ಶರಣಬಸವೇಶ್ವರ ಸಂಸ್ಥಾನದಲ್ಲಿ ಶ್ರಾವಣ ಮಾಸ ನಿಮಿತ್ತ ಮಂಗಲೋತ್ಸವ

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠದಲ್ಲಿ ಕಳೆದ ಎರಡು ಶತಮಾನಗಳಿಂದ ನಿರಂತರವಾಗಿ ದಾಸೋಹ, ಗುರುಲಿಂಗ ಜಂಗಮ ಅರ್ಚನೆ, ಶಿವಾನುಭವ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಇದು ಶರಣಬಸವೇಶ್ವರ ಸಂಸ್ಥಾನದಲ್ಲಿ ಹಿರಿಯ ಪೀಠಾಧಿಪತಿಗಳು ಹಾಕಿದ ಪರಂಪರೆಯಂತೆ ಎಲ್ಲಾ ಪೀಠಾಧಿಪತಿಗಳು ಮುಂದುವರೆಸಿ ಆಚರಿಸಿಕೊಂಡು ಬಂದಿದ್ದಾರೆ.

ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿರುವಂತೆ “ಹೊತ್ತಾರೆ ಎದ್ದು ಅಗ್ಗವಣೆ ಪತ್ರಿಯತಂದು ಪೂಜಿಸುಲಿಂಗ” ಎಂದು ಮಹಾದಾಸೋಹ ಪೀಠದಲ್ಲಿ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರ ದಿವ್ಯಸಾನಿಧ್ಯದಲ್ಲಿ ತ್ರಿಕಾಲ ಪೂಜೆ, ಗುರುಲಿಂಗ ಜಂಗಮ ಪೂಜೆ, ಅನ್ನ ದಾಸೋಹ, ಪ್ರಸಾದ ಅರ್ಪಣೆ ಹಾಗೂ ಶಿವಾನುಭವ ಕಾರ್ಯಕ್ರಮಗಳು ಪವಿತ್ರ ಶ್ರಾವಣ ಮಾಸದಾದ್ಯಂತ ನಿತ್ಯವೂ ಜರುಗಿದವು.

ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ತಮ್ಮ ಕಿರಿ ವಯಸ್ಸಿನಲ್ಲಿಯೇ ನಡೆ, ನುಡಿ, ಭಕ್ತಿ, ಪೂಜೆ, ಕಾಯಕ, ದಾಸೋಹ ಮೈಗೂಡಿಸಿಕೊಂಡಿದ್ದಾರೆ. ಚಿರಂಜೀವಿಯವರ ನೇತೃತ್ವದಲ್ಲಿ ಶ್ರಾವಣದ ಪ್ರತಿನಿತ್ಯವೂ ಪಾದಪೂಜೆ, ಅನ್ನ ದಾಸೋಹ ನಿಯಮದಂತೆ ನಡೆದುಕೊಂಡು ಬಂದಿತು.

ಈ ಸಂಧರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ವಿಭೂತಿ, ರುದ್ರಾಕ್ಷಿ ಹಾಗೂ ಮಂತ್ರಗಳ ಮಹಿಮೆಯನ್ನು ಕುರಿತು ತಮ್ಮ ಭಕ್ತಿಯುತವಾಗಿ ಅರ್ಥಪೂರ್ಣವಾದ ಉಪನ್ಯಾಸ ನೀಡಿದರು.

ಇದಲ್ಲದೆ “ಕೋಟಿಗೊಬ್ಬ ಶರಣ, ಪರಶಿವನ ಹರಣ ಕಲಬುರಗಿಯ ಶ್ರೀ ಶರಣ ಬಸವನ ಮಾಡೋ ನೀ ಸ್ಮರಣ” ಎಂಬ ಭಕ್ತಿ ವಚನವನ್ನು ಅತಿ ಶ್ರದ್ಧೆಯಿಂದ ಹಾಡಿದ್ದು ನೆರೆದಂತಹ ಭಕ್ತಸಮೂಹಕ್ಕೆ ಹುಬ್ಬೇರಿಸುವಂತೆ ಮಾಡಿತು. ಎಲ್ಲರಿಗೂ ಭಕ್ತಿಲೋಕದ ದರುಶನಮಾಡಿಸಿ, ಶರಣಬಸವೇಶ್ವರರ ಸ್ಮರಣೆಯಲ್ಲಿ ಮುಳುಗುವಂತೆ ಮಾಡಿದ್ದು ವಿಶೇಷ.

ತದನಂತರ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರ ಜೊತೆಗೂಡಿ ಶ್ರೀ ಶರಣಬಸವೇಶ್ವರರ ದೇವಸ್ಥಾನದಲ್ಲಿ ಪೂಜಾ ಪುನಸ್ಕಾರಗಳನ್ನು ಸಲ್ಲಿಸಿ, ಪಲ್ಲಕ್ಕಿ ಪೂಜೆ ಮಾಡಿ ಶ್ರಾವಣ ಮಾಸದ ಶಿವಾನುಭವ ಕಾರ್ಯಕ್ರಮಗಳಿಗೆ ಮಂಗಲೋೀತ್ಸವ ನೆರವೇರಿಸಿದರು. ಶರಣಬಸವೇಶ್ವರ ಸಂಸ್ಥಾನದಲ್ಲಿ ಜರುಗಿದ ಶ್ರಾವಣ ಮಾಸದ ಮಂಗಲೋತ್ಸವ.

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠದಲ್ಲಿ ಕಳೆದ ಎರಡು ಶತಮಾನಗಳಿಂದ ನಿರಂತರವಾಗಿ ದಾಸೋಹ, ಗುರುಲಿಂಗ ಜಂಗಮ ಅರ್ಚನೆ, ಶಿವಾನುಭವ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಇದು ಶರಣಬಸವೇಶ್ವರ ಸಂಸ್ಥಾನದಲ್ಲಿ ಹಿರಿಯ ಪೀಠಾಧಿಪತಿಗಳು ಹಾಕಿದ ಪರಂಪರೆಯಂತೆ ಎಲ್ಲಾ ಪೀಠಾಧಿಪತಿಗಳು ಮುಂದುವರೆಸಿ ಆಚರಿಸಿಕೊಂಡು ಬಂದಿದ್ದಾರೆ.

ಬಸವಣ್ಣನವರು ತಮ್ಮ ವಚನದಲ್ಲಿ ಹೇಳಿರುವಂತೆ “ಹೊತ್ತಾರೆ ಎದ್ದು ಅಗ್ಗವಣೆ ಪತ್ರಿಯತಂದು ಪೂಜಿಸುಲಿಂಗ” ಎಂದು ಮಹಾದಾಸೋಹ ಪೀಠದಲ್ಲಿ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ, ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರ ದಿವ್ಯಸಾನಿಧ್ಯದಲ್ಲಿ ತ್ರಿಕಾಲ ಪೂಜೆ, ಗುರುಲಿಂಗ ಜಂಗಮ ಪೂಜೆ, ಅನ್ನ ದಾಸೋಹ, ಪ್ರಸಾದ ಅರ್ಪಣೆ ಹಾಗೂ ಶಿವಾನುಭವ ಕಾರ್ಯಕ್ರಮಗಳು ಪವಿತ್ರ ಶ್ರಾವಣ ಮಾಸದಾದ್ಯಂತ ನಿತ್ಯವೂ ಜರುಗಿದವು.

ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ತಮ್ಮ ಕಿರಿ ವಯಸ್ಸಿನಲ್ಲಿಯೇ ನಡೆ, ನುಡಿ, ಭಕ್ತಿ, ಪೂಜೆ, ಕಾಯಕ, ದಾಸೋಹ ಮೈಗೂಡಿಸಿಕೊಂಡಿದ್ದಾರೆ. ಚಿರಂಜೀವಿಯವರ ನೇತೃತ್ವದಲ್ಲಿ ಶ್ರಾವಣದ ಪ್ರತಿನಿತ್ಯವೂ ಪಾದಪೂಜೆ, ಅನ್ನ ದಾಸೋಹ ನಿಯಮದಂತೆ ನಡೆದುಕೊಂಡು ಬಂದಿತು.

ಈ ಸಂಧರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ವಿಭೂತಿ, ರುದ್ರಾಕ್ಷಿ ಹಾಗೂ ಮಂತ್ರಗಳ ಮಹಿಮೆಯನ್ನು ಕುರಿತು ತಮ್ಮ ಭಕ್ತಿಯುತವಾಗಿ ಅರ್ಥಪೂರ್ಣವಾದ ಉಪನ್ಯಾಸ ನೀಡಿದರು. ಇದಲ್ಲದೆ “ಕೋಟಿಗೊಬ್ಬ ಶರಣ, ಪರಶಿವನ ಹರಣ ಕಲಬುರಗಿಯ ಶ್ರೀ ಶರಣ ಬಸವನ ಮಾಡೋ ನೀ ಸ್ಮರಣ” ಎಂಬ ಭಕ್ತಿ ವಚನವನ್ನು ಅತಿ ಶ್ರದ್ಧೆಯಿಂದ ಹಾಡಿದ್ದು ನೆರೆದಂತಹ ಭಕ್ತಸಮೂಹಕ್ಕೆ ಹುಬ್ಬೇರಿಸುವಂತೆ ಮಾಡಿತು. ಎಲ್ಲರಿಗೂ ಭಕ್ತಿಲೋಕದ ದರುಶನಮಾಡಿಸಿ, ಶರಣಬಸವೇಶ್ವರರ ಸ್ಮರಣೆಯಲ್ಲಿ ಮುಳುಗುವಂತೆ ಮಾಡಿದ್ದು ವಿಶೇಷ.

ತದನಂತರ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾಜಿಯವರು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರ ಜೊತೆಗೂಡಿ ಶ್ರೀ ಶರಣಬಸವೇಶ್ವರರ ದೇವಸ್ಥಾನದಲ್ಲಿ ಪೂಜಾ ಪುನಸ್ಕಾರಗಳನ್ನು ಸಲ್ಲಿಸಿ, ಪಲ್ಲಕ್ಕಿ ಪೂಜೆ ಮಾಡಿ ಶ್ರಾವಣ ಮಾಸದ ಶಿವಾನುಭವ ಕಾರ್ಯಕ್ರಮಗಳಿಗೆ ಮಂಗಲೋೀತ್ಸವ ನೆರವೇರಿಸಿದರು.

emedialine

Recent Posts

ಅತಿವೃಷ್ಟಿ ಬೆಳೆ ಹಾನಿ ಪರಿಹಾರ ಕೊಡಿ: ಮುಖ್ಯಮಂತ್ರಿಗಳಿಗೆ ಪ್ರಾಂತ ರೈತ ಸಂಘದ ಆಗ್ರಹ

ಕಲಬುರಗಿ: ಅತಿವೃಷ್ಟಿ ಮಳೆಯಿಂದ ಹಾನಿಯಾದ ಉದ್ದು, ಹೆಸರು, ತೊಗರಿ ಬೆಳೆ ನಷ್ಟವಾಗಿದ್ದು, ಉತ್ಪಾದನೆ ಆಧಾರದಲ್ಲಿ ಪರಿಹಾರ ಕೊಡುವಂತೆ ಹಾಗೂ ಕಬ್ಬಿನ ಬಾಕಿ…

3 hours ago

ಯುವಜನ ಒಕ್ಕೂಟದಿಂದ 76 ನೇ ಕಲ್ಯಾಣ ಕರ್ನಾಟಕ ಸ್ವಾತಂತ್ರೋತ್ಸವ ಆಚರಣೆ

ಕಲಬುರಗಿ: ಸರದಾರ ವಲ್ಲಭಭಾಯಿ ಪಟೇಲ ರ ಮೂರ್ತಿಗೆ ಮಾಲಾರ್ಪಣೆ ಮತ್ತು ರಾಷ್ಟ್ರೀಯ ಗೀತೆ ವಾಚಿಸುವ ಮೂಲಕ ನೈಜ ಕ. ಕ.…

3 hours ago

ಸೆ.19 ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ಚಿತ್ತಾಪುರ: ಪಟ್ಟಣದ ಕ್ರೀಡಾಂಗಣದಲ್ಲಿ 2024-25 ನೇ ಸಾಲಿನ ಚಿತ್ತಾಪುರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ.19 ರಂದು ಆಯೋಜಿಸಲಾಗಿದೆ ಎಂದು…

3 hours ago

ಕೆಎಎಸ್‌ಎಸ್‌ಐಎಗೆ ನಿಜಾಮೋದ್ದಿನ್ ಚಿಸ್ತಿ ನಾಮನಿರ್ದೇಶನ

ಚಿತ್ತಾಪುರ: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘಕ್ಕೆ 2024-25 ನೇ ಸಾಲಿಗಾಗಿ ಆಡಳಿತ ಮಂಡಳಿಗೆ ವಿಶೇಷ ಆಹ್ವಾನಿತರಾಗಿ ಸೈಯದ್ ನಿಜಾಮೋದ್ದಿನ್…

3 hours ago

ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ಸಮಾಧಾನವಿದೆ, ತೃಪ್ತಿಯಿಲ್ಲ: ಬಿಆರ್ ಪಾಟೀಲ

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಿದ ಸಮಾಧಾನ ಇದೆ. ಆದರೆ, ಅದರಲ್ಲಿ ತೆಗೆದುಕೊಂಡ ನಿರ್ಣಯಗಳು ತೃಪ್ತಿಯಿಲ್ಲ…

4 hours ago

ವಕ್ಫ್ ಬೋರ್ಡ್ ಆಸ್ತಿ ಒತ್ತುವರಿ ನಿಯಂತ್ರಣಕ್ಕೆ ಕಂಪೌಂಡ್ ನಿರ್ಮಾಣ; ಬಿ.ಜೆಡ್.ಜಮೀರ್ ಅಹ್ಮದ್ ಖಾನ್

ಕಲಬುರಗಿಯಲ್ಲಿ ವಕ್ಫ್ ಅದಾಲತ್ ಕಲಬುರಗಿ; ರಾಜ್ಯದಲ್ಲಿರುವ ವಕ್ಫ್ ಆಸ್ತಿ ಸಂರಕ್ಷಣೆಗೆ ಮಂಡಳಿ ಮುಂದಾಗಿದ್ದು, ಪ್ರತಿ ಆಸ್ತಿ ಸುತ್ತ ರಾಜ್ಯ ವಕ್ಫ್…

4 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420