ಕಲಬುರಗಿ: ಶ್ರೀ ಹಾಣಗಲ್ಲ ಶಿವಯೋಗಿಗಳು ಸ್ಥಾಪಿಸಿರುವ ಅಖಿಲ ಭಾರತ ವೀರಶೈವ ಮಹಾಸಭೆಗೆ ಶಿವಾಚಾರ್ಯರನ್ನು ಗೌರವ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಮಹಾಸಭೆಯ ಮಂಜುನಾಥ ಅಂಕಲಗಿ ಹಾಗೂ ಮಹಾಸಭೆಯ ಸದಸ್ಯರು ಇಂದು ನಗರದ ಸರ್ದಾರ ವಲ್ಲಭಾಬಾಯಿ ಪಟೇಲ್ ಸರ್ಕಲ್ನಲ್ಲಿರುವ ಅಂಚೆ ಪೆಟ್ಟಿಗೆಯ ಮುಖಾಂತರ ರಾಷ್ಟ್ರೀಯ ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಬರೆದ ಪತ್ರಗಳನ್ನು ರವಾನಿಸುವ ಮೂಲಕ ಒತ್ತಾಯಿಸಿದರು.
ರಾಜಕಾರಣಿಗಳಿಂದ ಮಹಾಸಭೆ ತುಂಬಿ ಹೋಗಿದೆ ಎನ್ನುವ ಮತ್ತು ವೃದ್ದರ ಆಶ್ರಮವಾಗಿದೆ ಎನ್ನುವ ಮಾತಿಗೆ ಅಂತ್ಯಹಾಡಿ ಮಹಾಸಭೆ ಜಾಗೃತವಾಗಿದೆ ಶಿವಾಚಾರ್ಯರು ಯುವಕರ ತಂಡಕ್ಕೆ ಹೇಚ್ಚಿನ ಆಧ್ಯತೆ ನೀಡುತ್ತೇವೆ ಎನ್ನುವ ಸಂದೇಶ ರವಾನಿಸಬೇಕು ಎಂದು ತಿಳಿಸಿದರು.
ಗೌರವ ಅಧ್ಯಕ್ಷರನ್ನಾಗಿ ಶಿವಾಚಾರ್ಯರನ್ನು ನೇಮಕ ಮಾಡುವಲ್ಲಿ ನೀರ್ಲಕ್ಷ ಮಾಡಿದರೆ ಕಲಬುರಗಿ ಮಹಾಸಭೆ ಕಛೇರಿಯಿಂದ ಬೆಂಗಳೂರಿನ ಪ್ರಧಾನ ಕಛೇರಿಯವರಿಗೆ ಪಾದಾಯಾತ್ರೆ ಮಾಡಬೇಕಾಗುತ್ತದೆ ಎಂದು ಈ ಸಂದರ್ಭದಲ್ಲಿ ಸದಸ್ಯರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ತಾತಾಗೌಡ ಪಾಟೀಲ, ಗುರುರಾಜ ಅಂಬಾಡಿ, ಶಿವಲಿಂಗಯ್ಯ ಸ್ವಾಮಿ, ಫಕಿರಯ್ಯ ಸ್ವಾಮಿ, ಮಹೇಶ ಕೆಂಭಾವಿ, ವಿಶ್ವಾನಾಥ, ಶರಣುವಾಡಿ, ರವಿ ಅವಂಟಿ ಇನ್ನಿತರರು ಭಾಗವಹಿಸಿದರು.
ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ಇಂದು ಬೆಳಗ್ಗೆ ವಾಕಿಂಗ್ ಹೋದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಲಬುರಗಿ ನಗರದ ಜೇವರ್ಗಿ…
ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…
ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…
ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…
ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…
ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…