ಕಲಬುರಗಿ: ಇಲ್ಲಿನ ಸಾರ್ವಜನಿಕ ಉದ್ಯಾನವನದ ಎದುರು ಇರುವ ಟಾಟಾ ತನಿಷ್ಕ್ ಫ್ರಾಂಚೈಸಿ ಮಾಲೀಕರಾದ ಸಚಿನ್ ಮೆಹತಾ, ಆನಂದ ಶಹಾ ಒಡೆತನದ ಆಭರಣ ಶೋರುಂನಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ನವ ರಾಣಿ ಹೊಸ ವಿನ್ಯಾಸದ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.
ಬಾಹುಬಲಿ ಚಲನಚಿತ್ರ, ರಾಜ ಮನೆತನದ ಮಹಾರಾಣಿಯರ ಸಂಪ್ರಾದಾಯಿಕ ಶೈಲಿಯ ನವವಿನ್ಯಾಸ ಮಾದರಿಯ ನವರಾಣಿ ಅತ್ಯಾಕರ್ಷಕ ಚಿನ್ನಾಭರಣ ನೋಡುಗರ ಚಿತ್ತಾಕರ್ಷಿಸುವಂತಿವೆ. ವಲಯ ಶಾಖೆ ವ್ಯವಸ್ಥಾಪಕ ಅರ್ಜುನ ಶಿರೋಡಕರ್, ಶಾಖಾ ವ್ಯವಸ್ಥಾಪಕ ಸೈಯದ್ ಇಮ್ರಾನ್ ನೇತೃತ್ವದಲ್ಲಿ ಹಿಂದಿನ ಗತವೈಭವದ ಮರಕಳುಹಿಸುವ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ಪರಿಚಯಿಸುವ, ಪ್ರೇರಣಾತ್ಮಕ ಚಿನ್ನಾಭರಣಗಳನ್ನು ತಯಾರಿಸಲಾಗಿದೆ ಎಂದು ನೆರೆದ ಪ್ರೇಕ್ಷಕರಿಗೆ ಚಿನ್ನಾಭರಣಗಳ ವೈಶಿಷ್ಟತೆ ಬಗ್ಗೆ ತಿಳಿಸಿದರು.
ಅಲ್ಲದೆ ದಸರಾ ಹಬ್ಬದ ವರೆಗೆ ಚಿನ್ನಾಭರಣ ಮತ್ತು ಡೈಮಂಡ್ ಆಭರಣ ತಯಾರಿಕೆ ಮೇಲೆ ಶೇ.20ರವರೆಗೆ ರಿಯಾಯತಿ ದರ ಇರಲಿದೆ. ಯಾವುದೇ ಆಭರಣದಿಂದ ಖರೀದಿಸಿದ ಹಳೆಯ ಚಿನ್ನದ ಮೇಲೆ ವಿನಿಮಯ ಮೌಲ್ಯ ಶೇ. 100 ರಷ್ಟು ಹೆಚ್ಚುವರಿಯಾಗಿ ದೊರೆಯಲಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸ್ಟೋರ್ ಮ್ಯಾನೇಜರ್ ಸೈಯದ್ ಇಮ್ರಾನ್ ಮನವಿ ಮಾಡಿದರು.
ಗ್ರಾಹಕಿಯರಾದ ಫರೀನಾ, ವಿಜಯಲಕ್ಷ್ಮೀ, ಶ್ರೀದೇವಿ ಟೆಂಗಳಿ, ಗ್ರಾಹಕರಾದ ಚೇತನ, ಅಮರೇಶ, ಪ್ರವೀಣ, ಶಾಹೀನ್ ಮೊದಲಾದವರು ಈ ಒಂದು ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಇದೇ ವೇಳೆಗೆ ಗ್ರಾಹಕರಿಂದ ಜ್ಯುವೆಲ್ಲರಿ ಶೋ ನಡೆಯಿತು. ಸಿಬ್ಬಂದಿಯವರಾದ ಯುವರಾಜ್, ಸ್ವಾಮಿ, ಸಿದ್ದು, ಅಜರ್, ನಶ್ರೀನ್ ಮತ್ತಿತರರು ಭಾಗವಹಿಸಿದ್ದರು.
ಕಲಬುರಗಿ: ಜೀವನದಲ್ಲಿ ಎದುರಾಗುವ ಅರಿಷಡ್ ವೈರಿಗಳನ್ನು ಗೆದ್ದು ಉತ್ತಮ ಬದುಕು ಕಟ್ಟಿದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಲೋಕಸಭಾ…
ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗೂ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ವತಿಯಿಂದ 38ನೇ ನಾಡಹಬ್ಬ ಉತ್ಸವಾಚರಣೆ ಅಂಗವಾಗಿ ನಗರದ…
ಸುರಪುರ: ನಗರದ ಶ್ರೀ. ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಸಮೂಹ ಸಂಸ್ಥೆಗಳ ಅಡಿಯಲ್ಲಿ ನಡೆದ…
ಸುರಪುರ: ಕೊಡೇಕಲ್ ಗ್ರಾಮದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇದೇ ಅಕ್ಟೋಬರ್ 8 ರಂದು ಸುರಪುರ ಬಂದ್…
ಕಲಬುರಗಿ: ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಎಸ್ ಕಿಳ್ಳಿ ರವರ ಜನ್ಮ ದಿನದ ಆಂಗವಾಗಿ ಶ್ರೀನಿವಾಸ ಸರಡಗಿ…
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯ ಕಲಬುರ್ಗಿ ಮತ್ತು ಸರಕಾರಿ ಮಹಾವಿದ್ಯಾಲಯ ಸ್ವಾಯತ್ತ ಕಲಬುರ್ಗಿಯ ಎನ್.ಎಸ್. ಎಸ್ ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ…