ಕಲಬುರಗಿ: ಮುಢನಂಬಿಕೆಗಳೆಂಬ ಪೆಡಂಬೂತಕ್ಕೆ ಶರಣರ ವಚನಗಳೇ ಮಂತ್ರದಂಡಗಳಾಗಲಿವೆ. ಇಂದಿನ ಆಧುನಿಕ ಯುಗದಲ್ಲಿಯೂ ಅನೇಕರು ಮೂಢನಂಬಿಕೆಗಳಿಗೆ ಜೋತು ಬೀಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಎಂದು ಹೇಳಿದರು.
ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಬೀದರ ಜಿಲ್ಲೆಯ ಹುಮನಾಬಾದ ಪಟ್ಟಣದ ಗೃಹ ನಿರ್ಮಾಣ ಸಹಕಾರ ಸಂಘದ ಕಲ್ಯಾಣ ಮಂಟಪದಲ್ಲಿ ರವಿವಾರ ನಡೆದ ‘ಬಸವಜ್ಯೋತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಅನುಭಾವ ನೀಡಿದ ಅವರು, ಶರಣರು ಕಾಯಕಕ್ಕೆ ಮೊದಲ ಆದ್ಯತೆ ನೀಡಿದ್ದರು. ಮನಶುದ್ಧತೆ ಅಳವಡಿಸಿಕೊಂಡು ಸಮಾಜಾಭಿವೃದ್ಧಿಗೆ ಶ್ರಮಿಸಿದ ಪ್ರಪಂಚದ ಪ್ರಜಾಪ್ರಭುತ್ವದ ಪಾಠವನ್ನೂ ಶರಣರು ಹೇಳಿಕೊಟ್ಟಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಬೀದರಿನ ಲಿಂಗಾಯತ ಮಹಾಮಠದ ಪೂಜ್ಯ ಶ್ರಿ ಅಕ್ಕ ಅನ್ನಪೂರ್ಣ ಅವರು, ನಮ್ಮ ನೆಲದ ಸಾಂಸ್ಕೃತಿಕ ಸಂಪತ್ತು ವಚನ ಚಳವಳಿ. ಮನಕುಲದ ಕೊಳೆ ತೊಳೆದು ಜಾತೀಯತೆ, ಮೂಢನಂಬಿಕೆ, ಅಜ್ಞಾನದ ಕತ್ತಲೆಯನ್ನು ವಚನ ದೀಪ್ತಿಯಿಂದ ಬೆಳಗಿದವರು ಕಲ್ಯಾಣದ ಶರಣರು. ಇಂಥ ಶರಣರ ತಾತ್ವಿಕ ಚಿಂತನೆಯನ್ನು ಜನತೆಗೆ ಮುಟ್ಟಿಸುವ ಅಗತ್ಯವಿದೆ ಎಂದು ನುಡಿದರು.
ಪ್ರಗತಿಪರ ರೈತ ಕಾಶಿನಾಥ ಧಾನಾ ಸಮಾರಂಭ ಉದ್ಘಾಟಿಸಿದರು. ಪ್ರಮುಖರಾದ ಶರಣಪ್ಪ ಪಾಟೀಲ ಬೆಳಕೇರಾ, ಸುಭಾಶ ವಾರದ, ಕಲ್ಲಪ್ಪಾ ಮಾಶೆಟ್ಟಿ ಹುಡಗಿ, ಮಲ್ಲಿಕಾರ್ಜುನ ರಾಚಯ್ಯಾ ಸ್ವಾಮಿ ಸಂಗಮಕರ್, ಬಿ.ಎನ್.ಬಾಳೆ, ರವೀಂದ್ರ ಕೋಳಕೂರ, ಬಾಬುರಾವ ಪಾಟೀಲ, ಬಾಬುರಾವ ಮಾಳಿ, ಡಾ.ಸೋಮನಾಥ ಯಾಳವಾರ, ಡಾ.ಎಸ್.ಆರ್.ಮಠಪತಿ, ಬಸವರಾಜ ರುದ್ರವಾಡಿ ವೇದಿಕೆ ಮೇಲಿದ್ದರು. ಶರಣ ಚಿಂತಕಿ ಶೋಭಾ ಔರಾದೆ ಅಧ್ಯಕ್ಷತೆ ವಹಿಸಿದ್ದರು.
ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…
ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…
ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…
ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…
ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…
ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…