ಪ್ರವಾದಿಯ ಅನುಯಾಯಿಗಳು ಎಲ್ಲಿ?

(1)
ಪ್ರವಾದಿಯ ಅನುಯಾಯಿಗಳು ಎಲ್ಲಿ?

ನಿನ್ನ ಒಡ ಹುಟ್ಟಿದವರ ವಿರುದ್ಧವಾದರೂ ಸರಿಯೇ ಸತ್ಯವನ್ನೆ ನುಡಿ ಎಂದ ನನ್ನ ಪ್ರವಾದಿಯ
ಅನುಯಾಯಿಗಳು ಎಲ್ಲಿ?

ನೆರೆಹೊರೆಯವನು ಉಪವಾಸ
ಇರುವಾಗ ಹೊಟ್ಟೆ ತುಂಬ ಉಣ್ಣುವವನು ನನ್ನವನಲ್ಲ ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ಕಾಮಿ೯ಕನ ಬೆವರು ಆರುವ
ಮುನ್ನ ವೇತನ ಪಾವತಿಸಲು ಹೇಳಿದ
ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ ?

ಅನ್ಯಾಯವಾಗಿ ಒಂದು ಜೀವ ಹರಣ
ಮಾಡಿದರೆ ಇಡೀ ಮನುಕುಲ
ಹತ್ಯೆ ಮಾಡಿದಂತೆ ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ಬಡವರನ್ನು ಬಿಟ್ಟು ಶ್ರೀಮಂತರನ್ನು ಆಮಂತ್ರಿಸುವ ವಿವಾಹ ಔತಣ ಅತ್ಯಂತ ಕೆಟ್ಟದ್ದು ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ಯಾರ ಹೃದಯದಲ್ಲಿ ಅತ್ಯಲ್ಪವಾದರೂ ದುರಹಂಕಾರವಿದೆಯೋ ಅವನು ಸ್ವಗ೯ ಪ್ರವೇಶಿಸಲಾರ ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ನೆರೆಹೊರೆಯವರೂಂದಿಗೆ ಅತ್ಯುತ್ತಮವಾಗಿ ನಡೆದುಕೊಳ್ಳುವನೇ ನೈಜ ಮುಸ್ಲಿಮನು ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ಹುಲ್ಲು ಸೌದೆ ಸುಡುವಂತೆ ನಿಮ್ಮ ಒಳಿತನ್ನು ಭಸ್ಮ ಮಾಡುವ ಅಸೂಯೆ ಎಂಬ ಬೆಂಕಿಯ ಕುರಿತು ಎಚ್ಚರಿಸಿದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ನನ್ನನ್ನು ಬಡ ಶೋಷಿತರ ಮತ್ತು ರೋಗಿಗಳ ಮಧ್ಯೆ ಹುಡುಕಲು ಹೇಳಿದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ತಂದೆ ತಾಯಿಯ ಸೇವೆಯ ಮೂಲಕ ಸ್ವಗ೯ ಪ್ರಾಪ್ತಿಯ ಅವಕಾಶ ವಂಚಿತನೇ ದರಿದ್ರನು ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ದಾನ ಧರ್ಮದಿಂದ ಸಂಪತ್ತು ಕ್ಷಿಣಿಸದು, ಶ್ರಮವಿಲ್ಲದೆ ವೃದ್ಧಿಯಾಗುವ ಬಡ್ಡಿ ಹರಾಮ್ ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ?

ಆತನೆ ಉಣಿಸಿದನು ಕುಡಿಸಿದನು ಮತ್ತು ಸತ್ಯ ವಿಶ್ವಾಸಿಯನ್ನಾಗಿಸಿದನು ಎಂದ ನನ್ನ ಪ್ರವಾದಿಯ ಅನುಯಾಯಿಗಳು ಎಲ್ಲಿ ಎಲ್ಲಿ ಎಲ್ಲಿ?

ರಚನೆ: ಹಟ್ಟಿ ನಜೀರ್ ಮಿಯಾನ್
ಕಲಬುರಗಿ.ಮೊ: 9880792177

emedialine

View Comments

  • ಹಟ್ಟಿ ನಜೀರ್ ಮಿಯಾನ್ ಅವರ "ಅನುಯಾಯಿಗಳು ಎಲ್ಲಿ?" ಕವಿತೆ ತುಂಬಾ ಹಿಡಿಸಿತು. ಹೇಳಬೇಕಾದ್ದನ್ನು ಅತ್ಯಂತ ಸ್ಪಷ್ಟವಾಗಿ ಹಾಗೂ ಮನವರಿಕೆ ಆಗುವಂತೆ ಬರೆದಿದ್ದಾರೆ. ಅತ್ಯಂತ ಪ್ರಮುಖವಾಗಿ, ಕಾರ್ಮಿಕನ ಬೆವರು ಒಣಗುವುದಕ್ಕೂ ಮೊದಲೇ ವೇತನ ಪಾವತಿಸಬೇಕೆಂಬ ಕಿವಿಮಾತು ಇಸ್ಲಾಂ ಧರ್ಮವು ಮಾನವೀಯ ಮೌಲ್ಯಗಳ ಆರಾಧನೆಗಿಂತಲೂ ಆಚರಣೆಗೆ ಹೆಚ್ಚು ಒತ್ತು ನೀಡಿದೆ ಎಂಬುದು ಮನದಟ್ಟಾಗುವಂತಿದೆ.

Recent Posts

ಅತಿವೃಷ್ಟಿ ಬೆಳೆ ಹಾನಿ ಪರಿಹಾರ ಕೊಡಿ: ಮುಖ್ಯಮಂತ್ರಿಗಳಿಗೆ ಪ್ರಾಂತ ರೈತ ಸಂಘದ ಆಗ್ರಹ

ಕಲಬುರಗಿ: ಅತಿವೃಷ್ಟಿ ಮಳೆಯಿಂದ ಹಾನಿಯಾದ ಉದ್ದು, ಹೆಸರು, ತೊಗರಿ ಬೆಳೆ ನಷ್ಟವಾಗಿದ್ದು, ಉತ್ಪಾದನೆ ಆಧಾರದಲ್ಲಿ ಪರಿಹಾರ ಕೊಡುವಂತೆ ಹಾಗೂ ಕಬ್ಬಿನ ಬಾಕಿ…

11 hours ago

ಯುವಜನ ಒಕ್ಕೂಟದಿಂದ 76 ನೇ ಕಲ್ಯಾಣ ಕರ್ನಾಟಕ ಸ್ವಾತಂತ್ರೋತ್ಸವ ಆಚರಣೆ

ಕಲಬುರಗಿ: ಸರದಾರ ವಲ್ಲಭಭಾಯಿ ಪಟೇಲ ರ ಮೂರ್ತಿಗೆ ಮಾಲಾರ್ಪಣೆ ಮತ್ತು ರಾಷ್ಟ್ರೀಯ ಗೀತೆ ವಾಚಿಸುವ ಮೂಲಕ ನೈಜ ಕ. ಕ.…

11 hours ago

ಸೆ.19 ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ

ಚಿತ್ತಾಪುರ: ಪಟ್ಟಣದ ಕ್ರೀಡಾಂಗಣದಲ್ಲಿ 2024-25 ನೇ ಸಾಲಿನ ಚಿತ್ತಾಪುರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ.19 ರಂದು ಆಯೋಜಿಸಲಾಗಿದೆ ಎಂದು…

12 hours ago

ಕೆಎಎಸ್‌ಎಸ್‌ಐಎಗೆ ನಿಜಾಮೋದ್ದಿನ್ ಚಿಸ್ತಿ ನಾಮನಿರ್ದೇಶನ

ಚಿತ್ತಾಪುರ: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘಕ್ಕೆ 2024-25 ನೇ ಸಾಲಿಗಾಗಿ ಆಡಳಿತ ಮಂಡಳಿಗೆ ವಿಶೇಷ ಆಹ್ವಾನಿತರಾಗಿ ಸೈಯದ್ ನಿಜಾಮೋದ್ದಿನ್…

12 hours ago

ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ಸಮಾಧಾನವಿದೆ, ತೃಪ್ತಿಯಿಲ್ಲ: ಬಿಆರ್ ಪಾಟೀಲ

ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಿದ ಸಮಾಧಾನ ಇದೆ. ಆದರೆ, ಅದರಲ್ಲಿ ತೆಗೆದುಕೊಂಡ ನಿರ್ಣಯಗಳು ತೃಪ್ತಿಯಿಲ್ಲ…

13 hours ago

ವಕ್ಫ್ ಬೋರ್ಡ್ ಆಸ್ತಿ ಒತ್ತುವರಿ ನಿಯಂತ್ರಣಕ್ಕೆ ಕಂಪೌಂಡ್ ನಿರ್ಮಾಣ; ಬಿ.ಜೆಡ್.ಜಮೀರ್ ಅಹ್ಮದ್ ಖಾನ್

ಕಲಬುರಗಿಯಲ್ಲಿ ವಕ್ಫ್ ಅದಾಲತ್ ಕಲಬುರಗಿ; ರಾಜ್ಯದಲ್ಲಿರುವ ವಕ್ಫ್ ಆಸ್ತಿ ಸಂರಕ್ಷಣೆಗೆ ಮಂಡಳಿ ಮುಂದಾಗಿದ್ದು, ಪ್ರತಿ ಆಸ್ತಿ ಸುತ್ತ ರಾಜ್ಯ ವಕ್ಫ್…

13 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420