ಮಹಾಸಭೆ ಜಿಲ್ಲಾ ಗೌರವ ಅಧ್ಯಕ್ಷ ಸ್ಥಾನ ಶಿವಾಚಾರ್ಯರಿಗೆ ನೇಮಕ ಮಾಡಲು ನೀಡಲು ಪತ್ರ ಚಳುವಳಿ

0
23

ಕಲಬುರಗಿ: ಶ್ರೀ ಹಾಣಗಲ್ಲ ಶಿವಯೋಗಿಗಳು ಸ್ಥಾಪಿಸಿರುವ ಅಖಿಲ ಭಾರತ ವೀರಶೈವ ಮಹಾಸಭೆಗೆ ಶಿವಾಚಾರ್ಯರನ್ನು ಗೌರವ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಮಹಾಸಭೆಯ ಮಂಜುನಾಥ ಅಂಕಲಗಿ ಹಾಗೂ ಮಹಾಸಭೆಯ ಸದಸ್ಯರು ಇಂದು ನಗರದ ಸರ್ದಾರ ವಲ್ಲಭಾಬಾಯಿ ಪಟೇಲ್ ಸರ್ಕಲ್‌ನಲ್ಲಿರುವ ಅಂಚೆ ಪೆಟ್ಟಿಗೆಯ ಮುಖಾಂತರ ರಾಷ್ಟ್ರೀಯ ಅಧ್ಯಕ್ಷರಿಗೆ ಮತ್ತು ಪದಾಧಿಕಾರಿಗಳಿಗೆ ಬರೆದ ಪತ್ರಗಳನ್ನು ರವಾನಿಸುವ ಮೂಲಕ ಒತ್ತಾಯಿಸಿದರು.

ರಾಜಕಾರಣಿಗಳಿಂದ ಮಹಾಸಭೆ ತುಂಬಿ ಹೋಗಿದೆ ಎನ್ನುವ ಮತ್ತು ವೃದ್ದರ  ಆಶ್ರಮವಾಗಿದೆ ಎನ್ನುವ ಮಾತಿಗೆ ಅಂತ್ಯಹಾಡಿ ಮಹಾಸಭೆ ಜಾಗೃತವಾಗಿದೆ ಶಿವಾಚಾರ್ಯರು ಯುವಕರ ತಂಡಕ್ಕೆ ಹೇಚ್ಚಿನ ಆಧ್ಯತೆ ನೀಡುತ್ತೇವೆ ಎನ್ನುವ ಸಂದೇಶ ರವಾನಿಸಬೇಕು ಎಂದು ತಿಳಿಸಿದರು.

Contact Your\'s Advertisement; 9902492681

ಗೌರವ ಅಧ್ಯಕ್ಷರನ್ನಾಗಿ ಶಿವಾಚಾರ್ಯರನ್ನು ನೇಮಕ ಮಾಡುವಲ್ಲಿ ನೀರ್ಲಕ್ಷ ಮಾಡಿದರೆ ಕಲಬುರಗಿ ಮಹಾಸಭೆ ಕಛೇರಿಯಿಂದ ಬೆಂಗಳೂರಿನ ಪ್ರಧಾನ ಕಛೇರಿಯವರಿಗೆ ಪಾದಾಯಾತ್ರೆ ಮಾಡಬೇಕಾಗುತ್ತದೆ ಎಂದು ಈ ಸಂದರ್ಭದಲ್ಲಿ ಸದಸ್ಯರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಾತಾಗೌಡ ಪಾಟೀಲ, ಗುರುರಾಜ ಅಂಬಾಡಿ, ಶಿವಲಿಂಗಯ್ಯ ಸ್ವಾಮಿ, ಫಕಿರಯ್ಯ ಸ್ವಾಮಿ, ಮಹೇಶ ಕೆಂಭಾವಿ, ವಿಶ್ವಾನಾಥ, ಶರಣುವಾಡಿ, ರವಿ ಅವಂಟಿ ಇನ್ನಿತರರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here