ಸೇಡಂ ದಸರಾ ಉತ್ಸವದಲ್ಲಿಂದು ನಟಿ ಸಿತಾರಾ

ಸೇಡಂ; ಇಲ್ಲಿಯ ಶ್ರೀ ಪಂಚಲಿಂಗೇಶ್ವರ ದೇವಾಲಯದ್ಲಿ ನಡೆಯುತ್ತಿರುವ 43 ನೇ ವರ್ಷದ ದಸರಾ ಉತ್ಸವದಲ್ಲಿ ಅ. 10 ರಂದು ಗುರುವಾರ ಸಂಜೆ 7 ಕ್ಕೆ ಕಿರುತೆರೆ ಹಾಗೂ ಸಿನಿಮಾ ನಟಿ ಸಿತಾರಾ ಅವರು ಭಾಗವಹಿಸುವರು ಎಂದು ದೇವಾಲಯ ಕಮಿಟಿಯ ಕಾರ್ಯದರ್ಶಿ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಹಳೇ ಬಜಾರದಲ್ಲಿರುವ ಐತಿಹಾಸಿಕ ಚಾಲುಕ್ಯ ಕಾಲದ ದೇವಾಲಯದಲ್ಲಿ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಪ್ರತಿಭಾನ್ವಿತ ನಟಿ ಸಿತಾರಾ ಅವರನ್ನು ಸತ್ಕರಿಸಲಾಗುವುದು. 2005 ರಲ್ಲಿ ವಿಶ್ವವಿಖ್ಯಾತ ಹೆಗ್ಗೋಡಿನ ನೀನಾಸಂನಲ್ಲಿ ರಂಗ ತರಬೇತಿಯಾಗಿದ್ದು, 2011 ರಲ್ಲಿ ಡ್ಯಾನ್ಸ್ ವಿಭಾಗದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ.

ನೀನಾಸಂ ತಿರುಗಾಟದಲ್ಲಿ ನಾಲ್ಕು ವರ್ಷ ಅನುಭವ, ಎರಡು ವರ್ಷ ಡ್ಯಾನ್ಸ್ ವಿಭಾಗದಲ್ಲಿ ಕಾರ್ಪೋರೇಟ್ ಶೋಗಳನ್ನು ನೀಡಿದ್ದಾರೆ. 15 ಕಿರುಚಿತ್ರಗಳಲ್ಲಿ ನಟನೆ, 20 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಸಿತಾರಾ ಅವರು ಇದೂವರೆಗೆ ಏಳು ಪ್ರಶಸ್ತಿಗಳನ್ನು ಪಡೆದಿದ್ದು, ಅವುಗಳಲ್ಲಿ ಜೀ ಕನ್ನಡ ಚಾನೆಲ್ಲಿನಲ್ಲಿ ಎರಡು ಬಾರಿ ಬೆಸ್ಟ್ ಕಾಮಿಡಿಯನ್, ಉಡುಪಿ ರಂಗಭೂಮಿ ವತಿಯಿಂದ ಬೆಸ್ಟ್ ನಟಿ, ಇವಳೇ ವೀಣಾ ಪಾಣಿ ಎನ್ನುವ ಧಾರಾವಾಹಿಗೆ ಬೆಸ್ಟ್ ಆರ್ಟ್ ಡೈರೆಕ್ಟರ್, ಬೆಸ್ಟ್ ಕಾಸ್ಟ್ಯೂಮ್ ಡಿಸೈನರ್ ಪುರಸ್ಕಾರಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇಂತಹ ಪ್ರತಿಭಾವಂತ ಕಲಾವಿದೆ ಸಿತಾರಾ ಅವರನ್ನು ದಸರಾ ಉತ್ಸವದಲ್ಲಿ ಗೌರವಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ನಂತರ ಕಲಬುರಗಿಯ ಸುಕಿ ಸಾಂಸ್ಕøತಿಕ ಸಂಸ್ಥೆಯ ವತಿಯಿಂದ `ಸಂಗೀತ ರಸಸಂಜೆ’ ಕಾರ್ಯಕ್ರಮ ನಡೆಯಲಿದೆ. ಕಿರಣ್ ಪಾಟೀಲ, ಶರಣು ಪಟ್ಟಣಶೆಟ್ಟಿ, ಪ್ರಕಾಶ ದಂಡೋತಿ, ಕವಿರಾಜ್ ನಿಂಬಾಳ, ಮಹೇಶ ನಿಪ್ಪಾಣಿ ಹಾಗೂ ಸಿ.ಎಸ್.ಮಾಲಿಪಾಟೀಲ ಅವರು `ಗಾನ ಸುಧೆ’ ಕಾರ್ಯಕ್ರಮವನ್ನು ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

emedialine

Recent Posts

ಮಹಿಳೆಯರು ಸ್ವಾವಲಂಬಿಗಳಾಗಬೇಕು: ರೇಣುಕಾ

ಶಹಾಪುರ : ಧರ್ಮಸ್ಥಳ ಮಂಜುನಾಥ ಸಂಘದ ವತಿಯಿಂದ ಮಹಿಳೆಯರು ಸಾಲ ಪಡೆದು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಿ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು…

15 hours ago

ನಿಂತಿದ್ದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ: ಮೂವರ ಸಾವು

ವಾಡಿ: ನಿಂತಿದ್ದ ಟ್ರ್ಯಾಕ್ಟರ್ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳವಾರ ಸಂಜೆ ವಾಡಿ ಪೊಲೀಸ್ ಠಾಣೆ…

15 hours ago

ಮೊಹಮ್ಮದ್ ಪೈಗಂಬರ್ ಅವಹೇಳನ: ಯತಿ ನರಸಿಂಹಾನಂದ ಸ್ವಾಮಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಸೇಡಂ; ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ ಯತಿ ನರಸಿಂಹಾನಂದ ಸರಸ್ವತಿ ಸ್ವಾಮೀಜಿಗಳ ವಿರುದ್ಧ ಹಾಗೂ ಪ್ರಚೋದನ ಕಾರಿ ಹೇಳಿಕೆ ನೀಡಿರುವ…

15 hours ago

ದಕ್ಷ ಅಧಿಕಾರಿಗಳಿಗೆ ಮಣಿಕಂಠ ರಾಠೋಡ ಕಿರುಕುಳ

ಚಿತ್ತಾಪುರ; ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ವಿಧಾನಸಭೆ ಬಿಜೆಪಿ ಪರಾಜಿತ ಅಭ್ಯರ್ಥಿ ಮಣಿಕಂಠ ರಾಠೋಡ ಕಿರುಕುಳ, ಬ್ಲ್ಯಾಕ್…

16 hours ago

ದಸರಾ ಹಬ್ಬದ ನಿಮಿತ್ತ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ: ಸೇಡಂ ರಸ್ತೆಯಲ್ಲಿರುವ ಶ್ರೀ ಇಂಗುಲಾಂಬಿಕ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ದಸರಾ ಹಬ್ಬದ ನಿಮಿತ್ತ…

16 hours ago

ಈಜು ಸ್ಪರ್ಧೆಯಲ್ಲಿ ಡಾ.ಮಲ್ಲಿಕಾರ್ಜುನ ಚಿಕ್ಕಪಾಟೀಲ ದ್ವಿತೀಯ ಸ್ಥಾನ

ಕಲಬುರಗಿ: ಕರ್ನಾಟಕ ರಾಜ್ಯ ಈಜು ಸಂಸ್ಥೆ ಆಯೋಜಿಸಿದ್ದ ಈಜು ಸ್ಪರ್ಧೆಯಲ್ಲಿ ಹೆಚ್- ಗುಂಪಿನಲ್ಲಿ ಕಲಬುರಗಿಯ ಅಕ್ವಾ ಅಸೋಸಿಯೇಷನ್ ನ ಸದಸ್ಯರು…

16 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420