಟರ್ ಪ್ರೀತಮ್ ಮೆಹತಾ ಸ್ವಾಗತಿಸಿದರು, ನಾಗಲಿಂಗಯ್ಯ ಮಠಪತಿ ನಿರೂಪಿಸಿದರು, ರಾಜೇಂದ್ರ ಕುಣಚಗಿ ವಂದಿಸಿದರು.
ಪೂಜ್ಯ ಶ್ರೀ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಗೆ ಸಮಸ್ತ ಜನತೆಯ ವತಿಯಿಂದ ಸಮಾರಂಭದಲ್ಲಿ ಗುರುವಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಪ್ರಕಾಶ ಜೈನ, ಶ್ರೀಕಾಂತ ಕಟಂಬಲೆ, ಧನ್ಯಕುಮಾರ ವರ್ಧಮಾನೆ, ಬ್ರಹ್ಮ ಜಗಶೆಟ್ಟಿ, ವಿನೋದ ಪಾಟೀಲ, ಧರಣೇಂದ್ರ ಸಂಗಮಿ, ಶ್ರೇಣಿಕ ಪಾಟೀಲ, ಚೇತನ ಪಂಡಿತ, ರಮೇಶ ಬೆಳಕೇರಿ ಸೇರಿದಂತೆ ಭಕ್ತ ಬಳಗದವರು, ಜೈನ ಸಮಾಜದವರು, ಶಾಲೆಯ ಆಡಳಿತ ಮಂಡಳಿ ಸದಸ್ಯರುಗಳು ಉಪಸ್ಥಿತರಿದ್ದರು.
ಕಲಬುರಗಿ: ಈ ಭಾಗದ ನೇಕಾರ ಸಮುದಾಯಕ್ಕೆ ಉದ್ಯೋಗದಲ್ಲಿ ಮೀಸಲಾತಿ ಪಡೆದು ಕೊಳ್ಳಲು ದಿ. ಎಲ್.ಜಿ.ಹಾವನೂರ ರ ತತ್ವದ ಮೇಲೆ ಹೋರಾಟ…
ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ರಾಜ್ಯ ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 51ನೇ ವಾರ್ಷಿಕ ಮಹಾಸಭೆಯನ್ನು…
ಕಲಬುರಗಿ: ಅಖಿಲ ಕರ್ನಾಟಕ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ 15ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ಶಿಪ್ ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ…
ಕಲಬುರಗಿ: ಕಸಾಪದಿಂದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಕಲಬುರಗಿ: ನಾಡಿನ ನೆಲ ಜಲ ಪ್ರೀತಿಸುವ ಸಂಸ್ಕøತಿ ನಮ್ಮ ಮಾತೃ ಭಾಷೆಯಲ್ಲಿದೆ…
ಕಲಬುರಗಿ: ಇಂದಿನ ಮಕ್ಕಳು ಬಹಳ ಕಷ್ಟಪಟ್ಟು ಇಂತಹ ಸ್ಪರ್ಧಾ ಯುಗದಲ್ಲಿ ಶ್ರಮ ಪಟ್ಟು ಓದಿದರೆ ಮುಂದಿನ ನಿಮ್ಮ ಜೀವನಕ್ಕೆ ದಾರಿದೀಪವಾಗುವುದೆಂದು…
ಯಾದಗಿರಿ:ಪ್ರಜಾಪ್ರಭುತ್ವ ದಿನ ಆಚರಣೆ ಕಾರ್ಯಕ್ರಮ ವಡಗೇರ ತಾಲೂಕಿನ ಅಜೀಮ್ ಪ್ರೇಮ್ ಜಿ ಶಾಲೆಯ ಹತ್ತಿರ ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.…