ಪಕ್ಕಾಸೋಷಲಿಸ್ಟ್ ಮ್ಯಾನ್ ವೈಜನಾಥ ಪಾಟೀಲ: ದಯಾನಂದರಾವ

  • ದಯಾನಂದರಾವ್ ವಕೀಲರು, ಹುಮನಾಬಾದ್
“ಪಾಟೀಲರು ನಮ್ಮ ದೇಶದ ಪುರಾಣಗಳಲ್ಲಿ ಬರುವ ದದೀಚಿ ಋಷಿ ಇದ್ದ ಹಾಗೆ. ಒಮ್ಮೆ ದೇವರು ಮತ್ತು ದಾನವರು(ರಾಕ್ಷಸರ) ಮಧ್ಯೆ ಯುದ್ದ ನಡೆಯುವ ಪ್ರಸಂಗ ಬಂದಾಗ ಬೃಹಸ್ಪತಿ ಏನು ಹೇಳಿದ ಎಂದರೆ ದಾನವರು ಬಹಳ ಶಕ್ತಿವಂತರಾಗಿದ್ದು ಅವರನ್ನು ನೀವು ನಿಮ್ಮಲ್ಲಿರುವ ಶಸ್ತ್ರಾಸ್ತಗಳಿಂದ ಯುದ್ದ ಮಾಡಿ ಸೋಲಿಸಲು ಹೋದರೆ ನೀವು ಯಶಸ್ವಿಯಾಗುವುದಿಲ್ಲ.
ನೀವು ಅವರನ್ನು ಸಂಹಾರ ಮಾಡಬೇಕೆಂದರೆ ಯಾವುದಾದರೂ ಋಷಿಯ ದೇಹದ ಮೂಳೆಯಿಂದ ಬಾಣಮಾಡಿ ಅವುಗಳಿಂದ ನೀವು ದಾನವರಿಗೆ ಹೊಡೆದರೆ ಅವರು ಸಂಹಾರವಾಗುತ್ತಾರೆ. ಆಗ ದೇವರು ಅನೇಕ ಋಷಿಗಳನ್ನು ಭೇಟಿಯಾಗಿ ಅವರಿಗೆ ತಮ್ಮ ದೇಹವನ್ನು ತ್ಯಾಗಮಾಡಲು ಕೋರಿದಾಗ ನಾ ಒಲ್ಲೆ ನಾ ಒಲ್ಲೆ ಎಂದು ದೂರ ಸರಿಯುತ್ತಾರೆ. ಕೊನೆಗೆ ದದೀಚಿ ಋಷಿ ತನ್ನ ದೇಹವನ್ನು ತ್ಯಾಗಮಾಡಲು ಸಜ್ಜಾಗುತ್ತಾನೆ ಮತ್ತು ತ್ಯಾಗಮಾಡುತ್ತಾನೆ. ಇರದ ಪರಿಣಾಮವಾಗಿ ದೇವರು ದಾನವರ ವಿರುದ್ಧ ಜಯ ಗಳಿಸುತ್ತಾರೆ. ವೈಜನಾಥ ಆ ದದೀಚಿ ಋಷಿ ತರಹ. ಸಮಾಜದಲ್ಲಿ ಯಾವಾಗ ಯಾವಾಗ ಕೆಟ್ಟ ದಾನವರು ಬೆಳೆದಿದ್ದಾರೆ ಆಗ ಅವರ ಸಂಹಾರ ಮಾಡಲಿಕ್ಕೆ ನಾನು ನನ್ನ ದೇಹವನ್ನು ತ್ಯಾಗ ಮಾಡುತ್ತೇನೆ ಎಂದು ಮುಂದಾಗುವ ಸ್ವಭಾವದವರು ವೈಜನಾಥ.
ಯಾವುದೇ ಕೆಲಸಕ್ಕೆ ತನ್ನ ಕಿಸೆಯಿಂದ ಖರ್ಚುಮಾಡಲು ಹಿಂದೇಟು ಹಾಕಿದವರಲ್ಲ. ತನ್ನಲ್ಲಿ ಎಷ್ಟು ರೊಕ್ಕ ಇದೆ ಅದು ಖರ್ಚಾಗುವ ತನಕ ಖರ್ಚುಮಾಡುತ್ತಾ ಹೋಗುವ ಸ್ವಭಾವದವರು ಅವರು. ಎಲ್ಲಾ ಖಾಲಿಯಾದ ಮೇಲೆ ಮೇರೆ ಪಾಸ್ ಪೈಸೆ ನಹಿ ಹೈ ಇಸ್ಕಿ ಮಾಕಿ ಕ್ಯಾ ಕರ‍್ನಾ?(ನನ್ನ ಹತ್ರ ರೊಕ್ಕ ಇಲ್ಲಾ, ಅವನವ್ವನ ಏನ್ ಮಾಡ್ಬೇಕು?) ಹಮಾರ ಪೆನ್ಷನ್ ಮೆ ಕುಚ್ ಹೈ ಕೀ ಯಾ ನಹೀ ಕೀ ದೇಖೇಂಗೆ( ಏನಾದರೂ ಪೆನ್ಷನ್ ನಿಂದ ಬಂದ ಹಣ ಏನದ್ರೂ ಉಳಿದದೇನು ನೋಡೋಣ) ಎಂದು ಕೇಳಿ ಅದು ಇದ್ದರೆ ಅದನ್ನೂ ಕೂಡ ಖರ್ಚು ಮಾಡಿಬಿಡೋರು. ಔರೊಂಕೇಲಿಯೇ ಜೀನೇಮೇಬೀ ಕುಚ್ ಸಂಸ್ಕೃತಿ ಹೈ, ಓ ಸಬ್ ಸೇ ಬಡೀ ಸಂಸ್ಕೃತಿ ಹೈ (ಬೇರೆಯರ ಏಳಿಗೆಗಾಗಿ ತನ್ನ ಜೀವನವನ್ನು ಮುಡಿಪಾಗಿಡುವುದು ಸಂಸ್ಕೃತಿ ಇದೆ, ಅದು ಬಹು ದೊಡ್ಡ ಸಂಸ್ಕೃತಿ ಇದೆ).
ಇದು ವೈಜನಾಥ ಅವರು ಬದುಕಿ-ಬಾಳಿದ ರೀತಿ”.ಸದಾ ಒಂದಲ್ಲಾ ಮತ್ತೊಂದು ಹೋರಾಟದಲ್ಲಿ ತಲ್ಲೀನರಾಗಿರುತಿದ್ದ ಪಾಟೀಲರಿಗೆ ಪುಸ್ತಕ ಓದುವ ಹವ್ಯಾಸದ ಜೊತೆಗೆ ಹಳೇ ಹಿಂದಿ ಹಾಡುಗಳನ್ನು ಕೇಳುವುದೆಂದರೆ ತುಂಬಾ ಇಷ್ಟ. ಸಾಮಾನ್ಯವಾಗಿ ಅವರು ಲೋಹಿಯಾ, ಮಧು ಲಿಮೆ ಮತ್ತಿತರರು ಬರೆದ ಸೋಷಿಯಾಲಿಸ್ಟ್ ಪುಸ್ತಕಗಳನ್ನು ಓದುತಿದ್ದರು. ಅಲ್ಲದೆ ಅವರಿಗೆ ಮುಖೇಶ ಅವರ ಹಾಡುಗಳನ್ನು ಆಲಿಸುವುದೆಂದರೆ ಬಹಳ ಇಷ್ಟವಾಗಿತ್ತು.
emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

6 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420