ಜಾತಿ, ಧರ್ಮ, ಭಾಷೆ, ಎಲ್ಲವನ್ನು ಮೀರಿನಿಂತ ಭಕ್ತಿಯ ದೇವರ ಉಪಾಸನೆಯೇ ಭಜನೆ

ಕಲಬುರಗಿ: ಎಷ್ಟೋ ಜನರ ಜೀವನ ಭಜನೆಯಿಂದ ಬದಲಾಗಿಗೆ ಕಾಯಿಲೆ ಬಿದ್ದು ಹಾಸಿಗೆ ಹಿಡಿದ ವ್ಯಕ್ತಿ ಭಜನೆ ಮಾಡುವುದರಿಂದ ಎದ್ದು ಗುಣಮುಖರಾದ ಚರಿತ್ರೆ ಭಜನೆಗಿದೆ ಎನ್ನುತ್ತ ಭಜನೆಯ ಮೂಲಕ ದೇವರಿಗೆ ಆಪ್ತರಾದವರು ಒಂದಿಲ್ಲ ಒಂದು ದಿನ ಬದುಕಲ್ಲಿ ಉನ್ನತ ಮಟ್ಟಕ್ಕೆ ಬೆಳೆಯುತ್ತಾರೆ ಅನ್ನುವುದು ಹಿರಿಯ ಭಜನೆ ಸಂಗೀತಗಾರರ ಬಲವಾದ ನಂಬಿಕೆ ಹಾಗೂ ವಿಶ್ವಾಸವು ಇದೆ ಎಂದು ಮರತೂರಿನ ಹುಣಚಿರಾಯ ಮುತ್ಯ ನುಡಿದರು.

ಜಿ.ಡಿ.ಎ. ಲೇಔಟನ ಶಿವಶರಣನಂದ ಆಶ್ರಮ  ಕಾಲೋನಿಯಲ್ಲಿ ಪಿತೃಪಕ್ಷದ ದಿII ಸಿದ್ದಪ್ಪ ಬುಳ್ಳಾ ಅವರ ಸ್ಮಣಾರ್ಥ ನಿಮಿತ್ಯ ಹಮ್ಮಿಕೊಂಡ “ವಚನಗಳಿಂದ ಭಜನೆ” ವಿಶೇಷ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಿವರಾಜ ಅಂಡಗಿ ಅವರು ಮಾತನಾಡುತ್ತ ಇವನಾರವ ಇವನಾರವ ಇವನಾರವನೆಂದಸದೆರಯ್ಯ, ನೆಲನೋಂದೆ ಹೊಲಗೇರಿ ಶಿವಾಲಯಕ್ಕೆ, ಕಲಬೇಡ ಕೊಲಬೇಡ ಹುಸಿಯ ನುಡಿಯಲುಬೇಡ ಹೀಗೆ ಅನೇಕ ಶರಣ ಶರಣಿಯರ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ ವೈಚಾರಿಕ ಚಿಂತನೆ ನ್ಯಾಯದ ಪರಿಕಲ್ಪನೆಗಳಿವೆ ಅವುಗಳನ್ನು ಸರಳ ಕನ್ನಡದ ಭಾಷೆಗಳಲ್ಲಿ ರಚನೆಯಾದ ವಚನಗಳನ್ನೆ ಭಜನೆಗಳಲ್ಲಿ ಹಾಡುವ ಮೂಲಕ ಜನಸಾಮಾನ್ಯರಿಗೆ ದೃದಯದಿಂದ ದೃದಯಕ್ಕೆ ವಚನ ಸಾಹಿತ್ಯ ಬಿತ್ತರಿಸಿ ಅರ್ಥಿಸಿಕೊಂಡು ಜೀವನದಲ್ಲಿ ಅನುಕರಣೆ ಮಾಡುವ ಉದ್ದೇಶದಿಂದಲೆ ವಚನೋತ್ಸವ ಪ್ರತಿಷ್ಠಾನ ಯುವಘಟಕದ ವತಿಯಿಂದ “ವಚನಗಳಿಂದ ಭಜನೆ” ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾತನಾಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅಥೀತಿಗಳಾಗಿ ಆಗಮಿಸಿದ ನ್ಯಾಯವಾದಿ ಶಿವಲಿಂಗಪ್ಪ ಅಸ್ಟಗಿ ಅವರು ಮಾತನಾಡುತ್ತ ನಾನು ಬಹಾಳಷ್ಟು ಭಜನೆ ಕಾರ್ಯಕ್ರಮ ಭಾಗವಹಿಸಿದ್ದೇನೆ ಭಕ್ತಿ ಮತ್ತು ಆಧ್ಯಾತ್ಮಿಕ ಬಿತ್ತರಿಸುವ ಪದಗಳನ್ನೆ ಕೇಳಿದ್ದೇವೆ ಇಲ್ಲಿ ವಚನಗಳಿಂದ ಭಜನೆ ವಿಶೇಷ ಕಾರ್ಯಕ್ರಮ ನಾನು ಮೊಟ್ಟ ಮೊದಲ ಬಾರಿಗೆ ನೊಡುತಿದ್ದೇನೆ ಒತ್ತಡದ ಬದುಕಿನಲ್ಲಿ ಜೀವಿಸಿರುತ್ತಿರುವ ಜನಸಾಮಾನ್ಯರಿಗೆ ವಚನ ಸಾಹಿತ್ಯದಲ್ಲಿ ಅಡಗಿದ ಮಹತ್ವದ ಸಂದೇಶ ನೀಡುವ ಒಳ್ಳೆಯ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ಕವಿ ಎಮ್.ಎನ್.ಸುಗಂಧಿ ಪ್ರಾರ್ಥಿಸಿ ಓಂಕಾರ ಪಠಿಸಿ ಅದರ ವೈಜ್ಞಾನಿಕವಾಗಿ ಮತ್ತು ದೈಹಿಕವಾಗಿ ಆಗುವ ಅನುಕೂಲತೆಗಳ ಬಗ್ಗೆ ವಿವರಿಸಿದರು ವಿನೋದ ಕುಮಾರ ಜೆನೆವೇರಿ ಸ್ವಾಗತಿಸಿದರು ಸಾಯಿಕುಮಾರ ರುಸ್ತಂಪೂರ ವಂದಿಸಿದರು.

ಭಜನೆ ಸಂಗೀತ ಪೇಟಿ ಮಾಸ್ಟರ್ ತಿಪ್ಪಣ್ಣ ಬಟಗೇರ, ತಬಲ ಕಲಾವಿದರಾದ ಮಲ್ಲಿಕಾರ್ಜುನ ವಿಶ್ವಕರ್ಮ ಹುಣಚಿರಾಯ ಮುತ್ಯಾ ಹಾಗೂ ಶಿವಶರಣಪ್ಪ ಅಗಸಿಮನಿ, ಶರಣಮ್ಮ ಸೇಡಂ, ಮಹಾದೇವಿ ಸೇಡಂ, ಮಹಾದೇವಿ ಬೀರನಳ್ಳಿ, ಚಿದಾನಂದ ಬುಳ್ಳಾ, ವಿಜಯಲಕ್ಷ್ಮಿ, ಶಿವಶರಣಪ್ಪ ಪೂಜಾರಿ, ಮಹಾದೇವಿ, ವಿದ್ಯಾಶ್ರೀ ಡಾ. ವಿವೇಕನಂದ ಬುಳ್ಳಾ ಕಲಾವಿದರಿಂದ ಇಡಿ ರಾತ್ರಿ ಅನೇಕ ವಚನಗಳಿಂದ ಹಾಗೂ ಭಕ್ತಿ ಪದಗಳಿಂದ ಭಜನೆ ಮಾಡಿ ಜಾಗರಣೆ ಮಾಡಿದರು.

emedialine

Recent Posts

ಕಲಬುರಗಿ ಶಿಕ್ಷಣ ಫಲಿತಾಂಶ ಸುಧಾರಣೆಗೆ ತಜ್ಞರ ಸಮಿತಿಯಿಂದ 3 ತಿಂಗಳಲ್ಲಿ ವರದಿ: ಡಾ.ಅಜಯ್ ಸಿಂಗ್

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಮಂಡಳಿ ಪಣ ತೊಟ್ಟಿದ್ದು, ಬರುವಂತಹ…

26 mins ago

ವಿವಿಧ ಅಭಿವೃಧ್ಧಿ ಕಾಮಗಾರಿಗಳಿಗೆ ಶಾಸಕ ಆರ್.ವಿ.ನಾಯಕ ಚಾಲನೆ

ಸುರಪುರ: ನಗರದಲ್ಲಿ ವಿವಿಧ ಅಭಿವೃಧ್ಧಿ ಕಾಮಗಾರಿಗಳಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ…

2 hours ago

ಸಂಸ್ಕøತಿ ಉಳಿಸಿ ಬೆಳೆಸುವ ಸಂಘದ ಕಾರ್ಯ ಶ್ಲಾಘನೀಯ

ಸುರಪುರ:ದೇಶದಲ್ಲಿ ಹಲವು ಸಂಸ್ಕøತಿಗಳು ಇರುತ್ತವೆ,ಅಂತಹ ಸಂಸ್ಕøತಿಗಳಲ್ಲಿ ಕನ್ನಡ ಮತ್ತು ಕರ್ನಾಟಕ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕಳೆದ 82 ವರ್ಷಗಳಿಂದ…

2 hours ago

ಸುರಪುರ:ಅಭಾವೀಲಿಂ ಮಹಾಸಭೆಗೆ ಪದಾಧಿಕಾರಿಗಳ ನೇಮಕ

ಸುರಪುರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸುರಪುರ ತಾಲೂಕ ನೂತನ ಘಟಕಕ್ಕೆ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ ಎಂದು ಮಹಾಸಭಾ ತಾಲೂಕ…

2 hours ago

ಕಲಬುರಗಿ ಪಾಲಿಕೆ ಉಪ ಆಯುಕ್ತರನ್ನು ಅಮಾನತುಗೊಳಿಸಲು ಶಾಸಕ ಬಿ.ಆರ್. ಪಾಟೀಲ ಆಗ್ರಹ

ಕಲಬುರಗಿ: ಮಹಾನಗರ ಪಾಲಿಕೆಯ ಅಧೀಕ್ಷಕ, ಅಭಿಯಂತರ ಹಾಗೂ ಉಪ ಆಯುಕ್ತ ಆರ್.ಪಿ. ಜಾಧವ ಅವರನ್ನು ಅಮಾತುಗೊಳಿಸಿ ಮನೆಗೆ ಕಳಿಸಬೇಕು ಎಂದು…

2 hours ago

ಅ.6 ರಂದು ಡಾ. ಲಕ್ಷ್ಮಣ ದಸ್ತಿಯವರಿಂದ 371 J ಕಲಂ ಸೌಲತ್ತುಗಳ ಬಗ್ಗೆ ವಿಶೇಷ ಉಪನ್ಯಾಸ

ಕಲಬುರಗಿ: 371ನೇ ಜೇ ಕಲಂ ಸೌಲತ್ತುಗಳ ಬಗ್ಗೆ ಡಾ. ಲಕ್ಷ್ಮಣ ದಸ್ತಿಯವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅಂಜುಮನ್ ಸಂಸ್ಥೆಯಿಂದ ಅ.6.…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420